Home / ಕವನ / ಕವಿತೆ / ಈ ರಸ್ತೆಗಳೇಕೆ ಹೀಗೆ?

ಈ ರಸ್ತೆಗಳೇಕೆ ಹೀಗೆ?

ಹಿಂದೆ
ನಮ್ಮ ಮುತ್ತಾತನವರ ಕಾಲಕ್ಕೆ
ಈ ರಸ್ತೆಗಳು
ಕಾಡಿನಲ್ಲಿ ಕಳೆದು ಹೋಗುತ್ತಿದ್ದವು
ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು
ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು
ನಡೆವವರ ಎಡ ಬಲಕು
ಹಸಿರು, ಹೂವು
ಗರಿಕೆ ಹುಲ್ಲು ಮಾತನಾಡುತ್ತಿದ್ದವು
ದಣಿವು ನೀಗುತ್ತಿದ್ದವು

ಮೊನ್ನೆ
ನಮ್ಮ ಅಪ್ಪನ ಕಾಲಕ್ಕೆ
ಈ ರಸ್ತೆಗಳು
ಊರಿಂದ ಊರಿಗೆ
ಪೇಟೆಯಿಂದ ಪೇಟೆಗೆ
ಮನೆಯಿಂದ ಮನೆಗೆ
ಬೀದಿಗಳಿಗೆ
ಹಾಗೆ ಹೊಲಗಳಿಗೆ
ಗೆರೆ ಎಳೆಯುತ್ತಿದ್ದವು
ಮುಳ್ಳು ಚುಚ್ಚಿ
ರಕ್ತ ಸೋರಿದರೆ
ಹೆಜ್ಜೆಗಳು
ಸಿಂಗರಿಸಿಕೊಂಡು ನಗುತ್ತಿದ್ದವು

ಈಗ
ಈ ರಸ್ತೆಗಳು ಬಂಡಾಯವೆದ್ದಿವೆ
ಹೊದಿಸಿದ್ದ ಬಟ್ಟೆ ಕಳಚಿ
ಬೆತ್ತಲಾಗಿವೆ
ಹಗಲನ್ನು ಕುಡಿದು
ಹೊಸ ಹೆಸರುಗಳ ತಡಕುತ್ತಿವೆ
ಹಳೆಯ ದಾರಿಗಳು ಎದುರಾದರೆ
ಗಬಕ್ಕನೆ ಹಿಡಿದು
ನುಂಗಿ
ಬಾಯಿ ಚಪ್ಪರಿಸುತ್ತಿವೆ
‘ರಸ್ತೆಗಳು ಹೀಗೇಕೆ
ಕರಿ ನಾಗರಗಳಂತೆ ತಳುಕು ಹಾಕಿಕೊಂಡಿವೆ?’
ಎಂದು ಪಶ್ನಿಸಿದರೆ
ನಾಲ್ಕು ದಿಕ್ಕಿಗೆ ಮೈ
ಚಾಚಿಕೊಂಡ ಕೈ ಮರಗಳು
ಮುಖ ಮೇಲೆ ಮಾಡಿ
ಗೋಳೋ ಎಂದು ಅಳುತ್ತವೆ
ಸೂರ್ಯ ಹೆದರಿ
ಮೋಡಗಳಲ್ಲಿ ಅವಿತುಕೊಳ್ಳುತ್ತಾನೆ

ಕಾರಿರುಳ ಸ್ಮಶಾನದಲಿ
ಉರಿಯುವ ಹೆಣವೊಂದು
ಕುರುಡನಿಗೆ ದಾರಿ ತೋರಿಸಲು
ಕಂದೀಲು ಹಿಡಿದು ನಿಂತಿದೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...