Home / ಕವನ / ಕವಿತೆ / ‘ಅರಾಫತ್’ನಿಗೆ ಕಾಣಿಕೆ

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ
ಮೂರು ಮಂಗಗಳು ಧೂಳ ಹಿಡಿದು
ಶೋಕೇಸಿನಲಿ ಬಿದ್ದಿವೆ.
‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ
ಕ್ಷೇಮ ಸಮಾಚಾರದ
ಮಾಮೂಲಿ ಮಾತು ಕಥೆ
ಗಾಂಧಿ ತತ್ವದ ಹೊಗಳಿಕೆ
ಅವನಲ್ಲಿ
ಅವನ (ಆರಾಫತ್) ಹೊಗಳಿಕೆ
ನಮ್ಮಲ್ಲಿ
ಬಿಸಿಲೇರುತ್ತದೆ
ನಾವು ನೆಟ್ಟ ತೆಂಗಿನ ಗಿಡದಡಿ
ಚಾಪೆ ಹಾಸಿ ಊಟಕ್ಕೆಬ್ಬಿಸುತ್ತೇವೆ
ಸಮಯವಿಲ್ಲ
ಟೀ, ಸಾಕು ಅನ್ನುತ್ತಾನೆ
ಬೆಳಗಿನಿಂದ ಸುಸ್ತು ಹೊಡೆದು
ಮಾಡಿದ ಅಡಿಗೆಯ ಕಡೆಗೆ
ಯಾರೊಬ್ಬರಿಗೂ ಲಕ್ಷ್ಯವಿಲ್ಲ;
ಅರಾಫತ್‌ನ
ಸಣ್ಣ ಕಣ್ಣೊಳಗೆ
ನಮ್ಮ ಶೋಕೇಸ್ ಮಂಗಗಳು
ಥ್ರೀ ಡೈಮೆನ್‌ಷನ್ ಆಗಿ
ಕಾಣಿಸಿವೆ
ಧೂಳು ಹಿಡಿದ ಮಂಗಗಳು
ಒರೆಸಿ ಟೇಬಲ್‌ ಮೇಲಿಡುತ್ತೇನೆ
ರಾಜಕೀಯ ನೂರೆಂಟು
ಮಾತುಗಳು ಮಾತಾಡಿ ಕೊನೆಗೆ
‘ಟೀ’ ಕುಡಿದು ಎದ್ದಾಗ
ಅರಾಫತ್ ಥ್ಯಾಂಕ್ಸ್ ಹೇಳಲಿಲ್ಲ
ಮತ್ತೆ ಮಂಗಗಳದೇ ಮಾತು
ಇರಲೆಂದು ನಾವು
ಮಂಗಗಳನ್ನು ಅವನಿಗೆ
ಕೊಟ್ಟಿದ್ದೇ ತಡ;
ಬಿಡದೇ ನೂರೆಂಟು ಥ್ಯಾಂಕ್ಸ್ ಹೇಳಿ
ತನ್ನ ರುಮಾಲಿನಲ್ಲಿ
ಸುತ್ತಿಕೊಂಡು ನಡದೇ ಬಿಟ್ಟ
ನಮಗೀಗ ಬುದ್ಧಿ ಬರುತ್ತಿದೆ
ಮುಗುಳು ನಗುವ
ದೇವರು ದಿಂಡಿರುಗಳನ್ನಿಟ್ಟು
ದೇವರ ಮನೆಬಾಗಿಲು ಹಾಕಿಕೊಳ್ಳುವುದಕ್ಕಿಂತ
ಮಂಗಗಳನ್ನು ಕೋಣೆ ಕೋಣೆಗಳಲ್ಲಿಟ್ಟು
ಗಾಂಧಿ ಆದರ್ಶದ ತತ್ವಗಳು
ಒಪ್ಪಿಕೊಳ್ಳುವಂತಾಗೋಣವೆಂದು
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...