Home / ಕವನ / ಕವಿತೆ / ‘ಅರಾಫತ್’ನಿಗೆ ಕಾಣಿಕೆ

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ
ಮೂರು ಮಂಗಗಳು ಧೂಳ ಹಿಡಿದು
ಶೋಕೇಸಿನಲಿ ಬಿದ್ದಿವೆ.
‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ
ಕ್ಷೇಮ ಸಮಾಚಾರದ
ಮಾಮೂಲಿ ಮಾತು ಕಥೆ
ಗಾಂಧಿ ತತ್ವದ ಹೊಗಳಿಕೆ
ಅವನಲ್ಲಿ
ಅವನ (ಆರಾಫತ್) ಹೊಗಳಿಕೆ
ನಮ್ಮಲ್ಲಿ
ಬಿಸಿಲೇರುತ್ತದೆ
ನಾವು ನೆಟ್ಟ ತೆಂಗಿನ ಗಿಡದಡಿ
ಚಾಪೆ ಹಾಸಿ ಊಟಕ್ಕೆಬ್ಬಿಸುತ್ತೇವೆ
ಸಮಯವಿಲ್ಲ
ಟೀ, ಸಾಕು ಅನ್ನುತ್ತಾನೆ
ಬೆಳಗಿನಿಂದ ಸುಸ್ತು ಹೊಡೆದು
ಮಾಡಿದ ಅಡಿಗೆಯ ಕಡೆಗೆ
ಯಾರೊಬ್ಬರಿಗೂ ಲಕ್ಷ್ಯವಿಲ್ಲ;
ಅರಾಫತ್‌ನ
ಸಣ್ಣ ಕಣ್ಣೊಳಗೆ
ನಮ್ಮ ಶೋಕೇಸ್ ಮಂಗಗಳು
ಥ್ರೀ ಡೈಮೆನ್‌ಷನ್ ಆಗಿ
ಕಾಣಿಸಿವೆ
ಧೂಳು ಹಿಡಿದ ಮಂಗಗಳು
ಒರೆಸಿ ಟೇಬಲ್‌ ಮೇಲಿಡುತ್ತೇನೆ
ರಾಜಕೀಯ ನೂರೆಂಟು
ಮಾತುಗಳು ಮಾತಾಡಿ ಕೊನೆಗೆ
‘ಟೀ’ ಕುಡಿದು ಎದ್ದಾಗ
ಅರಾಫತ್ ಥ್ಯಾಂಕ್ಸ್ ಹೇಳಲಿಲ್ಲ
ಮತ್ತೆ ಮಂಗಗಳದೇ ಮಾತು
ಇರಲೆಂದು ನಾವು
ಮಂಗಗಳನ್ನು ಅವನಿಗೆ
ಕೊಟ್ಟಿದ್ದೇ ತಡ;
ಬಿಡದೇ ನೂರೆಂಟು ಥ್ಯಾಂಕ್ಸ್ ಹೇಳಿ
ತನ್ನ ರುಮಾಲಿನಲ್ಲಿ
ಸುತ್ತಿಕೊಂಡು ನಡದೇ ಬಿಟ್ಟ
ನಮಗೀಗ ಬುದ್ಧಿ ಬರುತ್ತಿದೆ
ಮುಗುಳು ನಗುವ
ದೇವರು ದಿಂಡಿರುಗಳನ್ನಿಟ್ಟು
ದೇವರ ಮನೆಬಾಗಿಲು ಹಾಕಿಕೊಳ್ಳುವುದಕ್ಕಿಂತ
ಮಂಗಗಳನ್ನು ಕೋಣೆ ಕೋಣೆಗಳಲ್ಲಿಟ್ಟು
ಗಾಂಧಿ ಆದರ್ಶದ ತತ್ವಗಳು
ಒಪ್ಪಿಕೊಳ್ಳುವಂತಾಗೋಣವೆಂದು
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...