Home / ಕವನ / ಕವಿತೆ / ಈ ರಸ್ತೆಗಳೇಕೆ ಹೀಗೆ?

ಈ ರಸ್ತೆಗಳೇಕೆ ಹೀಗೆ?

ಹಿಂದೆ
ನಮ್ಮ ಮುತ್ತಾತನವರ ಕಾಲಕ್ಕೆ
ಈ ರಸ್ತೆಗಳು
ಕಾಡಿನಲ್ಲಿ ಕಳೆದು ಹೋಗುತ್ತಿದ್ದವು
ಬೆಟ್ಟಗಳಲ್ಲಿ ಮರೆಯಾಗುತ್ತಿದ್ದವು
ನಕ್ಷತ್ರಗಳಿಗೂ ಕೈ ಚಾಚುತ್ತಿದ್ದವು
ನಡೆವವರ ಎಡ ಬಲಕು
ಹಸಿರು, ಹೂವು
ಗರಿಕೆ ಹುಲ್ಲು ಮಾತನಾಡುತ್ತಿದ್ದವು
ದಣಿವು ನೀಗುತ್ತಿದ್ದವು

ಮೊನ್ನೆ
ನಮ್ಮ ಅಪ್ಪನ ಕಾಲಕ್ಕೆ
ಈ ರಸ್ತೆಗಳು
ಊರಿಂದ ಊರಿಗೆ
ಪೇಟೆಯಿಂದ ಪೇಟೆಗೆ
ಮನೆಯಿಂದ ಮನೆಗೆ
ಬೀದಿಗಳಿಗೆ
ಹಾಗೆ ಹೊಲಗಳಿಗೆ
ಗೆರೆ ಎಳೆಯುತ್ತಿದ್ದವು
ಮುಳ್ಳು ಚುಚ್ಚಿ
ರಕ್ತ ಸೋರಿದರೆ
ಹೆಜ್ಜೆಗಳು
ಸಿಂಗರಿಸಿಕೊಂಡು ನಗುತ್ತಿದ್ದವು

ಈಗ
ಈ ರಸ್ತೆಗಳು ಬಂಡಾಯವೆದ್ದಿವೆ
ಹೊದಿಸಿದ್ದ ಬಟ್ಟೆ ಕಳಚಿ
ಬೆತ್ತಲಾಗಿವೆ
ಹಗಲನ್ನು ಕುಡಿದು
ಹೊಸ ಹೆಸರುಗಳ ತಡಕುತ್ತಿವೆ
ಹಳೆಯ ದಾರಿಗಳು ಎದುರಾದರೆ
ಗಬಕ್ಕನೆ ಹಿಡಿದು
ನುಂಗಿ
ಬಾಯಿ ಚಪ್ಪರಿಸುತ್ತಿವೆ
‘ರಸ್ತೆಗಳು ಹೀಗೇಕೆ
ಕರಿ ನಾಗರಗಳಂತೆ ತಳುಕು ಹಾಕಿಕೊಂಡಿವೆ?’
ಎಂದು ಪಶ್ನಿಸಿದರೆ
ನಾಲ್ಕು ದಿಕ್ಕಿಗೆ ಮೈ
ಚಾಚಿಕೊಂಡ ಕೈ ಮರಗಳು
ಮುಖ ಮೇಲೆ ಮಾಡಿ
ಗೋಳೋ ಎಂದು ಅಳುತ್ತವೆ
ಸೂರ್ಯ ಹೆದರಿ
ಮೋಡಗಳಲ್ಲಿ ಅವಿತುಕೊಳ್ಳುತ್ತಾನೆ

ಕಾರಿರುಳ ಸ್ಮಶಾನದಲಿ
ಉರಿಯುವ ಹೆಣವೊಂದು
ಕುರುಡನಿಗೆ ದಾರಿ ತೋರಿಸಲು
ಕಂದೀಲು ಹಿಡಿದು ನಿಂತಿದೆ
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...