ಪ್ರಿಜಂ

ಕವಿಯ ಕಣ್ಣೊಂದು ಪ್ರಿಜಂ
ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ
ಹಿಡಿದಂತೆ ವಿಚಿತ್ರ ರಾವುಗನ್ನಡಿ
ಕಪ್ಪು ಬಿಳುಪುಗಳ ಚಿತ್ರಗಳಿಗೆ
ಮೂಡುವವೋ ಕೊಂಬುಬಾಲ
ಕೋರೆ ಹಲ್ಲುಗಳು
ಬಣ್ಣ ಬಣ್ಣ ಮುಖವಾಡಗಳು
ವೇಷಭೂಷಣಗಳು
ಸರಳ ರೇಖೆಯೊಳಗಿಂದ
ಹಾಯುವ ಬಿಳಿಕಿರಣಗಳು
ವಕ್ರೀಭವಿಸಿ ಆಗುವವು
ವರ್ಣ ಕಿರಣಗಳು
ನೆಲದೊಳಗಿನ ನೀರು ಕುಡಿದ ಹಕ್ಕಿ
ಹಾರುವುದು ಮೇಲೆ
ನಂದನಗಳ ಹುಡುಕಿ
ಅಂತರದಲ್ಲೇ ಗೂಡು ಕಟ್ಟಿ
ಮೊಟ್ಟೆಗಳನಿಟ್ಟು
ಕಾವು ಕೊಡುವುದು
ಒಂದೊಂದೇ ಬಣ್ಣಬಣ್ಣದ ಎಳೆಮರಿಗಳು
ಹೊರಬರುವುದ ನೋಡುತ್ತ
ಕೇಳಿ ಅರಿಯದ ಕಂಡು ಅರಿಯದ ವಸ್ತುಗಳು
ಎಂದೂ ಮೂಸಿ ನೋಡದ
ಸವಿನೋಡದ ಹೂವು ಹಣ್ಣುಗಳು
ತೇಲಾಡುವ ರಂಗು ರಂಗಿನ
ಹದಿಹರೆಯದ ಚೆಲುವೆಯರು
ಆಧಾರವಿಲ್ಲದೆ ನಿಂತ
ಕಂಬಗಳು ಬೋದಿಗೆಗಳು
ಅವುಗಳ ಮೇಲೆ ಮಹಲು ಗೋಪುರಗಳು
ಸುಗಂಧವೇ ಬೀಸುವ ತಂಗಾಳಿ
ನಿರಾಕಾರದಾಕೃತಿಗಳ ಒಯ್ಯಾರ ವೈಹಾಳಿ
ಲೋಕದಲ್ಲಿ ಬೆರಗಿನಲಿ ಮೋಡಿ ಓಡಾಡಿ
ಮತ್ತೆ ಕಣ್ಣು ತೆರೆದಾಗ ಒಡೆವುದು ಪ್ರಿಜಂ
ಕಣ್ಣು ಕುಕ್ಕುವ ಕಪ್ಪು ಬಿಳುಪಿನ ಕರಾಳ ಜಗತ್ತು
ಚುಚ್ಚುವ ವಾಸ್ತವ ಮುಳ್ಳುಗಳು
ಹೃದಯ ಹಿಂಡಿ ಕೆಳಗೆ ಬಿಡುವ ಹನಿಹನಿಗಳು
ಗಾಯಗಳಿಂದ ಇಳಿಯುವ ನೆತ್ತರ ಹನಿಗಳು
ಮತ್ತೆ ಅದೇ ಅದೇ ರಿಯಾಲಿಜಂ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಲೆ
Next post ಕೀರಂ-ರಂ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…