Home / ಕವನ / ಕವಿತೆ / ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

ಚಿತ್ರ: ಉಲ್ರಿಕೆ ಮಾಯ್
ಚಿತ್ರ: ಉಲ್ರಿಕೆ ಮಾಯ್

ಬಿದಿದ್ದೇನೆ: ‘ಬಕ್ಬಾರ್‍ಲು’
ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ.
ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’!
ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!
ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ…
ಮೈ ಹೆಪ್ಪುಗಟ್ಟುವ ತನಕ…! ಗಿರಗಿರನೇ ಬುಗುರಿಯಾದೆ.
ಐದೂವರೆ ಅಡಿ ಎತ್ತರದಾ ನಾನೊಬ್ಬ!
ಇಲ್ಲಿ… ಮನುಶ್ಯನೆಂದೇ ನನ್ನ ತಿಳಿದಿಲ್ಲರೊಬ್ಬ!
ಅಬ್ಬಾ! ಏಳು ಮಿಂಡ್ರಿಗಳಪ್ಪ!
*  *  *

ಕೋಟಿ, ಕೋಟಿ ಜನರ ಮಧ್ಯೆ…
ಯಾರಿಗೂ ಕಾಣುತ್ತಿಲ್ಲ! ನೆತ್ತಿ ಮೇಲೆ ಜನರ ಕಣ್ಣು!
ಯಾರಾದರೂ ಬಂದಾರು…
ಕೈಹಿಡಿದೆತ್ತಿ, ಗುಕ್ಕು ನೀರು, ಬಾಯಿಗೆ ಬಿಟ್ಟು,
ಗಾಳಿ ಬೀಸಿ, ಕೈಹಿಡಿದು,
ಎಬ್ಬಿಸುವರೆಂದು, ಜೀವ ಬಿಗಿ ಹಿಡಿದು, ಕಾದಿದ್ದೇನೆ!
*  *  *

ಅಕ್ಕ ಪಕ್ಕದಲಿ, ತುಳಿದು ಎಡವಿ ಹೋದವರ…
ಬಿಂಬ, ಪ್ರತಿಬಿಂಬವಾ ಕಂಡು, ಪುಲಕಿತಗೊಂಡಿದ್ದೇನೆ!
ಕಣ್ಣುಗಳಲಿ, ಕೂಗಿಕೂಗಿ… ಕರೆದಿದ್ದೇನೆ.
ಓಡುವವನ ಇಶ್ಟು ಸುಲಭದೀ, ಎಡವಿ ಕೆಡಿವಿದವರು…
ಈಗ ಮೈದಡವಿ, ಮೇಲೆತ್ತುವರೇನು?!
ಥೂ! ಘನ್ನು ಘಾತುಕರು!
ಅಸಲು ತಾಯ್ಗಿಂಡ್ರು…
ಏಳ್ಗೆ… ಸಹಿಸದ ಜನರ ನಡುವೆ,
ಬಲು ಅವಸರದಿ, ಎಡವಿ ಬಿದ್ದಿದ್ದು,
ತುಪ್ಪ ಜಾರಿ, ಕೊಚ್ಚೆಗೆ ಬಿದ್ದಂತಾತು!
*  *  *

ಈಗ ಜೀವ ಹೋಗುವ ಭಯವಿದೆ!
ಅಪ್ಪನ ಜೀತದ ‘ರಕ್ಕ’ದಲಿ,
ಕಲಿತದ್ದು ಸೊನ್ನೆಯೆಂಬುದೀಗ ತಿಳಿದು,
ಅಮ್ಮನ ಕೈ ತುತ್ತು, ‘ಬಲಹೀನ’ವೆಂದು ಅರಿತು,
ಹಾದಿ ಬೀದಿಯ ತುಂಬಾ, ಜನರ ‘ಆಡಂಬೋಲ’ ಕಂಡು,
ನರನಾಡಿಗಳೇ ಹುದುಗಿದವಲ್ಲ….?!
*  *  *

ತ್ವಗ್ಲು ಹದಾ ಮಾಡುವ ಚಮ್ಮಾರನ,
‘ಕಶ್ಟ’ ಮಾಡಿ, ಹೊಟ್ಟೆ ಹೊರೆವ ಶಿಷ್ಠರನ,
ಬಾಳ ಹಡುಗು, ಮಾಡುವ ಬಡಿಗನ,
ಮಡಿ ಮಾಡಿ, ದುಡಿದುಣ್ಣುವ ಮಡಿವಾಳರನ,
ಕರೆದಾಗ, ಕೆರಬಿಟ್ಟು, ಸರಸರ ಬರುವ ಕೂಲಿಕಾರನ,
ಹಳೆಕಾಲ್ಮಾರಿಗೆ, ಹೊಸ ಮೊಳೆ ಹೊಡೆವ, ಮಣೆಗಾರನ,
ಕಾಳು, ಕಡಿ, ತೂರಿ, ತುರಿಕೆಯೆಬ್ಬಿಸುವ, ಗರತಿಯರನ,
ಸಿಗಿದು, ‘ಆರ್‍ಬಾಡ್ಸಿ’ ಒಣಗಲಿಟ್ಟಿದ್ದಾರೆ!
ಬಳ್ಳಾರಿ ಜೈಲುಗೋಡೆಗಳ ಮಧ್ಯೆ…. ವೃಥಾ…ಽಽ
ಹಟ್ಟವರನ್ನು ಬಿಟ್ಟು,
ಇಣುಕಿ ನೋಡಿದವರಿಗೆ, ನೇಣು ಶಿಕ್ಷೆಯೆಂದರೇನು?!
ಈ ಹಲ್ಕಾ ವ್ಯವಸ್ಥೆ ಮಧ್ಯೆ…
ಇಂಥಾ ತಾಯಿಗಂಡರ ನಡುವೆ,
ನಾ ನ್ಯಾಯ, ನೀತಿಗಾಗಿ…
ಬಾಯಿ, ಬಾಯಿ, ಹಂಬಲಿಸಿ,
ಬಿದ್ದ ಸ್ಥಿತಿಯಲ್ಲೇ, ಹಗಲುಗನಸು ಕಾಣುತ್ತಿದ್ದೇನೆ!
ವಿಲವಿಲ ಒದ್ದಾಡಿ, ಒದ್ದಾಡಿ… ರಪ್ಪೆ ಬಡಿಯುತ್ತಿದ್ದೇನೆ!
*  *  *

ಈಗೀಗ ಮೊಂಡಾಗಿವೆ!
ಮೂಗು, ಮುಷಿಣಿ, ಈ ನನ್ನ ಹಲ್ಲೂಗಳೂ…
ಜೋತು ಬಿದ್ದ, ಎದೆ ಗುಂಡುಗಳೂ…
ತುಕ್ಕಿಡಿದ ರಂಪಿಗೆ, ಉಳಿ, ಕೊಡ್ತಿ, ಕ್ವಂಬು, ಇಕ್ಕಳಗಳೂ…
ಮೂಗರ್ಧ ಜನರ ನಡುವೆ, ಕಳೆಯುತ್ತಿದ್ದೇನೆ…
ನಾ ಕಳೆದು ಅಳಿದು, ಹೋಗುವಾ ಮುನ್ನ…
ಹುಡುಕಿ ಕೊಡುವ, ಹೃದಯ ಶ್ರೀಮಂತರಿದ್ದರೆ…
ಬನ್ನಿ! ನನ್ನ ಎದ್ದು ಕೊಡ್ರಿಸಿ, ಗುಕ್ಕು ನೀರು ಬಿಟ್ಟು,
ಬೆನ್ನು ಚೆಪ್ಪರಿಸಿ, ‘ನಾಲಿಗೆ ಪ್ರೀತಿ’ ತೋರಿ ಸಾಕು!!
*  *  *

ಈ ಕಪ್ಪು ನೆಲ ಕೆಂಪಾಯಿತಲ್ಲಾ?!
ಕೂಲಿಗಾಗಿ ಸಾಲು ಸಾಲು ಜನರಿಲ್ಲಿ…
ಕಲ್ಲಿಗೆ, ಮಣ್ಣಿಗೆ, ಮರಕ್ಕೆ, ಕೆರಕ್ಕೆ…
ಕರಮುಗಿದು, ಶಿರಬಾಗಿ, ಶರಣೆಂಬಾ… ಮೂರ್ಖರಿರುವಾಗ,
ತನ್ನಂತಿರುವಾ… ಮನುಜನ, ಕಣ್ಣೆತ್ತಿ ನೋಡದವರ, ಮಧ್ಯೆ-
ದನಗಳೆಶ್ಟೋ ವಾಸಿಯೆಂಬಾ ಘಾಸಿಲಿ,
ಮನದಲಿ, ಕೋಪ ಉಕ್ಕಿ- ಉಕ್ಕಿ- ಕೊನೆಗೆ ತಣ್ಣಗಾಗಿದ್ದೇನೆ!
ಬೆಟ್ಟದಲಿ… ಹುಲ್ಲಾಗಿ, ಮಲ್ಲಿಗೆಯಾಗಿ, ಮರವಾಗಿ, ಹಣ್ಣಾಗಿ,
ಹಳ್ಳದಾ ಚಿಲುಮೆಯಾಗಿ, ಹಸುವಾಗಿ, ಎತ್ತಾಗಿ,
ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಕಲ್ಲಾಗಿ,
ಕೊನೆಗೆ… ಪರ್‍ಕೆ, ತಿರುಬೋಕಿಯಾದರೆಶ್ಟೋ ಚೆನ್ನ… ಚಿನ್ನ!!
ಎಂಬ… ಜಿಗುಪ್ಸೆಯಲಿ,
ಮನನೊಂದು, ನೊಂದು… ಬೆಂದು…
ನನ್ನನ್ನು ನಾ ಕೊಂದು… ಕೊಂದು…
ಇಂದು…
ಕಣ್ಣು ಮುಚ್ಚಿದೆ!!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...