Home / ಕವನ / ಕವಿತೆ / ಪ್ರಿಜಂ

ಪ್ರಿಜಂ

ಕವಿಯ ಕಣ್ಣೊಂದು ಪ್ರಿಜಂ
ಜಗಕೆಲ್ಲ ಹಾಕಿದಂತೆ ಮೆಸ್ಮರಿಜಂ
ಹಿಡಿದಂತೆ ವಿಚಿತ್ರ ರಾವುಗನ್ನಡಿ
ಕಪ್ಪು ಬಿಳುಪುಗಳ ಚಿತ್ರಗಳಿಗೆ
ಮೂಡುವವೋ ಕೊಂಬುಬಾಲ
ಕೋರೆ ಹಲ್ಲುಗಳು
ಬಣ್ಣ ಬಣ್ಣ ಮುಖವಾಡಗಳು
ವೇಷಭೂಷಣಗಳು
ಸರಳ ರೇಖೆಯೊಳಗಿಂದ
ಹಾಯುವ ಬಿಳಿಕಿರಣಗಳು
ವಕ್ರೀಭವಿಸಿ ಆಗುವವು
ವರ್ಣ ಕಿರಣಗಳು
ನೆಲದೊಳಗಿನ ನೀರು ಕುಡಿದ ಹಕ್ಕಿ
ಹಾರುವುದು ಮೇಲೆ
ನಂದನಗಳ ಹುಡುಕಿ
ಅಂತರದಲ್ಲೇ ಗೂಡು ಕಟ್ಟಿ
ಮೊಟ್ಟೆಗಳನಿಟ್ಟು
ಕಾವು ಕೊಡುವುದು
ಒಂದೊಂದೇ ಬಣ್ಣಬಣ್ಣದ ಎಳೆಮರಿಗಳು
ಹೊರಬರುವುದ ನೋಡುತ್ತ
ಕೇಳಿ ಅರಿಯದ ಕಂಡು ಅರಿಯದ ವಸ್ತುಗಳು
ಎಂದೂ ಮೂಸಿ ನೋಡದ
ಸವಿನೋಡದ ಹೂವು ಹಣ್ಣುಗಳು
ತೇಲಾಡುವ ರಂಗು ರಂಗಿನ
ಹದಿಹರೆಯದ ಚೆಲುವೆಯರು
ಆಧಾರವಿಲ್ಲದೆ ನಿಂತ
ಕಂಬಗಳು ಬೋದಿಗೆಗಳು
ಅವುಗಳ ಮೇಲೆ ಮಹಲು ಗೋಪುರಗಳು
ಸುಗಂಧವೇ ಬೀಸುವ ತಂಗಾಳಿ
ನಿರಾಕಾರದಾಕೃತಿಗಳ ಒಯ್ಯಾರ ವೈಹಾಳಿ
ಲೋಕದಲ್ಲಿ ಬೆರಗಿನಲಿ ಮೋಡಿ ಓಡಾಡಿ
ಮತ್ತೆ ಕಣ್ಣು ತೆರೆದಾಗ ಒಡೆವುದು ಪ್ರಿಜಂ
ಕಣ್ಣು ಕುಕ್ಕುವ ಕಪ್ಪು ಬಿಳುಪಿನ ಕರಾಳ ಜಗತ್ತು
ಚುಚ್ಚುವ ವಾಸ್ತವ ಮುಳ್ಳುಗಳು
ಹೃದಯ ಹಿಂಡಿ ಕೆಳಗೆ ಬಿಡುವ ಹನಿಹನಿಗಳು
ಗಾಯಗಳಿಂದ ಇಳಿಯುವ ನೆತ್ತರ ಹನಿಗಳು
ಮತ್ತೆ ಅದೇ ಅದೇ ರಿಯಾಲಿಜಂ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...