ಕಗ್ಗತ್ತಲೆಯ ಗೂಡುದಾಟಿ
ಹೊನ್ನ ಹುಡಿಯನೊದ್ದು
ಬೆಳ್ಳಿರಥ ಏರಿಬರುತಿಹನು ಸೂರ್ಯ
ಶರಣು ದೇವದೇವೊತ್ತಮಾ
ಜೀವಕೋಟಿಗಳಿಗೆ ಉಸಿರಿಗೆ ಉಸಿರು
ನೆಲದಾಳಕೆ ಬೇರು ಬಿಡಿಸಿ
ಆಕಾಶದಗಲಕೆ ಚಿಗುರುಹೊಮ್ಮಿಸಿ
ತೋಳ್ತೆಕ್ಕೆಯೊಳು ಎಲ್ಲರ ಬಳಸುತ
ಏರುತಿಹನು ಏರುತಿಹನು
ಆಕಾಶದೆತ್ತರಕೆ
ಬರುತಿಹನು ಬರುತಿಹನು
ನಮ್ಮೆದೆಯ ಅಂತರಂಗದಾಳದೊಳಕೆ
ಶರಣು ಶರಣು ದೇವದೇವೊತ್ತಮಾ.
*****
Latest posts by ಲತಾ ಗುತ್ತಿ (see all)
- ತಲೆದಿಂಬು - December 28, 2020
- ಟಚ್ - December 21, 2020
- ದೇವರಾಣೆ ಮಾಡಿ? - December 14, 2020