Home / ಕವನ / ಕವಿತೆ / ‘ಅರಾಫತ್’ನಿಗೆ ಕಾಣಿಕೆ

‘ಅರಾಫತ್’ನಿಗೆ ಕಾಣಿಕೆ

ಗಾಂಧಿ ತತ್ವದ
ಮೂರು ಮಂಗಗಳು ಧೂಳ ಹಿಡಿದು
ಶೋಕೇಸಿನಲಿ ಬಿದ್ದಿವೆ.
‘ಅರಾಫತ್’ ನಮ್ಮ ಮನೆಗೆ ಬಂದಿದ್ದಾನೆ
ಕ್ಷೇಮ ಸಮಾಚಾರದ
ಮಾಮೂಲಿ ಮಾತು ಕಥೆ
ಗಾಂಧಿ ತತ್ವದ ಹೊಗಳಿಕೆ
ಅವನಲ್ಲಿ
ಅವನ (ಆರಾಫತ್) ಹೊಗಳಿಕೆ
ನಮ್ಮಲ್ಲಿ
ಬಿಸಿಲೇರುತ್ತದೆ
ನಾವು ನೆಟ್ಟ ತೆಂಗಿನ ಗಿಡದಡಿ
ಚಾಪೆ ಹಾಸಿ ಊಟಕ್ಕೆಬ್ಬಿಸುತ್ತೇವೆ
ಸಮಯವಿಲ್ಲ
ಟೀ, ಸಾಕು ಅನ್ನುತ್ತಾನೆ
ಬೆಳಗಿನಿಂದ ಸುಸ್ತು ಹೊಡೆದು
ಮಾಡಿದ ಅಡಿಗೆಯ ಕಡೆಗೆ
ಯಾರೊಬ್ಬರಿಗೂ ಲಕ್ಷ್ಯವಿಲ್ಲ;
ಅರಾಫತ್‌ನ
ಸಣ್ಣ ಕಣ್ಣೊಳಗೆ
ನಮ್ಮ ಶೋಕೇಸ್ ಮಂಗಗಳು
ಥ್ರೀ ಡೈಮೆನ್‌ಷನ್ ಆಗಿ
ಕಾಣಿಸಿವೆ
ಧೂಳು ಹಿಡಿದ ಮಂಗಗಳು
ಒರೆಸಿ ಟೇಬಲ್‌ ಮೇಲಿಡುತ್ತೇನೆ
ರಾಜಕೀಯ ನೂರೆಂಟು
ಮಾತುಗಳು ಮಾತಾಡಿ ಕೊನೆಗೆ
‘ಟೀ’ ಕುಡಿದು ಎದ್ದಾಗ
ಅರಾಫತ್ ಥ್ಯಾಂಕ್ಸ್ ಹೇಳಲಿಲ್ಲ
ಮತ್ತೆ ಮಂಗಗಳದೇ ಮಾತು
ಇರಲೆಂದು ನಾವು
ಮಂಗಗಳನ್ನು ಅವನಿಗೆ
ಕೊಟ್ಟಿದ್ದೇ ತಡ;
ಬಿಡದೇ ನೂರೆಂಟು ಥ್ಯಾಂಕ್ಸ್ ಹೇಳಿ
ತನ್ನ ರುಮಾಲಿನಲ್ಲಿ
ಸುತ್ತಿಕೊಂಡು ನಡದೇ ಬಿಟ್ಟ
ನಮಗೀಗ ಬುದ್ಧಿ ಬರುತ್ತಿದೆ
ಮುಗುಳು ನಗುವ
ದೇವರು ದಿಂಡಿರುಗಳನ್ನಿಟ್ಟು
ದೇವರ ಮನೆಬಾಗಿಲು ಹಾಕಿಕೊಳ್ಳುವುದಕ್ಕಿಂತ
ಮಂಗಗಳನ್ನು ಕೋಣೆ ಕೋಣೆಗಳಲ್ಲಿಟ್ಟು
ಗಾಂಧಿ ಆದರ್ಶದ ತತ್ವಗಳು
ಒಪ್ಪಿಕೊಳ್ಳುವಂತಾಗೋಣವೆಂದು
*****

ಪುಸ್ತಕ: ಗಾಂಜಾ ಡಾಲಿ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...