ಎಂಥ ಗೋಪೀ ಕಣ್ಣೊಳೆಂಥ ಶಾಂತಿ!

ಎಂಥ ಗೋಪೀ ಕಣ್ಣೊಳೆಂಥ ಶಾಂತಿ!
ಕೆನೆ ಹಾಲು ಮೈ ಚಿನ್ನ, ಸೂರ್ಯಕಾಂತಿ

ಹಾಲು ಗಡಿಗೆಯ ಹೊತ್ತು
ತಲೆಯ ಮೇಲೆ
ಸೆರಗಿಳಿಸಿ ಬೆಡಗಲ್ಲಿ
ಹೆಗಲ ಮೇಲೆ
ಮುಡಿದ ಮಲ್ಲಿಗೆ ಕಂಪ
ಸುತ್ತ ಹರಡಿ
ನಡೆಯುವಳು ನನ್ನ
ನೆಮ್ಮದಿಯ ಕದಡಿ

ನಡಿಗೆಯೇ ನೃತ್ಯವಾದಂಥ ಹೆಣ್ಣು
ಕಲ್ಪವೃಕ್ಷಕೆ ತೂಗುವಂಥ ಹಣ್ಣು,
ಕಣ್ಣಲ್ಲೆ ನನ್ನನ್ನು ಬಾಚಿ ಸೆಳೆದು
ಸುರಿದು ಮುಚ್ಚಿದಳವಳ ಗಡಿಗೆಗಳೆದು!

ನನ್ನ ಕೊಳಲಿನ ಹಾಗೆ ಇವಳು ನನಗೆ
ಇಳಿದು ಹಬ್ಬಿದಳು ನನ್ನೆದೆಯ ಒಳಗೆ
ಅಲ್ಲಿ ಕಾಡುಗಳಲ್ಲಿ ಹಾದಿ ತೆರೆದು
ಕರೆದೊಯ್ದು ತೋರುವಳು ನನ್ನ ನನಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೧೨
Next post ದಿಗ್ವಿಜಯ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys