Home / ಲೇಖನ / ವಿಜ್ಞಾನ / ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

ಹೋಟೆಲ್ ಮಾಲಿಕರಿಗೊಂದು ಕಿವಿಮಾತು!

table-71380_960_720ರುಚಿಗೂ, ಮೂಗಿಗೂ ಸಂಬಂಧವಿದೆಯೆಂಬುದು ಎಂದೋ ವಿಜ್ಞಾನಿಗಳು ಕಂಡ ಮಾತಾಗಿದೆ.  ಅಲ್ಲದೆ, ಕಿವಿಗೂ ರುಚಿಗೂ ಸಂಬಂಧವುಂಟೆಂದು ಡನ್ಮಾರ್ಕಿನ ವಿಜ್ಞಾನಿ ಡಾ|| ಕ್ರಿಶ್ಚನ್ ಹೋಲ್ಟ್ ಹ್ಯಾನ್‌ಸನ್ನರು ಎಂದೋ ಪ್ರತಿಪಾದಿಸಿದ್ದಾರೆ.  ವಿಶಿಷ್ಠ ನಾದಗಳು ಕಿವಿಗೆ ಬೀಳುತ್ತಿರುವಾಗ ತಿನ್ನುವ ಪದಾರ್ಥಗಳು ಹೆಚ್ಚು ರುಚಿಯಾಗಿ ಕಾಣಿಸುತ್ತದೆಂದು ಅವರ ಪ್ರಯೋಗಗಳಲ್ಲಿ ವ್ಯಕ್ತವಾಗಿದೆ.

ವ್ಯಕ್ತಿಗಳು ಬೀರ್‍, ಕಾಫಿ, ಚಹಾ, ವಿಸ್ಕಿ ಇಂಥ ವಿವಿಧ ಪೇಯಗಳನ್ನು ಸೇವಿಸುತ್ತಿರುವಾಗ ನಾದೋತ್ಪಕ ಯಂತ್ರದಿಂದ ವಿವಿಧ ಆವರ್ತನ ಪ್ರಮಾಣಗಳ ಧ್ವನಿಗಳನ್ನು ಹೊರಡಿಸಿದರೆ ಆ ವಿಶಿಷ್ಠ ಆವರ್ತನದ ಧ್ವನಿಯನ್ನು ಕೇಳುವಾಗ ಪೇಯ ಹೆಚ್ಚು ರುಚಿಕಟ್ಟಾಗಿ ಅನಿಸುತ್ತದೆ!  ಧ್ವನಿಯನ್ನು ಅದಕ್ಕಿಂತ ಏರಿಸಿದರೆ ಅಥವಾ ಇಳಿಸಿದರೆ ಪೇಯದ ರುಚಿ ಕೆಟ್ಟಂತೆ ಅನಿಸುತ್ತದೆ.

ಆದರೆ ಈ ರುಚಿಧ್ವನಿ ಆಯಾ ವ್ಯಕ್ತಿಯನ್ನು ಅವಲಂಬಿಸದೇ ಆಯಾ ಪೇಯವನ್ನು ಅವಲಂಬಿಸಿದೆ.  ಬೀರನ್ನು ರುಚಿಗೊಳಿಸವು ನಾದವೇ ಬೇರೆ, ವಿಸ್ಕಿಯನ್ನು, ಕಾಫಿಯನ್ನು ರುಚಿಗೊಳಿಸುವ ನಾದವೇ ಬೇರೆ.  ಆಯಾ ಪೇಯ ಸಂವಾದಿಯಾದ ನಾದ ಬರುತ್ತಿದ್ದರೆ ಸಾಮಾನ್ಯವಾಗಿ ಎಲ್ಲರಿಗೂ ಆಯಾ ಪೇಯ ರುಚಿಯಾಗಿ ಕಾಣುತ್ತದೆ!

ಅಂದರೆ ಇದರರ್ಥ, ಹೋಟೆಲ್ಗಳಲ್ಲಿ ಗಿರಾಕಿಗಳು ಭೋಜನ ಮಾಡುತ್ತಿರುವಾಗ ಅಥವಾ ಪೇಯ ಕುಡಿಯುತ್ತಿರುವಾಗ ಒಂದು ವಿಶಿಷ್ಠ ಬಗೆಯ ನಾದ ಹೊರಡಿಸಿದರೆ ಅವರಿಗೆ ಆ ಭೋಜನ, ಪೇಯ ರುಚಿಕಟ್ಟಾಗಿ ಅನಿಸುತ್ತದೆ!  ಹೋಟೆಲ್ ಮಾಲಿಕರೆ ನಿಮಗೆ ಈ ಶೋಧದ ಅರ್ಥವಾಗಿರಬೇಕಲ್ಲ?  ತಾವು ಸಹ ಈ ಶೋಧದ ಪ್ರಯೋಜನ ಪಡೆಯಬಹುದಲ್ಲ?
*****

Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...