ಮೈಯೊಳಗಿನ ಮಣ್ಣು

ಮೈಯೊಳಗಿನ ಮಣ್ಣು ಆಡಿಸುವುದು ನನ್ನ
ಮೈಯೊಳಗಿನ ಗಾಳಿ ಹಾಡಿಸುವುದು ನನ್ನ
ಜಲ ಆಗಸ ಬೆಂಕಿ, ಸಂಚು ಹೂಡಿ ಮಿಂಚಿ
ಕೂರಿಸುವುದು ಏಳಿಸುವುದು ಓಡಿಸುವುದು ನನ್ನ!

ಪೃಥ್ವಿ ಅಪ್ ತೇಜ ವಾಯು ಆಕಾಶವೆ, ತಾಳಿ
ಹದ ಮೀರದೆ ಕುದಿಕಾರದೆ ಪ್ರೀತಿಯಿಟ್ಟು ಆಳಿ;
ನೀವು ಕೊಟ್ಟ ಪಂಚರಂಗಿಯಲ್ಲಿ ನಿಂತ ನಾನು
ಬೇಡಿಕೊಳುವೆ ನಿಮ್ಮ ಹೀಗೆ ಕೇಳಲಿ ನೆಲ ಬಾನು

ನನ್ನೊಳಗಿನ ಜಲವೆಲ್ಲವು ಸೆಳವು ಕಳೆದು ಹರಿಯಲಿ
ತೇಜವೆಲ್ಲ ಉರಿಯನುಳಿದು ಬರೀ ಬೆಳಕ ಸುರಿಯಲಿ;
ಮಣ್ಣು ಬಣ್ಣ ನೀಗಲಿ, ಗಾಳಿ ದಾಳಿ ನಿಲಿಸಲಿ
ಆಕಾಶದ ತುಂಬ ಶಾಂತ ಬೆಳಕೊಂದೇ ಹರಡಲಿ

ನಾನೆನುವುದು ನೀನಾಗಲಿ, ನೀನೆನುವುದು ಅವನು
ತನ್ನೊಳಗೇ ವಿಶ್ವ ಅರಳಿ ಬೆಳಗಲಲ್ಲಿ ಭಾನು;
ತತ್ವಮಸಿ ತತ್ವಮಸಿ ಎಂಬ ಮಹಾವಾಕ್ಯ
ಅರಿವ ನುಂಗಿ ಮೂಡಲಿ ಅಲೌಕಿಕದ ಸೌಖ್ಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೫೭
Next post ಈ ರಸ್ತೆಗಳೇಕೆ ಹೀಗೆ?

ಸಣ್ಣ ಕತೆ

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…