ಕಾರುಣ್ಯ

ಹಸಿರು ತುಂಬಿದ ಒಂದು ಮರ. ಅದರ ಪಕ್ಕದಲ್ಲಿ ಮತ್ತೊಂದು ಬೋಳು ಮರ. ಎರಡೂ ಒಂದನ್ನೊಂದು ನೋಡುತಿದ್ದವು. ಬೋಳು ಮರವನ್ನು ನೋಡಿ ಹಸಿರು ಮರ ಮರುಕಗೊಂಡು ಹೇಳಿತು.

“ನಗ್ನವಾಗಿರುವ ನಿನ್ನ ನಾ ನೋಡಲಾರೆ. ನನ್ನ ಹಸಿರು ಅಂಗಿ ನಿನಗೆ ಕೊಡುವೆ”, ಎಂದಿತು.

ಗೆಳತಿ! “ನೀ ಹಸುರು ಅಂಗಿ ನನಗೆ ಕೊಟ್ಟರೆ ನಿನ್ನ ನಗ್ನ ನರಳುವಿಕೆಯನ್ನು ನಾ ತಾಳಲಾರೆ” ಎಂದಿತು ಬೋಳು ಮರ.

“ಬೋಳು ಮರ! ನಿನ್ನ ಒಡಲಿಗೆ ನಾನು ನಕ್ಷತ್ರದ ಹೂವು ಉದರಿಸುವ” ಎಂದಿತು, ಕೇಳಿಸಿಕೊಂಡ ಆಗಸ. ಅಷ್ಟು ದೂರದಲ್ಲಿ ಇರುವ ನಿನಗೆ ನಮ್ಮ ಗೋಳು ಹೇಗೆ ಮುಟ್ಟಿತು?”

“ಕಾರುಣ್ಯದ ದೃಷ್ಟಿಗೆ ದೂರವೇನು, ಹತ್ತಿರವೇನು?” ಎಂದಿತು ಕಣ್ಣೀರ ಹನಿಸಿ ಆಗಸ. “ಮರುಗುವ ಎದೆಗೆ ಮಾರ್‍ನುಡಿಯಲು ಎದೆಮಿಡಿತ ಸಾಲದೇ?” ಎಂದಿತು ಆಗಸ.

ಮರಗಳ ಮೈತುಂಬಾ ನಕ್ಷತ್ರ ನಕ್ಕಾಗ ಆನಂದ ಆಶೀರ್‍ವಾದವಾಯಿತು. ನಕ್ಷತ್ರ ತುಂಬಿದ ಬೋಳುಮರವನ್ನು ನೋಡಿ ಹರ್‍ಷದಿಂದ ಹಸಿರು ಮರ ಪುಲಕಗೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರ ಚಿತ್ತ ವ್ಯರ್‍ಥವಲ್ಲವೇ? ಸುರೆ ಪಿತ್ತವೇರಿದರೆ?
Next post ಅಗಸ್ತ್ಯ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys