Home / ಕವನ / ಕವಿತೆ / ಚಂದ್ರನಿಗೊಂದು ಸಲಹೆ

ಚಂದ್ರನಿಗೊಂದು ಸಲಹೆ

ಮೊನ್ನೆ ಸಂಜೆ ಗುರು ಶುಕ್ರರನ್ನೇ ಕಣ್ಣುಗಳಮಾಡಿ
ಆಕಾಶವೇ ನಕ್ಕಂತೆ ನೀ ಬಿಡಿಸಿಟ್ಟ ಚಿತ್ರ, ಬಹಳ ವಿಚಿತ್ರ.
ನಮ್ಮವರ ಚಂದ್ರಯಾನ ನಿನ್ನ ಮೇಲಿಳಿದಾಗ
ಆಗಿದ್ದರೂ ಆಗಿರಬಹುದು ನಿನಗೊಂದಿಷ್ಟು ಕಚಗುಳಿ.
ಆದರೆ ಮಧುಚಂದ್ರಕ್ಕೆ ಬಂದಿದ್ದಾರೆಂದೆಣಿಸಿ
ಉದಾಸೀನಮಾಡುವಂತದ್ದಲ್ಲ
ಈ ಲಿಲಿಪುಟ್ಟರ ದಾಳಿ.

ಭೂಮಿ ತಾಯಿಯ ಬಸಿರನ್ನೆ ಬಗೆಬಗೆದು ಬರಿದಾಗಿಸಿ
ಬರಡಾಗಿಸಿದ ಇವರ ಮಿತಿಯಿರದ ದುರಾಸೆ
ಈ ಕಳ್ಳರಿಗೀಗ ನಿನ್ನೊಳಗಿರುವ ಖನಿಜಗಳನ್ನೆಲ್ಲ ಕೊಳ್ಳೆ ಹೊಡಿವಾಸೆ
ಹೀಲಿಯಂ ಹೀರಿ ಸೂರ್ಯಚಂದ್ರರನ್ನೇ
ಪ್ರತಿಸೃಷ್ಟಿಸುವ ವಿಶ್ವಾಮಿತ್ರ ಹಮ್ಮಿನಹಮ್ಮಿನಮಲಲ್ಲಿ
ಹಾಡುತಿದ್ದಾರೆ ಧಮ್ಮಾರೇ ಧಮ್.

ನೀನೊಂದು ಮುದ್ದು ಮರಿ;  ಅದೇನೊ ಸರಿ
ಆದರೆ ಆಗಬಾರದಿತ್ತು ಇಷ್ಟೊಂದು ಮೊದ್ದು
ನಿನ್ನ ಕಕ್ಷದ ಒಳಗೆ ಕಾಲಿಟ್ಟರೆಂದಾಕ್ಷಣವೆ ಕರುಣಿಸಬೇಕಿತ್ತು
ಸೂರ್ಯನಂತೆ ಅಂಜನೀಕುಮಾರಕಪಾಲಮೋಕ್ಷ
ಬಹುರಾಷ್ಟ್ರೀಯ ಕಂಪನಿಗಳಿಗೆ ಖಂಡಿತ ನೀಡಬೇಡ ಪರವಾನಿಗೆ
ಆತ್ಮ ರಕ್ಷಣೆಯ ವಿಷಯದಲ್ಲಿ ಬೇಡ ಅಸಡ್ಡೆ, ಅವಜ್ಞೆ
ಹೇಗೂ ಸಧ್ಯಕ್ಕೆ ನೀನೇ ರಾಜ ನೀನೇ ಪ್ರಜೆ
ಮೊದಲು ಗಣಿಗಾರಿಕೆ ನಿಷೇದಿಸಿ ತಕ್ಷಣವೇ ಹೊರಡಿಸು ಒಂದು
ಸುಗ್ರೀವಾಜ್ಞೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...