Home / ಲೇಖನ / ವಿಜ್ಞಾನ / ೫೦ ವರ್ಷ ಬಳೆಸಬಹುದಾದ ಬ್ಯಾಟರಿ

೫೦ ವರ್ಷ ಬಳೆಸಬಹುದಾದ ಬ್ಯಾಟರಿ

ನಾವು ಬ್ಯಾಟರಿಗಳನ್ನು ಕೆಲವೇ ಕಾಲದವರೆಗೆ ಬಳಸಿ ಎಸೆದು ಬಿತುತ್ತೇವೆ. ಆದರೆ ೫೦ ವರ್ಷಗಳ ವರೆಗೆ ಬಾಳಿಕೆ ಬರಬಲ್ಲ ಬ್ಯಾಟರಿಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅಮೆರಿಕಾದ ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈ ಸಂಶೋಧನೆಯನ್ನು ಮಾಡಿದ್ದಾರೆ. ಈ ವಿದ್ಯುತ್‌ಕೋಶ (cell) ಗಳನ್ನು ಬಳೆಸುವಲ್ಲಿ ಸಂಶೋಧನೆಯ ವಿವರ ಈ ರೀತಿ ಇದೆ. ರೇಡಿಯೋ ಆಕ್ಟಿವ್ (ವಿಕಿರಣ ಶೀಲ) ವಸ್ತುಗಳನ್ನು ಬಳಸಿ ತಯಾರಿಸಲಾಗುವ ಇಂತಹ ಬ್ಯಾಟರಿಯ ಬಳಕೆಯಿಂದ ದೀರ್ಘ ಅವಧಿಯವರೆಗೆ ಕಡಿಮೆ ಶಕ್ತಿಯನ್ನು ಬಳೆಸುವ ಗಡಿಯಾರದಂತಹ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಿಗೆ ಶಕ್ತಿಯನ್ನು ಪೂರೈಸಬಹುದೆಂದು ಹೇಳಲಾಗಿದೆ. ಅತ್ಯಂತ ಕಡಿಮೆ ಮಟ್ಟದ ವಿಕಿರಣವನ್ನು ಹೊರ ಸೂಸುವ ನಿಕೆಲ್-63 (Nickel-93) ರಂತಹ ಐಸೋಟೋಪ್ (ಐಸೋಟೋಪ್ ಪರಮಾಣು ತೂಕಬೇರೆಯಾಗಿರುವ ಆದರೆ ರಾಸಾಯನಿಕ ಗುಣಗಳು ಒಂದೇ ಇರುವ ಒಂದೇ ಧಾತುವಿನ ಎರಡು ಅಥವಾ ಹೆಚ್ಚು ರೂಪಗಳು) ಬಳಸುವುದರಿಂದ ವಿಕಿರಣ ಶೀಲತೆ ದುಷ್ಟರಿಣಾಮಗಳನ್ನು ತಡೆಯಬಹುದೆಂಬ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

ತಾಮ್ರದ ಹಾಗೂ ನಿಕೆಲ್‍ನ ಪದರವೊಂದನ್ನು ಹೊಂದಿರುವ ಈ ಬ್ಯಾಟರಿಗಳಲ್ಲಿ ನಿಕಲ್ ಐಸೋಟೋಪ್ ಹೊರಸೂಸುವ ವಿಕಿರಣದಿಂದ ಶಕ್ತಿಯ ಉತ್ಪಾದನೆಯಾಗುತ್ತದೆ. ಅತ್ಯಂತ ಚಿಕ್ಕಗಾತ್ರದಲ್ಲಿಯೂ ಕೂಡ ನಿರ್ಮಿತವಾಗಬಲ್ಲ ಇಂತಹ ಬ್ಯಾಟರಿಗಳು ನಿಕೆಲ್ ಐಸೋಟೋಪದ ಅರ್ಧಾಯುಷ್ಯ ಅವಧಿಯಾದ ನೂರು ವರ್ಷಗಳವರೆಗೂ ಕಾರ್ಯನಿರ್ವಹಿಸಬಲ್ಲವು. ಅದರ ನಿಗದಿತ ಪ್ರಮಾಣಶಕ್ತಿ ಕನಿಷ್ಟವೆಂದರೂ ಐವತ್ತು ವರ್ಷಗಳವರೆಗೂ ಯಾವ ತೊಂದರೆಯೂ ಇಲ್ಲದಂತೆ ಕಾರ್ಯನಿರ್ವಹಿಸುತ್ತದೆ.

ಆದರೆ ಇಂತಹ ಟ್ಯಾಟರಿಯು ಹೊರಸೂಸುವ ವಿಕಿರಣ ಮಾನವನ ಮೇಲೆ ಉಂಟು ಮಾಡಬಲ್ಲ ದುಷ್ಪರಿಣಾಮ ಎಷ್ಟರಮಟ್ಟದ್ದು ಎಂಬ ಬಗೆಗೆ ಇನ್ನು ಚರ್ಚೆ ನಡೆಯುತ್ತವೆ. ಇವು ಹೊರಸೂಸುವ ಅತ್ಯಲ್ಪ ಮಟ್ಟದ ವಿಕಿರಣದಿಂದ ಕೆಟ್ಟ ಪರಿಣಾಮವೇನು ಉಂಟಾಗಲಾರದೆಂದು ಈ ಬ್ಯಾಟರಿಯನ್ನು ಕಂಡು ಹಿಡಿದ ವಿಜ್ಞಾನಿಗಳು ಹೇಳಿದರೆ ಇನ್ನು ಕೆಲ ವಿಜ್ಞಾನಿಗಳು ವಿಕಿರಣ ಎಷ್ಟೇ ಕಡಿಮೆಯಾದರೂ ಅದರಿಂದ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಖಂಡಿತವಾಗಿಯೂ ಉಂಟಾಗಲಿದೆ ಎನ್ನುತ್ತಾರೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...