ನಮ್ಮೂರ ಹೋಳಿ ಹಾಡು – ೪

ಹರಿ ವಿರಂಚಿಯೂ ಕೂಡಿ
ಗುರು ಬೃಹಸ್ಪತಿ|
ಕೂಡಿ ಗುರು ಬೃಹಸ್ಪತಿ
ಕರೆಸಿ ಕೇಳೆಯಾ ತಾರಕಾಸುರನ ಬಾಧೆಯ||ಪ||

ಹರನ ತಪವನುಽ
ಕೆಡಿಸಿ ಸ್ಮರಗೆ ಬೋಧಿಸು|
ಕೆಡಿಸಿ ಸ್ಮರಗೆ ಬೋಧಿಸು
ಸುರರ ಬಾದೆಯ
ಬ್ಯಾಗ ಪರಿಹರಿಸುವುದು||೧||

ಅಕ್ಷ ಮೂರ್ತಿಯಽ
ತಪವು ಭ್ರಷ್ಟವಾದರೆ
ತಪವು ಭ್ರಷ್ಟವಾದರೆ
ಹುಟ್ಟಿ ಷಣ್ಮುಖಾಽ
ಖಳನ ನಷ್ಟ ಮಾಡುವ||೨||

ಗುರು ಬೃಹಸ್ಪತಿ ಸ್ಮರಗೆ
ಪರಿ ಪರಿಗಳಿಂದಲಿ
ಸ್ಮರಗೆ ಪರಿಪರಿಗಳಿಂದಲಿ
ಕರದಿ ಕರವನು ಹಾಕಿ
ಭರದಿ ಪೇಳಲು||೩||

ಮೋಸದಿಂದಲಿ ಸ್ಮರನು
ಭಾಷೆಗೊಂಡನು
ಈಶ ಮಾಡುವಾ ತಪವ
ನಾಶಗೈವುದು||೪||

ಅಂದ ಮಾತನು ಕೇಳಿ
ನೊಂದ ಮದನನು
ಕೇಳಿ ನೊಂದ ಮದನನು
ಕುಂದಿ ಕೊರಗುತಽ
ಮನದಿ ಮುಂದು ಗೆಟ್ಟನು||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧನಾಗುವ ಬಯಕೆ
Next post ಚುಕು ಬುಕು ರೈಲು

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…