ಬುದ್ಧನಾಗುವ ಬಯಕೆ

ಬುದ್ಧನಾಗಲಿಲ್ಲ ನಾ
ಕೇರಿಂದೆದ್ದು ಬರಲಾಗಲೇ ಇಲ್ಲ!
ಬಿದ್ದಲ್ಲೆ ಬಿದ್ದು ಬಿದ್ದು…
ಹಂದಿಯಂಗೆ ಹೊಲೆಗೇರಿಲಿ… ಎದ್ದು ಎದ್ದು…
ಒದ್ದಾಡುತ್ತಿರುವೆ!
ಕೇರಿಂದೆ ಹೊರಗೇ ಬರಲಾಗಲೇ ಇಲ್ಲ
ಇನ್ನು ಬುದ್ಧನಾಗುವಾ ಬಯಕೆ ದೂರಾಯಿತಲ್ಲ!
*

ಜಗವೆಲ್ಲ ಮಲಗಿರಲು
ಶತಶತಮಾನಗಳಿಂದಾ ಎದ್ದಿರುವೆವು ನಾವು!
ನಿದ್ದಿಲ್ಲದೆ, ಮನೆ, ಮಠ, ಸೂರಿಲ್ಲದೇ…
ಬುದ್ಧನಾಗುವ ಸಂಕಲ್ಪ ನಮಗುಂಟೇ?!
ಹೊಟ್ಟೆ, ಬಟ್ಟೆಗೆ,
ಆಸೆ ಪಟ್ಟು
ಕಟ್ಟು ನಿಟ್ಟಿಗೆ,
ಒಳಪಟ್ಟು
ಗತಿಗೆಟ್ಟವರೆಂಬಾಪಟ್ಟ,
ಗಿರಿಜನರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಸಾವೆಂಬಾ ಅವಮಾನ!
ಕಂಗೆಟ್ಟ ಹಸಿವು,
ರೋಗರುಜಿನೆಂಬಾ ಹಾಸಿಗೆ
ಬಡತನವೆಂಬಾ ಸಂಕೋಲೆ
ಜಾತಿ, ಮತ, ಕುಲ, ಭೇದಗಳೆಂಬಾ ಕೆಂಭೂತ,
ಅನಕ್ಷರೆಂಬಾಭೂತ
ಸಂಸಾರವೆಂಬಾ ಪಿಶಾಚಿಗೆ,
ಬೇಸತ್ತರೂ ವೈರಾಗ್ಯವೆಂಬುದಿಲ್ಲ!
ಇನ್ನು ಬುದ್ಧನಾಗುವ ಬಯಕೆ…
ನಮಗೆಲ್ಲಿದೆ ಬುದ್ಧಾ?!
ದರಿದ್ರರೆಂಬಾ-ಪಟ್ಟ,
ಹರಿಜನರೆಂಬಾ-ಚಟ್ಟ,
ನಮಗಲ್ಲದೆ ಇನ್ಯಾರಿಗಿದೆ ಬುದ್ಧಾ?!
*

ನಿದ್ದಿಲ್ಲದೆ,
ಬುದ್ಧಿಲ್ಲದೆ,
ದುಡಿದ ದೇಹಕ್ಕಿಲ್ಲ ತುಂಡು ಬಟ್ಟೆ?!
ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ದರಿದ್ರ ಜನರೆಂದು ಜರಿವಾಗ
ಬಾಹುಬಲಿಯೆಂಬಾಪಟ್ಟ,
ಹೊಲಗೇರಿಯವರೆಂಬಾಚಟ್ಟ
ನಮಗಲ್ಲದೆ, ಇನ್ಯಾರಿಗಿದೆ ಬುದ್ಧಾ…?!
*

ನಿತ್ಯ ಬೋಧಿ ವೃಕ್ಷದಾ ಕೆಳಗೆ!
ಮರ, ಗಿಡಗಳಾ ಆಸರೆಲಿ,
ನಿದ್ದಿಲ್ಲದೆ, ರಾತ್ರೆಲ್ಲ ಎದ್ದು,
ಬೋಧಿವೃಕ್ಷಕೆ, ತೊಟ್ಟಿಲ ಕಟ್ಟಿ, ತೂಗಿದರೂ…
ಬುದ್ಧನಾಗುವಾ ಯೋಗ, ನಮೆಗೆಲ್ಲಿದೆ ಬುದ್ಧಾ…?!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಗೆ ಹೇಳಲಿ
Next post ನಮ್ಮೂರ ಹೋಳಿ ಹಾಡು – ೪

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

cheap jordans|wholesale air max|wholesale jordans|wholesale jewelry|wholesale jerseys