ಜಯವಾಗಲಿ ಇಳೆಗೆಲ್ಲ ಜಯ

ಸ್ವತಂತ್ರ ಭಾರತದರುಣೋದಯದ
ಮುಂಗಿರಣವದೋ ಮೂಡುತಿದೆ;
ಶತಮಾನದ ಮೇಲಿನ ಕಡು ದಾಸ್ಯದ
ಭಂಗಗೈದ ತಮವೋಡುತಿದೆ.

ಸ್ವಾತಂತ್ರ್‍ಯದ ಹರಿಕಾರರು ಮಲಗಿದ
ಜನರನೆಚ್ಚರಿಸ ಬಂದಿಹರು;
ಚಾತಕದೊಲು ಬಾಯ್ ಬಿಡುತಿಹ ಜನಕೆ
ಒಸಗೆ ಭರವಸೆಯ ತಂದಿಹರು.

ಇನ್ನೂ ಮಲಗಿರಲೇನು ಚೆಂದ? ಮೈ
ಜಡತೆಯ ಕೊಡಹುತ ಎದ್ದೇಳಿ;
ತನ್ನ ಪಾಲಿಗಿಹ ನಾಡಿನ ಸೇವೆಯ
ಭಾಗವ ಸಲಿಸುವ ಮನ ತಾಳಿ.

ಯಾರೋ ಬಿಡುಗಡೆ ನೀಡುವರೆಂದು
ಬೇಡುತಲಿರೆ ಎಂದಿಗೆ ಮುಕುತಿ?
ಸಾರಿಬರುವುದು ತಾನೇ ಬಿಡುಗಡೆ
ಹೂಡಲೆಮ್ಮ ಆತ್ಮದ ಶಕುತಿ.

ಇಂದಿನ ಜಯ ಹೊರಶಕ್ತಿಯ ಹುಸಿಜಯ
ಹಿಂಗಲಿಲ್ಲ ಲೋಕದೊಳು ಭಯ;
ಮುಂದೆ ಭಾರತವು ತೋರುವ ಆತ್ಮದ
ಜಯವಾಗಲಿ ಇಳೆಗೆಲ್ಲ ಜಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಟ್ಟೆಷ್ಟಾಯಿತು ಕವಿತೆ?
Next post ಬಾಲ್ಬಸ್ವವ್ರು

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…