Home / ಲೇಖನ / ಇತರೆ / ಬದುಕೆಂಬ ರೈಲು…

ಬದುಕೆಂಬ ರೈಲು…

Railuಪ್ರಿಯ ಸಖಿ,
ರೈಲು ಕ್ಷಣಕಾಲ ಇಲ್ಲಿ ನಿಂತಿದೆ. ಹತ್ತುವವರು ಹತ್ತಿದ್ದಾರೆ. ಇಳಿಯುವವರು ಇಳಿದಿದ್ದಾರೆ. ರೈಲು ಹತ್ತಿದವರಿಗೆಲ್ಲಾ ಸೀಟು ಸಿಕ್ಕಿಲ್ಲ. ಕೆಲವರು ನಿಂತಿದ್ದಾರೆ. ಕೆಲವರು ಕುಳಿತಿದ್ದಾರೆ. ಅದರಲ್ಲೂ ಅದೆಷ್ಟೊಂದು ರೀತಿಯ ಜನ ! ಕುಳಿತವರಲ್ಲಿ ಚಿಂತೆ ಇಲ್ಲದೇ ಆರಾಮ ನಿದ್ದೆಯಲ್ಲಿದ್ದಾರೆ. ಮತ್ತೆ ಕೆಲವರು ಇಳಿಯುವ ತಾಣ ಬಂತೇ ಎಂದು ಚಡಪಡಿಸುತ್ತಿದ್ದಾರೆ. ಮತ್ತೊಬ್ಬರ ಎದುರಿಗೆ ಕಾಲುಚಾಚಿ ಕೂರಲು ಆಗದಷ್ಟು ಲಗೇಜಿನ ಹೊರೆ, ಕುಳಿತುಕೊಳ್ಳಲು ಜಾಗ ಸಾಲದೇ ಅರ್ಧವಷ್ಟೇ ಕೂತವರು, ನೆಟ್ಟಗೆ ಕೂರಲೂ ಆಗದೇ, ನಿಲ್ಲಲೂ ಆಗದೇ ಸಿಡಿಮಿಡಿಗುಟ್ಟುತ್ತಿದ್ದಾರೆ. ಕೂತವಳ ಮಗುವೊಂದು ರಚ್ಚೆ ಹಿಡಿದಿದೆ. ಅದನ್ನು ಸುಧಾರಿಸಲಾಗದೇ ತಾಯಿ ಆತಂಕಕ್ಕೊಳಗಾಗಿದ್ದಾಳೆ.  ರೈಲಿನಲ್ಲಿ ಕೂತಾಗಿದೆ ಪಕ್ಕದ ಪುಂಡು ಹುಡುಗನ ಕಿರಿಕಿರಿಯನ್ನು ಆಡಲಾಗದೇ, ಅನುಭವಿಸಲಾಗದೇ ಪ್ರಯಾಣ ಯಾವಾಗ ಮುಗಿಯುವುದೋ ಎಂದು ಕಾತುರಳಾಗಿದ್ದಾಳೆ ಈ ಯುವತಿ. ಮತ್ತೊಬ್ಬ ಆರಾಮವಾಗಿ ಬೀಡಾ ಜಗಿಯುತ್ತಾ ಕಿಟಕಿಯಾಚೆಯ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿದ್ದಾನೆ. ನಿಂತವರ ಪಾಡೂ ಒಬ್ಬೊಬ್ಬರದು ಒಂದೊಂದು ರೀತಿ. ಪ್ರಯಾಣದ ಆರಂಭದಿಂದ ಗಮ್ಯದವರೆಗೂ ನಿಂತೇ ಹಲವರ ಪಯಣ. ಮತ್ತೆ ಕೆಲವರಿಗೆ ಮಧ್ಯದ ಸ್ಟೇಷನ್ಗಳಲ್ಲಿ ಇಳಿದವರಿಂದ ಸೀಟು ಸಿಕ್ಕು ಆರಾಮ. ಕುಂಟರಾಗಲಿ, ಕುರುಡರಾಗಲಿ ಕೂರಬಹುದು ಇಲ್ಲದಿದ್ದರೆ ನಿಂತೇ ಪಯಣಿಸುವ ಹಣೆಬರಹ.

ಸಖಿ, ಬದುಕೆಂಬುದೂ ಹೀಗೇ ಒಬ್ಬೊಬ್ಬರದು ಒಂದೊಂದು ರೀತಿಯ ಸ್ಥಿತಿಯಲ್ಲವೇ? ಅದೇನು ಪೂರ್ವಪಾಪ ಪುಣ್ಯದ ಫಲವೋ, ಅದೃಷ್ಟವೋ. ಹಣೆಬರಹವೋ, ವಿಧಿಲಿಖಿತವೋ, ಸ್ವಯಂಕೃತ ಸ್ಥಿತಿಯೋ ಹೇಗೆ ವಿಶ್ಲೇಶಿಸುವುದು? ಬದುಕಿನುದ್ದಕ್ಕೂ ಕಷ್ಟಪಡುವವನು, ಬದುಕಿನುದ್ದಕ್ಕೂ ಸುಖಪಡುವವನು. ಅಕಸ್ಮಾತ್ತಾಗಿ ಸುಖಿ, ಅಸುಖಿಯಾಗುವುದು, ಬಡವ ಶ್ರೀಮಂತನಾಗುವುದು, ಶ್ರೀಮಂತ ಬಡವನಾಗುವುದು ಎಲ್ಲ ಅದ್ಭುತಗಳನ್ನು ಕಾಣುತ್ತಿರುತ್ತೇವೆ. ಇದೆಲ್ಲಾ ಹೇಗಾಯ್ತು? ಎಂದು ಆಶ್ಚರ್ಯಗೊಳ್ಳುತ್ತೇವೆ. ಅವರವರ ಅದೃಷ್ಟ ಎಂದು ಗೊಣಗುತ್ತೇವೆ. ಕೊನೆಗೂ ಬದುಕಿನ ಒಳಮರ್ಮ ನಮ್ಮ ಸೀಮಿತ ಬುದ್ಧಿಗೆ ನಿಲುಕುವುದೇ ಇಲ್ಲ. ಕಾಣದ ಶಕ್ತಿ ಕೈವಾಡ ಎಂಬ ಹೆಸರಿನಿಂದ ಎಲ್ಲವನ್ನೂ ಮುಚ್ಚಿಬಿಡುತ್ತೇವೆ. ಹಾಗೆ ನೋಡಿದರೆ ಈ ಬದುಕಿನಲ್ಲಿ ಮಾನವನಿಗೆ ಅರ್ಥವಾಗಿದ್ದಕ್ಕಿಂತ ಅರ್ಥವಾಗದ್ದೇ ಹೆಚ್ಚಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್