ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

table-71380_960_720ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು ಹೆಚ್ಚು ರುಚಿಯಾಗಿ ಕಾಣಿಸುತ್ತದೆಂದು ಅವರ ಪ್ರಯೋಗಗಳಲ್ಲಿ ವ್ಯಕ್ತವಾಗಿದೆ.

ವ್ಯಕ್ತಿಗಳು ಬೀರ್‍, ಕಾಫಿ, ಚಹಾ, ವಿಸ್ಕಿ ಇಂಥ ವಿವಿಧ ಪೇಯಗಳನ್ನು ಸೇವಿಸುತ್ತಿರುವಾಗ ನಾದೋತ್ಪಕ ಯಂತ್ರದಿಂದ ವಿವಿಧ ಆವರ್ತನ ಪ್ರಮಾಣಗಳ ಧ್ವನಿಗಳನ್ನು ಹೊರಡಿಸಿದರೆ ಆ ವಿಶಿಷ್ಠ ಆವರ್ತನದ ಧ್ವನಿಯನ್ನು ಕೇಳುವಾಗ ಪೇಯ ಹೆಚ್ಚು ರುಚಿಕಟ್ಟಾಗಿ ಅನಿಸುತ್ತದೆ!  ಧ್ವನಿಯನ್ನು ಅದಕ್ಕಿಂತ ಏರಿಸಿದರೆ ಅಥವಾ ಇಳಿಸಿದರೆ ಪೇಯದ ರುಚಿ ಕೆಟ್ಟಂತೆ ಅನಿಸುತ್ತದೆ.

ಆದರೆ ಈ ರುಚಿಧ್ವನಿ ಆಯಾ ವ್ಯಕ್ತಿಯನ್ನು ಅವಲಂಬಿಸದೇ ಆಯಾ ಪೇಯವನ್ನು ಅವಲಂಬಿಸಿದೆ.  ಬೀರನ್ನು ರುಚಿಗೊಳಿಸವು ನಾದವೇ ಬೇರೆ, ವಿಸ್ಕಿಯನ್ನು, ಕಾಫಿಯನ್ನು ರುಚಿಗೊಳಿಸುವ ನಾದವೇ ಬೇರೆ.  ಆಯಾ ಪೇಯ ಸಂವಾದಿಯಾದ ನಾದ ಬರುತ್ತಿದ್ದರೆ ಸಾಮಾನ್ಯವಾಗಿ ಎಲ್ಲರಿಗೂ ಆಯಾ ಪೇಯ ರುಚಿಯಾಗಿ ಕಾಣುತ್ತದೆ!

ಅಂದರೆ ಇದರರ್ಥ, ಹೋಟೆಲ್ಗಳಲ್ಲಿ ಗಿರಾಕಿಗಳು ಭೋಜನ ಮಾಡುತ್ತಿರುವಾಗ ಅಥವಾ ಪೇಯ ಕುಡಿಯುತ್ತಿರುವಾಗ ಒಂದು ವಿಶಿಷ್ಠ ಬಗೆಯ ನಾದ ಹೊರಡಿಸಿದರೆ ಅವರಿಗೆ ಆ ಭೋಜನ, ಪೇಯ ರುಚಿಕಟ್ಟಾಗಿ ಅನಿಸುತ್ತದೆ!  ಹೋಟೆಲ್ ಮಾಲಿಕರೆ ನಿಮಗೆ ಈ ಶೋಧದ ಅರ್ಥವಾಗಿರಬೇಕಲ್ಲ?  ತಾವು ಸಹ ಈ ಶೋಧದ ಪ್ರಯೋಜನ ಪಡೆಯಬಹುದಲ್ಲ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನುಷ್ಯ
Next post ದಾಂಪತ್ಯ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…