Home / ಕವನ / ಕವಿತೆ / ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

ಚಿತ್ರ: ಉಲ್ರಿಕೆ ಮಾಯ್
ಚಿತ್ರ: ಉಲ್ರಿಕೆ ಮಾಯ್

ಬಿದಿದ್ದೇನೆ: ‘ಬಕ್ಬಾರ್‍ಲು’
ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ.
ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’!
ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!
ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ…
ಮೈ ಹೆಪ್ಪುಗಟ್ಟುವ ತನಕ…! ಗಿರಗಿರನೇ ಬುಗುರಿಯಾದೆ.
ಐದೂವರೆ ಅಡಿ ಎತ್ತರದಾ ನಾನೊಬ್ಬ!
ಇಲ್ಲಿ… ಮನುಶ್ಯನೆಂದೇ ನನ್ನ ತಿಳಿದಿಲ್ಲರೊಬ್ಬ!
ಅಬ್ಬಾ! ಏಳು ಮಿಂಡ್ರಿಗಳಪ್ಪ!
*  *  *

ಕೋಟಿ, ಕೋಟಿ ಜನರ ಮಧ್ಯೆ…
ಯಾರಿಗೂ ಕಾಣುತ್ತಿಲ್ಲ! ನೆತ್ತಿ ಮೇಲೆ ಜನರ ಕಣ್ಣು!
ಯಾರಾದರೂ ಬಂದಾರು…
ಕೈಹಿಡಿದೆತ್ತಿ, ಗುಕ್ಕು ನೀರು, ಬಾಯಿಗೆ ಬಿಟ್ಟು,
ಗಾಳಿ ಬೀಸಿ, ಕೈಹಿಡಿದು,
ಎಬ್ಬಿಸುವರೆಂದು, ಜೀವ ಬಿಗಿ ಹಿಡಿದು, ಕಾದಿದ್ದೇನೆ!
*  *  *

ಅಕ್ಕ ಪಕ್ಕದಲಿ, ತುಳಿದು ಎಡವಿ ಹೋದವರ…
ಬಿಂಬ, ಪ್ರತಿಬಿಂಬವಾ ಕಂಡು, ಪುಲಕಿತಗೊಂಡಿದ್ದೇನೆ!
ಕಣ್ಣುಗಳಲಿ, ಕೂಗಿಕೂಗಿ… ಕರೆದಿದ್ದೇನೆ.
ಓಡುವವನ ಇಶ್ಟು ಸುಲಭದೀ, ಎಡವಿ ಕೆಡಿವಿದವರು…
ಈಗ ಮೈದಡವಿ, ಮೇಲೆತ್ತುವರೇನು?!
ಥೂ! ಘನ್ನು ಘಾತುಕರು!
ಅಸಲು ತಾಯ್ಗಿಂಡ್ರು…
ಏಳ್ಗೆ… ಸಹಿಸದ ಜನರ ನಡುವೆ,
ಬಲು ಅವಸರದಿ, ಎಡವಿ ಬಿದ್ದಿದ್ದು,
ತುಪ್ಪ ಜಾರಿ, ಕೊಚ್ಚೆಗೆ ಬಿದ್ದಂತಾತು!
*  *  *

ಈಗ ಜೀವ ಹೋಗುವ ಭಯವಿದೆ!
ಅಪ್ಪನ ಜೀತದ ‘ರಕ್ಕ’ದಲಿ,
ಕಲಿತದ್ದು ಸೊನ್ನೆಯೆಂಬುದೀಗ ತಿಳಿದು,
ಅಮ್ಮನ ಕೈ ತುತ್ತು, ‘ಬಲಹೀನ’ವೆಂದು ಅರಿತು,
ಹಾದಿ ಬೀದಿಯ ತುಂಬಾ, ಜನರ ‘ಆಡಂಬೋಲ’ ಕಂಡು,
ನರನಾಡಿಗಳೇ ಹುದುಗಿದವಲ್ಲ….?!
*  *  *

ತ್ವಗ್ಲು ಹದಾ ಮಾಡುವ ಚಮ್ಮಾರನ,
‘ಕಶ್ಟ’ ಮಾಡಿ, ಹೊಟ್ಟೆ ಹೊರೆವ ಶಿಷ್ಠರನ,
ಬಾಳ ಹಡುಗು, ಮಾಡುವ ಬಡಿಗನ,
ಮಡಿ ಮಾಡಿ, ದುಡಿದುಣ್ಣುವ ಮಡಿವಾಳರನ,
ಕರೆದಾಗ, ಕೆರಬಿಟ್ಟು, ಸರಸರ ಬರುವ ಕೂಲಿಕಾರನ,
ಹಳೆಕಾಲ್ಮಾರಿಗೆ, ಹೊಸ ಮೊಳೆ ಹೊಡೆವ, ಮಣೆಗಾರನ,
ಕಾಳು, ಕಡಿ, ತೂರಿ, ತುರಿಕೆಯೆಬ್ಬಿಸುವ, ಗರತಿಯರನ,
ಸಿಗಿದು, ‘ಆರ್‍ಬಾಡ್ಸಿ’ ಒಣಗಲಿಟ್ಟಿದ್ದಾರೆ!
ಬಳ್ಳಾರಿ ಜೈಲುಗೋಡೆಗಳ ಮಧ್ಯೆ…. ವೃಥಾ…ಽಽ
ಹಟ್ಟವರನ್ನು ಬಿಟ್ಟು,
ಇಣುಕಿ ನೋಡಿದವರಿಗೆ, ನೇಣು ಶಿಕ್ಷೆಯೆಂದರೇನು?!
ಈ ಹಲ್ಕಾ ವ್ಯವಸ್ಥೆ ಮಧ್ಯೆ…
ಇಂಥಾ ತಾಯಿಗಂಡರ ನಡುವೆ,
ನಾ ನ್ಯಾಯ, ನೀತಿಗಾಗಿ…
ಬಾಯಿ, ಬಾಯಿ, ಹಂಬಲಿಸಿ,
ಬಿದ್ದ ಸ್ಥಿತಿಯಲ್ಲೇ, ಹಗಲುಗನಸು ಕಾಣುತ್ತಿದ್ದೇನೆ!
ವಿಲವಿಲ ಒದ್ದಾಡಿ, ಒದ್ದಾಡಿ… ರಪ್ಪೆ ಬಡಿಯುತ್ತಿದ್ದೇನೆ!
*  *  *

ಈಗೀಗ ಮೊಂಡಾಗಿವೆ!
ಮೂಗು, ಮುಷಿಣಿ, ಈ ನನ್ನ ಹಲ್ಲೂಗಳೂ…
ಜೋತು ಬಿದ್ದ, ಎದೆ ಗುಂಡುಗಳೂ…
ತುಕ್ಕಿಡಿದ ರಂಪಿಗೆ, ಉಳಿ, ಕೊಡ್ತಿ, ಕ್ವಂಬು, ಇಕ್ಕಳಗಳೂ…
ಮೂಗರ್ಧ ಜನರ ನಡುವೆ, ಕಳೆಯುತ್ತಿದ್ದೇನೆ…
ನಾ ಕಳೆದು ಅಳಿದು, ಹೋಗುವಾ ಮುನ್ನ…
ಹುಡುಕಿ ಕೊಡುವ, ಹೃದಯ ಶ್ರೀಮಂತರಿದ್ದರೆ…
ಬನ್ನಿ! ನನ್ನ ಎದ್ದು ಕೊಡ್ರಿಸಿ, ಗುಕ್ಕು ನೀರು ಬಿಟ್ಟು,
ಬೆನ್ನು ಚೆಪ್ಪರಿಸಿ, ‘ನಾಲಿಗೆ ಪ್ರೀತಿ’ ತೋರಿ ಸಾಕು!!
*  *  *

ಈ ಕಪ್ಪು ನೆಲ ಕೆಂಪಾಯಿತಲ್ಲಾ?!
ಕೂಲಿಗಾಗಿ ಸಾಲು ಸಾಲು ಜನರಿಲ್ಲಿ…
ಕಲ್ಲಿಗೆ, ಮಣ್ಣಿಗೆ, ಮರಕ್ಕೆ, ಕೆರಕ್ಕೆ…
ಕರಮುಗಿದು, ಶಿರಬಾಗಿ, ಶರಣೆಂಬಾ… ಮೂರ್ಖರಿರುವಾಗ,
ತನ್ನಂತಿರುವಾ… ಮನುಜನ, ಕಣ್ಣೆತ್ತಿ ನೋಡದವರ, ಮಧ್ಯೆ-
ದನಗಳೆಶ್ಟೋ ವಾಸಿಯೆಂಬಾ ಘಾಸಿಲಿ,
ಮನದಲಿ, ಕೋಪ ಉಕ್ಕಿ- ಉಕ್ಕಿ- ಕೊನೆಗೆ ತಣ್ಣಗಾಗಿದ್ದೇನೆ!
ಬೆಟ್ಟದಲಿ… ಹುಲ್ಲಾಗಿ, ಮಲ್ಲಿಗೆಯಾಗಿ, ಮರವಾಗಿ, ಹಣ್ಣಾಗಿ,
ಹಳ್ಳದಾ ಚಿಲುಮೆಯಾಗಿ, ಹಸುವಾಗಿ, ಎತ್ತಾಗಿ,
ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಕಲ್ಲಾಗಿ,
ಕೊನೆಗೆ… ಪರ್‍ಕೆ, ತಿರುಬೋಕಿಯಾದರೆಶ್ಟೋ ಚೆನ್ನ… ಚಿನ್ನ!!
ಎಂಬ… ಜಿಗುಪ್ಸೆಯಲಿ,
ಮನನೊಂದು, ನೊಂದು… ಬೆಂದು…
ನನ್ನನ್ನು ನಾ ಕೊಂದು… ಕೊಂದು…
ಇಂದು…
ಕಣ್ಣು ಮುಚ್ಚಿದೆ!!
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...