Home / ಕವನ / ಕವಿತೆ / ಸುಮ್ಮನಿದ್ದದ್ದು ಸಾಕು

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ
ಫಲವತ್ತಾದ
ಕಪ್ಪು ನೆಲವೆಂದು
ನೀನು ಬಂದು ಬೇರೂರಿ
ಆಕಾಶದೆತ್ತರ
ಬೆಳೆದು ನಿಲ್ಲುವವರೆಗೂ

ಯಾರು ತಂದು ಬಿಸುಟರು
ನಿನ್ನ
ನನ್ನ ಎದೆಯಾಳದಲಿ?

ಹುಲ್ಲಿನ ಜೊತೆ ಹುಲ್ಲಿನಂತೆ
ಬೆಳೆದು
ಹುಲ್ಲಾಗಿ ಒಣಗಿ ಹೋಗದೆ
ಮರವಾಗಿ
ಬೆಳೆದು ನಿಂತುಬಿಟ್ಟೆ

ನನ್ನೆದೆ
ಬರೀ ಹುಲ್ಲು ಬೆಳೆಯುವ
ಬಂಜರು
ಎಂದವರ ಸುಳ್ಳಾಗಿಸಿದ್ದು
ಒಂದು ಸೋಜಿಗ

ನೋವು ತಿಳಿಯಲಿಲ್ಲ
ಬಿರುಕು
ಹುಡುಕಿ ಬೇರು ಬಿಟ್ಟು
ರಸ ಹೀರುವಾಗ
ಭಾರ
ಗೊತ್ತಾಗಲಿಲ್ಲ
ಹಾಲುಗೆನ್ನೆಯಂತ ಚಿಗುರು ತೊಟ್ಟಾಗ
ಕಂದ
ನಗುವಿನಂತ ಹೂವು
ಮುಡಿದಾಗ

ನೀನೊಂದು ಬರೀ
ನೆನಪು
ಹೊತ್ತ ಹೆಮ್ಮರವೆಂದು ತಿಳಿದೂ
ಕೊಡವಿ
ಕೆಡವಿ ಬೀಳಿಸುವ ತಾಕತ್ತು
ಇಲ್ಲದೇ ಹೋಗಿದ್ದು
ನನ್ನ ಬದುಕಿನ ದುರಂತ

ನಿನ್ನ ಹೂವು ಹಣ್ಣು
ನೆರಳು
ಮತ್ತಾರದೋ ಹೊಟ್ಟೆ ತುಂಬಿಸುವಾಗ
ಹಸಿದ ಬಸಿರು
ನಿನ್ನದೊಂದು ಬೀಜಕ್ಕಾಗಿ ಕಾತರಿಸುತ್ತದೆ
ನಾಚಿಕೆಯಿಲ್ಲದೆ

ಎಷ್ಟೊಂದು ಬಿಸಿಲು ಬಿರುಗಾಳಿ
ಗುಡುಗು ಸಿಡಿಲು
ಬೆಂಕಿ ಮಳೆ
ತಡೆದು ನಿಂತೆ
ಬೇರು ಸಹಿತ
ಕೊಳೆತು
ಬಿದ್ದು ಹೋಗುವವರೆಗೆ
ನೆನಪ ನೆರಳಿನ ಭಾರ
ಹೊರದೆ ಬೇರೆ ವಿಧಿಯಿಲ್ಲ

ಹೆಣ್ಣಾಗಿ ಹುಟ್ಟಿ
‘ಭೂಮಿ’
ಎಂದು ಕರೆಸಿಕೊಳ್ಳುವುದು
ಸಾಕು
ಸಿಡಿಯಬೇಕು

ಇನ್ನಾದರೂ ಜ್ವಾಲಾಮುಖಿಯಾಗಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...