Home / ಕವನ / ಕವಿತೆ / ‘ಅರಾಫತ್’ನಿಗೆ ಕಾಣಿಕೆ

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ
ಮೂರು ಮಂಗಗಳು ಧೂಳ ಹಿಡಿದು
ಶೋಕೇಸಿನಲಿ ಬಿದ್ದಿವೆ.
‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ
ಕ್ಷೇಮ ಸಮಾಚಾರದ
ಮಾಮೂಲಿ ಮಾತು ಕಥೆ
ಗಾಂಧಿ ತತ್ವದ ಹೊಗಳಿಕೆ
ಅವನಲ್ಲಿ
ಅವನ (ಆರಾಫತ್) ಹೊಗಳಿಕೆ
ನಮ್ಮಲ್ಲಿ
ಬಿಸಿಲೇರುತ್ತದೆ
ನಾವು ನೆಟ್ಟ ತೆಂಗಿನ ಗಿಡದಡಿ
ಚಾಪೆ ಹಾಸಿ ಊಟಕ್ಕೆಬ್ಬಿಸುತ್ತೇವೆ
ಸಮಯವಿಲ್ಲ
ಟೀ, ಸಾಕು ಅನ್ನುತ್ತಾನೆ
ಬೆಳಗಿನಿಂದ ಸುಸ್ತು ಹೊಡೆದು
ಮಾಡಿದ ಅಡಿಗೆಯ ಕಡೆಗೆ
ಯಾರೊಬ್ಬರಿಗೂ ಲಕ್ಷ್ಯವಿಲ್ಲ;
ಅರಾಫತ್‌ನ
ಸಣ್ಣ ಕಣ್ಣೊಳಗೆ
ನಮ್ಮ ಶೋಕೇಸ್ ಮಂಗಗಳು
ಥ್ರೀ ಡೈಮೆನ್‌ಷನ್ ಆಗಿ
ಕಾಣಿಸಿವೆ
ಧೂಳು ಹಿಡಿದ ಮಂಗಗಳು
ಒರೆಸಿ ಟೇಬಲ್‌ ಮೇಲಿಡುತ್ತೇನೆ
ರಾಜಕೀಯ ನೂರೆಂಟು
ಮಾತುಗಳು ಮಾತಾಡಿ ಕೊನೆಗೆ
‘ಟೀ’ ಕುಡಿದು ಎದ್ದಾಗ
ಅರಾಫತ್ ಥ್ಯಾಂಕ್ಸ್ ಹೇಳಲಿಲ್ಲ
ಮತ್ತೆ ಮಂಗಗಳದೇ ಮಾತು
ಇರಲೆಂದು ನಾವು
ಮಂಗಗಳನ್ನು ಅವನಿಗೆ
ಕೊಟ್ಟಿದ್ದೇ ತಡ;
ಬಿಡದೇ ನೂರೆಂಟು ಥ್ಯಾಂಕ್ಸ್ ಹೇಳಿ
ತನ್ನ ರುಮಾಲಿನಲ್ಲಿ
ಸುತ್ತಿಕೊಂಡು ನಡದೇ ಬಿಟ್ಟ
ನಮಗೀಗ ಬುದ್ಧಿ ಬರುತ್ತಿದೆ
ಮುಗುಳು ನಗುವ
ದೇವರು ದಿಂಡಿರುಗಳನ್ನಿಟ್ಟು
ದೇವರ ಮನೆಬಾಗಿಲು ಹಾಕಿಕೊಳ್ಳುವುದಕ್ಕಿಂತ
ಮಂಗಗಳನ್ನು ಕೋಣೆ ಕೋಣೆಗಳಲ್ಲಿಟ್ಟು
ಗಾಂಧಿ ಆದರ್ಶದ ತತ್ವಗಳು
ಒಪ್ಪಿಕೊಳ್ಳುವಂತಾಗೋಣವೆಂದು
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...