Home / ಕವನ / ಕವಿತೆ / ಸುಮ್ಮನಿದ್ದದ್ದು ಸಾಕು

ಸುಮ್ಮನಿದ್ದದ್ದು ಸಾಕು

ಗೊತ್ತಿರಲೇ ಇಲ್ಲ
ಫಲವತ್ತಾದ
ಕಪ್ಪು ನೆಲವೆಂದು
ನೀನು ಬಂದು ಬೇರೂರಿ
ಆಕಾಶದೆತ್ತರ
ಬೆಳೆದು ನಿಲ್ಲುವವರೆಗೂ

ಯಾರು ತಂದು ಬಿಸುಟರು
ನಿನ್ನ
ನನ್ನ ಎದೆಯಾಳದಲಿ?

ಹುಲ್ಲಿನ ಜೊತೆ ಹುಲ್ಲಿನಂತೆ
ಬೆಳೆದು
ಹುಲ್ಲಾಗಿ ಒಣಗಿ ಹೋಗದೆ
ಮರವಾಗಿ
ಬೆಳೆದು ನಿಂತುಬಿಟ್ಟೆ

ನನ್ನೆದೆ
ಬರೀ ಹುಲ್ಲು ಬೆಳೆಯುವ
ಬಂಜರು
ಎಂದವರ ಸುಳ್ಳಾಗಿಸಿದ್ದು
ಒಂದು ಸೋಜಿಗ

ನೋವು ತಿಳಿಯಲಿಲ್ಲ
ಬಿರುಕು
ಹುಡುಕಿ ಬೇರು ಬಿಟ್ಟು
ರಸ ಹೀರುವಾಗ
ಭಾರ
ಗೊತ್ತಾಗಲಿಲ್ಲ
ಹಾಲುಗೆನ್ನೆಯಂತ ಚಿಗುರು ತೊಟ್ಟಾಗ
ಕಂದ
ನಗುವಿನಂತ ಹೂವು
ಮುಡಿದಾಗ

ನೀನೊಂದು ಬರೀ
ನೆನಪು
ಹೊತ್ತ ಹೆಮ್ಮರವೆಂದು ತಿಳಿದೂ
ಕೊಡವಿ
ಕೆಡವಿ ಬೀಳಿಸುವ ತಾಕತ್ತು
ಇಲ್ಲದೇ ಹೋಗಿದ್ದು
ನನ್ನ ಬದುಕಿನ ದುರಂತ

ನಿನ್ನ ಹೂವು ಹಣ್ಣು
ನೆರಳು
ಮತ್ತಾರದೋ ಹೊಟ್ಟೆ ತುಂಬಿಸುವಾಗ
ಹಸಿದ ಬಸಿರು
ನಿನ್ನದೊಂದು ಬೀಜಕ್ಕಾಗಿ ಕಾತರಿಸುತ್ತದೆ
ನಾಚಿಕೆಯಿಲ್ಲದೆ

ಎಷ್ಟೊಂದು ಬಿಸಿಲು ಬಿರುಗಾಳಿ
ಗುಡುಗು ಸಿಡಿಲು
ಬೆಂಕಿ ಮಳೆ
ತಡೆದು ನಿಂತೆ
ಬೇರು ಸಹಿತ
ಕೊಳೆತು
ಬಿದ್ದು ಹೋಗುವವರೆಗೆ
ನೆನಪ ನೆರಳಿನ ಭಾರ
ಹೊರದೆ ಬೇರೆ ವಿಧಿಯಿಲ್ಲ

ಹೆಣ್ಣಾಗಿ ಹುಟ್ಟಿ
‘ಭೂಮಿ’
ಎಂದು ಕರೆಸಿಕೊಳ್ಳುವುದು
ಸಾಕು
ಸಿಡಿಯಬೇಕು

ಇನ್ನಾದರೂ ಜ್ವಾಲಾಮುಖಿಯಾಗಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...