ಅಮವಾಸ್ಯೆಯ ಸೆರಗು ಮುಸ್ಸಂಜೆ
ವಿಮಾನ ಏರುವುದು ಸಮುದ್ರ ದಾಟುವುದು
ಬೇಡವೇ ಬೇಡ
ಸಂಪ್ರದಾಯದ ಅಮ್ಮನ ಸಂಕಟ ಒಳಗೊಳಗೆ-
ವೀಸಾದ ಕೊನೆಯ ದಿನಾಂಕ
ನೋಡು ಅಮ್ಮ ಹೊರಡಲೇಬೇಕು
ಹೊಸ್ತಿಲಿನ ಮೇಲಿರುವ
ನನ್ನ ಅಸಹಾಯಕತೆ-
ಅಪ್ಪನ ಧೈರ್ಯದ ಮಾತುಗಳು
ಎರುಡು ದಿನಗಳಿಂದ ನನ್ನವನ ಸಮುದ್ರದಬ್ಬರ
ಒಂದೇ ಸಮನೆ ಫೋನಕಾಲ್ಸ್
ಪಾಸ್ಪೋರ್ಟ್ ಟಿಕೇಟ್ ಸರಿಯಾಗಿಟ್ಟುಕೊ
ಏರ್ಪೋರ್ಟ ಟ್ಯಾಕ್ಸ್ಗೆ ದುಡ್ಡುಕಟ್ಟಬೇಕು
ಸೂಟ್ ಕೇಸಿಗೆ ಮೂವತ್ತೇ ಕೆ.ಜಿ ಸಾಮಾನು
ಹೆಚ್ಚಾದುದು ಹೆಗಲಿಗೇರಿಸಬೇಡ
ಮಗುವಿಗೆ ಬೆಚ್ಚನೆಯ ಉಡುಪು
ನಿನಗೊಂದು ಸ್ವೆಟ್ಟರ್ ಮಾತ್ರ
ಎಮರ್ಜನ್ಸಿಗೆ ಬಗಲಚೀಲದಲ್ಲಿರಲಿ,
ಟ್ರಾನ್ಸಿಟ್ ಇದೆ ತುಂಬಾಚಳಿ-
ಭಾರವಾದರೂ ಮಗುವನ್ನು ಎತ್ತಿಕೊಂಡೇ ಇರು
ವಿಂಡೋ ಸೀಟು
ಸಾಧ್ಯವಾದಷ್ಟು ಆಕಾಶ ಸಮುದ್ರ ನೋಡು
ಓ.ಕೆ ಹ್ಯಾಪಿಜರ್ನಿ—ಕಟ್
ಮಗುವಿಗೆ ಡೈಫರ್ ಹಾಕಿ
ಅಮ್ಮನ ಕಾಲು ಬಿದ್ದು ಹೊರಟ ಕ್ಷಣ
ಕಣ್ತುಂಬ ನೀರು ಕಾಣದಂತೆ ಒರೆಸಿ
ಮುಗುಳ್ನಕ್ಕು ಕೈ ಬೀಸಿದೆ…..
೩೧-೧೨-೧೯೭೯
*****
Related Post
ಸಣ್ಣ ಕತೆ
-
ದಿನಚರಿಯ ಪುಟದಿಂದ
ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್ಪ್ರೆಸ್ ಬಸ್ಸುಗಳು… Read more…
-
ಕೇರೀಜಂ…
ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…
-
ಬೂಬೂನ ಬಾಳು
ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…
-
ರಾಧೆಯ ಸ್ವಗತ
ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…
-
ಬಸವನ ನಾಡಿನಲಿ
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…