Home / ಕವನ / ಕವಿತೆ / ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ

ಹುಟ್ಟಗರತಿಯ ಕಾಣಲಿಲ್ಲಾ ಕೊಟ್ಟ್ಯಾದಿಯಲ್ಲಾ
ಹುಟ್ಟಗರತಿಯ ಕಾಣಲಿಲ್ಲಾ ||ಪ||

ಹುಟ್ಟಗರತಿಯ ಕಾಣಲಿಲ್ಲಾ
ಪಟ್ಟಗುಡುಮ ರಂಡೆ ನೀನು
ಪಟ್ಟದಯ್ಯನವರಿಳಿಯ ಬಂದರೆ
ಎಟ್ಟಿ ಮಾತುಗಳಾಡುತೀದಿ ||೧||

ಮಾನವಂತರ ಮನೆಯೊಳ್ಹುಟ್ಟಿ
ಆದೆಲ್ಲ ಕೊಟ್ಟಿ ಅಪಕೀರ್ತಿ ಅವಗ ತಂದಿಟ್ಟಿ
ಮಾನ ಹೋದ ಬಳಿಕ ಇನ್ನು ಏನು ಕೊಟ್ಟರ ಬಂದೀತ್ಹೇಳ
ಜ್ಞಾನವು ಳ್ಳವರಿಳಿಯ ಬಂದರೆ ಹೀನ ಮಾತುಗಳಾಡತೀದಿ ||೨||

ಹರೆಯದಾಗ ತಿಳಿಯಲಿಲ್ಲಾ ಹರಿದಾಡಿದೆಲ್ಲಾ
ಮುರಕು ಮಾಡಿ ಮೂಳನಾದೆಲ್ಲಾ ಪರಕಾದಿಯೆಲ್ಲಾ
ಗರತಿ ಲಕ್ಷಣ ಹೋದಮ್ಯಾಲಿನ್ನು ತಿರುಗಿ ಗರತ್ಯಾಗಬಹುದೆ ?
ಇರಲಿ ನಿಮ್ಮಯ ಶಾಂತಿಗುಣವು ಸೂಳಿಗೆ ಗರತೆನ್ನಬಹುದೆ? ||೩||

ಗಂಡ ಪುಂಡನಾಗಲಿಲ್ಲ ಸಂಡನಾದನಲ್ಲಾ
ಕಂಡು ನಿನ್ನಾಳುತಾನಲ್ಲಾ
ಲಂಡ ಬಾಲದ ಮಂಗನಂತೆ ಗಂಡನ ಕುಣಿಸ್ಯಾಡುತೀ
ಕಂಡು ನಾವು ತಿಳಿಯಬಂದರೆ ಬಂಡಮಾತುಗಳಾಡುತೀದಿ ||೪||

ಸೀಗಿಹಳ್ಳಿಮಠದ ನಾರಿವಳಾ ಬಾಜಾರಿ ಇವಳಾ
ಯಾರು ಮಠಕ ಬಂದರ ಸೇರದವಳಾ
ಊರ ಸರಕಾರಕ್ಕೆ ಹೇಳಿ ಭಾರಿ ದಂಡಾ ಕೊಡಿಸಬೇಕು.
ಧೀರ ಶಿಶುವಿನಾಳಧೀಶನ ನೂರಬಿಸ್ತಿ ಅರಿಯಳಿವಳು ||೫||

*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಶ್ರೀಕಾಂತ್ ಮಿಶ್ರಿಕೋಟಿ