ಬದುಕೆಂಬ ರೈಲು…

ಬದುಕೆಂಬ ರೈಲು…

Railuಪ್ರಿಯ ಸಖಿ,
ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರಲ್ಲಿ ಚಿಂತೆ ಇಲ್ಲದೇ ಆರಾಮ ನಿದ್ದೆಯಲ್ಲಿದ್ದಾರೆ. ಮತ್ತೆ ಕೆಲವರು ಇಳಿಯುವ ತಾಣ ಬಂತೇ ಎಂದು ಚಡಪಡಿಸುತ್ತಿದ್ದಾರೆ. ಮತ್ತೊಬ್ಬರ ಎದುರಿಗೆ ಕಾಲುಚಾಚಿ ಕೂರಲು ಆಗದಷ್ಟು ಲಗೇಜಿನ ಹೊರೆ, ಕುಳಿತುಕೊಳ್ಳಲು ಜಾಗ ಸಾಲದೇ ಅರ್ಧವಷ್ಟೇ ಕೂತವರು, ನೆಟ್ಟಗೆ ಕೂರಲೂ ಆಗದೇ, ನಿಲ್ಲಲೂ ಆಗದೇ ಸಿಡಿಮಿಡಿಗುಟ್ಟುತ್ತಿದ್ದಾರೆ. ಕೂತವಳ ಮಗುವೊಂದು ರಚ್ಚೆ ಹಿಡಿದಿದೆ. ಅದನ್ನು ಸುಧಾರಿಸಲಾಗದೇ ತಾಯಿ ಆತಂಕಕ್ಕೊಳಗಾಗಿದ್ದಾಳೆ.  ರೈಲಿನಲ್ಲಿ ಕೂತಾಗಿದೆ ಪಕ್ಕದ ಪುಂಡು ಹುಡುಗನ ಕಿರಿಕಿರಿಯನ್ನು ಆಡಲಾಗದೇ, ಅನುಭವಿಸಲಾಗದೇ ಪ್ರಯಾಣ ಯಾವಾಗ ಮುಗಿಯುವುದೋ ಎಂದು ಕಾತುರಳಾಗಿದ್ದಾಳೆ ಈ ಯುವತಿ. ಮತ್ತೊಬ್ಬ ಆರಾಮವಾಗಿ ಬೀಡಾ ಜಗಿಯುತ್ತಾ ಕಿಟಕಿಯಾಚೆಯ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿದ್ದಾನೆ. ನಿಂತವರ ಪಾಡೂ ಒಬ್ಬೊಬ್ಬರದು ಒಂದೊಂದು ರೀತಿ. ಪ್ರಯಾಣದ ಆರಂಭದಿಂದ ಗಮ್ಯದವರೆಗೂ ನಿಂತೇ ಹಲವರ ಪಯಣ. ಮತ್ತೆ ಕೆಲವರಿಗೆ ಮಧ್ಯದ ಸ್ಟೇಷನ್ಗಳಲ್ಲಿ ಇಳಿದವರಿಂದ ಸೀಟು ಸಿಕ್ಕು ಆರಾಮ. ಕುಂಟರಾಗಲಿ, ಕುರುಡರಾಗಲಿ ಕೂರಬಹುದು ಇಲ್ಲದಿದ್ದರೆ ನಿಂತೇ ಪಯಣಿಸುವ ಹಣೆಬರಹ.

ಸಖಿ, ಬದುಕೆಂಬುದೂ ಹೀಗೇ ಒಬ್ಬೊಬ್ಬರದು ಒಂದೊಂದು ರೀತಿಯ ಸ್ಥಿತಿಯಲ್ಲವೇ? ಅದೇನು ಪೂರ್ವಪಾಪ ಪುಣ್ಯದ ಫಲವೋ, ಅದೃಷ್ಟವೋ. ಹಣೆಬರಹವೋ, ವಿಧಿಲಿಖಿತವೋ, ಸ್ವಯಂಕೃತ ಸ್ಥಿತಿಯೋ ಹೇಗೆ ವಿಶ್ಲೇಶಿಸುವುದು? ಬದುಕಿನುದ್ದಕ್ಕೂ ಕಷ್ಟಪಡುವವನು, ಬದುಕಿನುದ್ದಕ್ಕೂ ಸುಖಪಡುವವನು. ಅಕಸ್ಮಾತ್ತಾಗಿ ಸುಖಿ, ಅಸುಖಿಯಾಗುವುದು, ಬಡವ ಶ್ರೀಮಂತನಾಗುವುದು, ಶ್ರೀಮಂತ ಬಡವನಾಗುವುದು ಎಲ್ಲ ಅದ್ಭುತಗಳನ್ನು ಕಾಣುತ್ತಿರುತ್ತೇವೆ. ಇದೆಲ್ಲಾ ಹೇಗಾಯ್ತು? ಎಂದು ಆಶ್ಚರ್ಯಗೊಳ್ಳುತ್ತೇವೆ. ಅವರವರ ಅದೃಷ್ಟ ಎಂದು ಗೊಣಗುತ್ತೇವೆ. ಕೊನೆಗೂ ಬದುಕಿನ ಒಳಮರ್ಮ ನಮ್ಮ ಸೀಮಿತ ಬುದ್ಧಿಗೆ ನಿಲುಕುವುದೇ ಇಲ್ಲ. ಕಾಣದ ಶಕ್ತಿ ಕೈವಾಡ ಎಂಬ ಹೆಸರಿನಿಂದ ಎಲ್ಲವನ್ನೂ ಮುಚ್ಚಿಬಿಡುತ್ತೇವೆ. ಹಾಗೆ ನೋಡಿದರೆ ಈ ಬದುಕಿನಲ್ಲಿ ಮಾನವನಿಗೆ ಅರ್ಥವಾಗಿದ್ದಕ್ಕಿಂತ ಅರ್ಥವಾಗದ್ದೇ ಹೆಚ್ಚಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನರಭಕ್ಷಕಿ
Next post ಬಾಯಿ

ಸಣ್ಣ ಕತೆ

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys