ನಮ್ಮೂರ ಹೋಳಿ ಹಾಡು – ೪

ಹರಿ ವಿರಂಚಿಯೂ ಕೂಡಿ
ಗುರು ಬೃಹಸ್ಪತಿ|
ಕೂಡಿ ಗುರು ಬೃಹಸ್ಪತಿ
ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ||

ಹರನ ತಪವನುಽ
ಕೆಡಿಸಿ ಸ್ಮರಗೆ ಬೋಧಿಸು|
ಕೆಡಿಸಿ ಸ್ಮರಗೆ ಬೋಧಿಸು
ಸುರರ ಬಾದೆಯ
ಬ್ಯಾಗ ಪರಿಹರಿಸುವುದು||೧||

ಅಕ್ಷ ಮೂರ್ತಿಯಽ
ತಪವು ಭ್ರಷ್ಟವಾದರೆ
ತಪವು ಭ್ರಷ್ಟವಾದರೆ
ಹುಟ್ಟಿ ಷಣ್ಮುಖಾಽ
ಖಳನ ನಷ್ಟ ಮಾಡುವ||೨||

ಗುರು ಬೃಹಸ್ಪತಿ ಸ್ಮರಗೆ
ಪರಿ ಪರಿಗಳಿಂದಲಿ
ಸ್ಮರಗೆ ಪರಿಪರಿಗಳಿಂದಲಿ
ಕರದಿ ಕರವನು ಹಾಕಿ
ಭರದಿ ಪೇಳಲು||೩||

ಮೋಸದಿಂದಲಿ ಸ್ಮರನು
ಭಾಷೆಗೊಂಡನು
ಈಶ ಮಾಡುವಾ ತಪವ
ನಾಶಗೈವುದು||೪||

ಅಂದ ಮಾತನು ಕೇಳಿ
ನೊಂದ ಮದನನು
ಕೇಳಿ ನೊಂದ ಮದನನು
ಕುಂದಿ ಕೊರಗುತಽ
ಮನದಿ ಮುಂದು ಗೆಟ್ಟನು||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನಾಗುವ ಬಯಕೆ
Next post ಚುಕು ಬುಕು ರೈಲು

ಸಣ್ಣ ಕತೆ

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ರಾಜಕೀಯ ಮುಖಂಡರು

    ಪ್ರಕರಣ ೧೦ ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಅದರ ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತರಾಗಿ ಅವರ… Read more…