ಬೆಳ್ಳಿ ಮೀಸೆಯ ಮಗು

ಬೆಳ್ಳಿ ಮೀಸೆಯ ಮಗು

ಚಿತ್ರ: ಅಲ್ಕೆಟ್ರಾನ್.ಕಾಂ
ಚಿತ್ರ: ಅಲ್ಕೆಟ್ರಾನ್.ಕಾಂ

ತುಳುನಾಡಿನ ಕೇಂದ್ರಬಿಂದು ಮಂಗಳೂರಿನಲ್ಲಿ ಜನಿಸಿದ ಎಂ.ಗೋವಿಂದ ಪೈ (ಜನನ: ೧೮೮೩ ರ ಮಾರ್ಚ್ ೨೩) ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕ, ಭಾಷಾತಜ್ಞರಾಗಿ ‘ಸಾರಸ್ವತ ಲೋಕದಲ್ಲಿ ತಮ್ಮ ಅಚ್ಚಳಿಯದ ಛಾಪು ಮೂಡಿಸಿದವರು. ಮಹತ್ವದ ಲೇಖನಗಳ ಮೂಲಕ ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ವಕ್ತಾರರಾಗಿ ಕೆಲಸ ಮಾಡಿದವರು.

ಕನ್ನಡದ ಮಹತ್ವದ ಕವಿಗಳ ಪಟ್ಟಿಯಲ್ಲಿ ಪೈ ಅವರಿಗೆ ಮೊದಲ ಸಾಲಿನಲ್ಲೇ ಸ್ಥಾನ. ಸಂಖ್ಯಾದೃಷ್ಟಿಯಲ್ಲಿ ಅವರದ್ದು ವಾಮನ ಸಾಧನೆ. ಗುಣಮಟ್ಟದಲ್ಲಿ ತ್ರಿವಿಕ್ರಮ. ಪೈ ಅವರ ಪ್ರತಿಭಾವಿಲಾಸದ ಉತ್ತುಂಗದ ದರ್ಶನಕ್ಕೆ ‘ಗಿಳಿವಿಂಡು’ ಹಾಗೂ ‘ಗೋಲ್ಗೋಥಾ’ ಕೃತಿಗಳಷ್ಟೇ ಸಾಕು.

ಗೋವಿಂದ ಪೈ ಕಾವ್ಯ ಎಂದಕೂಡಲೇ ನೆನಪಿಗೆ ಬರುವುದು ಅವರ ಪ್ರಯೋಗಶೀಲತೆ. ಕನ್ನಡ ಕಾವ್ಯ ಪ್ರಾಸದ ಮೋಹದಲ್ಲಿ ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ‘ಪ್ರಾಸವನೀಗಲೆ ತೊರೆದು ಬಿಡುವೆನು’ ಎಂದು ಹೊಸತನದತ್ತ ಹೊರಟವರು ಪೈ. ಅದೇನೂ ಸುಲಭದ ದಾರಿಯಾಗಿರಲಿಲ್ಲ. ಪ್ರಾಸವನ್ನು ಹೊರತುಪಡಿಸಿದ ಕಾವ್ಯವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿದ್ದ ದಿನಗಳಲ್ಲಿ ಕಾವ್ಯದ ಮಡಿ ಹುಡಿ ಮಾಡಿದ ಪೈ ಕುರಿತು ಸಂಪ್ರದಾಯಶರಣ ಕವಿಗಳು ಕಿಡಿಕಿಡಿಯಾದರು. ಪೈ ಕಂಗೆಡಲಿಲ್ಲ. ಹೊಸ ದಾರಿಯ ಸಾಧ್ಯತೆಗಳ ಕುರಿತು ಅವರಿಗೆ ಅಚಲ ವಿಶ್ವಾಸವಿತ್ತು. ಮುಂದಿನ ದಿನಗಳಲ್ಲಿ ಪೈ ತೋರಿದ ಹಾದಿ ಹೆದ್ದಾರಿಯಾದುದು ಈಗ
ಇತಿಹಾಸ.

ಕ್ರಿಸ್ತನ ಕೊನೆಯ ದಿನಗಳ ಚಿತ್ರಣದ ‘ಗೋಲ್ಗೋಥಾ’ ಕಥನ ಕಾವ್ಯ ಪೈ ಅವರ ಪ್ರಯೋಗಶೀಲತೆ ಹಾಗೂ ಪ್ರತಿಭಾವಿಲಾಸದ ಸಮ್ಮಿಲನವಾಗಿತ್ತು. ಈ ನಿಟ್ಟಿನಲ್ಲಿ ಅರಿವಿನ ಹಾದಿಯಲ್ಲಿನ ಬುದ್ದನ ಪಯಣದ ‘ವೈಶಾಖಿ’ ಖಂಡ ಕಾವ್ಯ ಇನ್ನೊಂದು ಉದಾಹರಣೆ. ಸುನೀತ (ಸಾನೆಟ್) ಪ್ರಕಾರ’ವನ್ನು ಕನ್ನಡಕ್ಕೆ ಪರಿಚಯಿಸಿದ ಅಗ್ಗಳಿಕೆಯೂ ಪೈ ಅವರಿಗೇ ಸಲ್ಲಬೇಕು. ಕಾವ್ಯ ಮಾತ್ರವಲ್ಲ ನಾಟಕಕಾರನಾಗಿಯೂ ಪೈ ಅವರದ್ದು ಮಹತ್ತರ ಸಾಧನೆ. ಏಕಲವ್ಯನ ದುರಂತ ಕಥನದ ‘ಹೆಬ್ಬೆರಳು’ ಅವರಿಗೆ ಪ್ರಸಿದ್ದ ತಂದುಕೊಟ್ಟ ನಾಟಕ. ‘ಚಿತ್ರಭಾನು’ ಪೈ ಅವರ ಮತ್ತೊಂದು ಜನಪ್ರಿಯ ನಾಟಕ.

ಅನುವಾದದಲ್ಲೂ ಪೈ ಪಳಗಿದ ಕೈ. ಜಪಾನಿಯಿಂದ ಕನ್ನಡಕ್ಕೆ ತಂದ ‘ನೋ ನಾಟಕಗಳು’ ಇಲ್ಲಿ ಉಲ್ಲೇಖಾರ್ಹ. ಅವರು ಅನುವಾದಿಸಿದ ಮತ್ತೊಂದು ನಾಟಕ ‘ತಾಯಿ’.

ತಾಯಹಾಲಿನ ಜೊತೆಗೆ ಪೈ ಅವರಿಗೆ ಮೈಗೂಡಿದುದು ಕೊಂಕಣಿ. ಪರಿಸರದ ಮಾತು ತುಳು. ಹಿಂದಿ, ತಮಿಳು, ಮಲೆಯಾಳಂ, ಮರಾಠಿ ಹಾಗೂ ಹಲವು ವಿದೇಶಿ ಭಾಷೆಗಳು ಸೇರಿದಂತೆ ಪೈ ಅವರಿಗೆ ಮೂವತ್ತೈದು ಭಾಷೆಗಳ ಪರಿಚಯವಿತ್ತು. ಇವುಗಳಲ್ಲಿ ಅನೇಕ ಭಾಷೆಗಳಲ್ಲಿ ಆಳ ಪರಿಶ್ರಮವೂ ಇತ್ತು. ಇಷ್ಟೆಲ್ಲ ಭಾಷೆಗಳ ಸಾಂಗತ್ಯವಿದ್ದರೂ ಅವರು ಬದುಕಿದ್ದು ಬರೆದಿದ್ದು ಕನ್ನಡದಲ್ಲಿ ಈ ಕನ್ನಡ ಪ್ರೀತಿ ಸಾಹಿತ್ಯಕ್ಕಷ್ಟೇ ಮೀಸಲಾಗಿರಲಿಲ್ಲ. ಕನ್ನಡ ನಾಡುನುಡಿಯ ಏಳ್ಗೆಗಾಗಿಯೂ ಅವರು ದನಿಯೆತ್ತಿದರು. ಏಕೀಕರಣ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಗಡಿ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದರು.

ಪೈ ಜನಿಸಿದ್ದು ಮಂಗಳೂರಿನಲ್ಲಾದರೂ ಅವರು ಬೆಳೆದದ್ದು ಕಾಸರಗೋಡಿನ ಮಂಜೇಶ್ವರದಲ್ಲಿ ಹೆಸರಿನೊಂದಿಗೆ ಅಂಟಿಕೊಳ್ಳುವಷ್ಟರ ಮಟ್ಟಿಗೆ ಪೈ ಅವರಿಗೆ ಮಂಜೇಶ್ವರದ ನಂಟಿದೆ. ಆದರೆ ಈ ಮಂಜೇಶ್ವರವನ್ನು ಒಳಗೊಂಡ ಕಾಸರಗೋಡು ಕರ್ನಾಟಕದಿಂದ ಹೊರಗೇ ಉಳಿದ ಕೊರಗು ಪೈ ಅವರನ್ನು ಕೊನೆಯವರೆಗೂ ಕಾಡಿತು.

೧೯೪೯ ರಲ್ಲಿ ಅಂದಿನ ಮದರಾಸು ಸರ್ಕಾರ ಗೋವಿಂದ ಪೈ ಹಾಗೂ ಮಲೆಯಾಳಂನ ಪ್ರಸಿದ್ದ ಕವಿ ವಲ್ಲತೋಳ್ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿ ಗೌರವಿಸಿತು. ಆ ಮೂಲಕ ಪೈ ಕನ್ನಡದ ಮೊದಲ ರಾಷ್ಟ್ರಕವಿ ಎನ್ನಿಸಿದರು. ನಿಜ ಅರ್ಥದಲ್ಲಿಯೂ ಪೈ ರಾಷ್ಟ್ರಕವಿಯೇ. ಜಿ.ಎಸ್.ಶಿವರುದ್ರಪ್ಪನವರ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ರಾಷ್ಟ್ರಕವಿ ಪರಂಪರೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಈ ಪರಂಪರೆಯ ಪೂರ್ವಸೂರಿ ಗೋವಿಂದ ಪೈ ನೆನಪು ಗಾಢವಾಗುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆಲಸವಿಲ್ಲ
Next post ಕಾರು

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

cheap jordans|wholesale air max|wholesale jordans|wholesale jewelry|wholesale jerseys