Home / ಕವನ / ಕವಿತೆ / ನನ್ನನ್ನು ನಾ ಕೊಂದು…

ನನ್ನನ್ನು ನಾ ಕೊಂದು…

ಚಿತ್ರ: ಉಲ್ರಿಕೆ ಮಾಯ್
ಚಿತ್ರ: ಉಲ್ರಿಕೆ ಮಾಯ್

ಬಿದಿದ್ದೇನೆ: ‘ಬಕ್ಬಾರ್‍ಲು’
ಹೇಗೋ ಉಸಿರು, ಬಿಗಿ ಹಿಡಿದಿದ್ದೇನೆ.
ಹೇಗಾದರೂ ಮಾಡಿ, ಬದುಕಬೇಕೆಂಬಾ ಆಸೆಯಲಿ, ‘ಅಂಗಾತ…’!
ವಿಲ ವಿಲ ಒದ್ದಾಡಿ, ಕಣ್ಣು, ಕಾಲು, ಕೈಗಳ ಬಡಿತ್ತಿದ್ದೇನೆ!
ಮೇಲೆ ಆಕಾಶ, ಕೆಳಗೆ ನೆಲ ನೋಡುತ್ತಿದ್ದೇನೆ…
ಮೈ ಹೆಪ್ಪುಗಟ್ಟುವ ತನಕ…! ಗಿರಗಿರನೇ ಬುಗುರಿಯಾದೆ.
ಐದೂವರೆ ಅಡಿ ಎತ್ತರದಾ ನಾನೊಬ್ಬ!
ಇಲ್ಲಿ… ಮನುಶ್ಯನೆಂದೇ ನನ್ನ ತಿಳಿದಿಲ್ಲರೊಬ್ಬ!
ಅಬ್ಬಾ! ಏಳು ಮಿಂಡ್ರಿಗಳಪ್ಪ!
*  *  *

ಕೋಟಿ, ಕೋಟಿ ಜನರ ಮಧ್ಯೆ…
ಯಾರಿಗೂ ಕಾಣುತ್ತಿಲ್ಲ! ನೆತ್ತಿ ಮೇಲೆ ಜನರ ಕಣ್ಣು!
ಯಾರಾದರೂ ಬಂದಾರು…
ಕೈಹಿಡಿದೆತ್ತಿ, ಗುಕ್ಕು ನೀರು, ಬಾಯಿಗೆ ಬಿಟ್ಟು,
ಗಾಳಿ ಬೀಸಿ, ಕೈಹಿಡಿದು,
ಎಬ್ಬಿಸುವರೆಂದು, ಜೀವ ಬಿಗಿ ಹಿಡಿದು, ಕಾದಿದ್ದೇನೆ!
*  *  *

ಅಕ್ಕ ಪಕ್ಕದಲಿ, ತುಳಿದು ಎಡವಿ ಹೋದವರ…
ಬಿಂಬ, ಪ್ರತಿಬಿಂಬವಾ ಕಂಡು, ಪುಲಕಿತಗೊಂಡಿದ್ದೇನೆ!
ಕಣ್ಣುಗಳಲಿ, ಕೂಗಿಕೂಗಿ… ಕರೆದಿದ್ದೇನೆ.
ಓಡುವವನ ಇಶ್ಟು ಸುಲಭದೀ, ಎಡವಿ ಕೆಡಿವಿದವರು…
ಈಗ ಮೈದಡವಿ, ಮೇಲೆತ್ತುವರೇನು?!
ಥೂ! ಘನ್ನು ಘಾತುಕರು!
ಅಸಲು ತಾಯ್ಗಿಂಡ್ರು…
ಏಳ್ಗೆ… ಸಹಿಸದ ಜನರ ನಡುವೆ,
ಬಲು ಅವಸರದಿ, ಎಡವಿ ಬಿದ್ದಿದ್ದು,
ತುಪ್ಪ ಜಾರಿ, ಕೊಚ್ಚೆಗೆ ಬಿದ್ದಂತಾತು!
*  *  *

ಈಗ ಜೀವ ಹೋಗುವ ಭಯವಿದೆ!
ಅಪ್ಪನ ಜೀತದ ‘ರಕ್ಕ’ದಲಿ,
ಕಲಿತದ್ದು ಸೊನ್ನೆಯೆಂಬುದೀಗ ತಿಳಿದು,
ಅಮ್ಮನ ಕೈ ತುತ್ತು, ‘ಬಲಹೀನ’ವೆಂದು ಅರಿತು,
ಹಾದಿ ಬೀದಿಯ ತುಂಬಾ, ಜನರ ‘ಆಡಂಬೋಲ’ ಕಂಡು,
ನರನಾಡಿಗಳೇ ಹುದುಗಿದವಲ್ಲ….?!
*  *  *

ತ್ವಗ್ಲು ಹದಾ ಮಾಡುವ ಚಮ್ಮಾರನ,
‘ಕಶ್ಟ’ ಮಾಡಿ, ಹೊಟ್ಟೆ ಹೊರೆವ ಶಿಷ್ಠರನ,
ಬಾಳ ಹಡುಗು, ಮಾಡುವ ಬಡಿಗನ,
ಮಡಿ ಮಾಡಿ, ದುಡಿದುಣ್ಣುವ ಮಡಿವಾಳರನ,
ಕರೆದಾಗ, ಕೆರಬಿಟ್ಟು, ಸರಸರ ಬರುವ ಕೂಲಿಕಾರನ,
ಹಳೆಕಾಲ್ಮಾರಿಗೆ, ಹೊಸ ಮೊಳೆ ಹೊಡೆವ, ಮಣೆಗಾರನ,
ಕಾಳು, ಕಡಿ, ತೂರಿ, ತುರಿಕೆಯೆಬ್ಬಿಸುವ, ಗರತಿಯರನ,
ಸಿಗಿದು, ‘ಆರ್‍ಬಾಡ್ಸಿ’ ಒಣಗಲಿಟ್ಟಿದ್ದಾರೆ!
ಬಳ್ಳಾರಿ ಜೈಲುಗೋಡೆಗಳ ಮಧ್ಯೆ…. ವೃಥಾ…ಽಽ
ಹಟ್ಟವರನ್ನು ಬಿಟ್ಟು,
ಇಣುಕಿ ನೋಡಿದವರಿಗೆ, ನೇಣು ಶಿಕ್ಷೆಯೆಂದರೇನು?!
ಈ ಹಲ್ಕಾ ವ್ಯವಸ್ಥೆ ಮಧ್ಯೆ…
ಇಂಥಾ ತಾಯಿಗಂಡರ ನಡುವೆ,
ನಾ ನ್ಯಾಯ, ನೀತಿಗಾಗಿ…
ಬಾಯಿ, ಬಾಯಿ, ಹಂಬಲಿಸಿ,
ಬಿದ್ದ ಸ್ಥಿತಿಯಲ್ಲೇ, ಹಗಲುಗನಸು ಕಾಣುತ್ತಿದ್ದೇನೆ!
ವಿಲವಿಲ ಒದ್ದಾಡಿ, ಒದ್ದಾಡಿ… ರಪ್ಪೆ ಬಡಿಯುತ್ತಿದ್ದೇನೆ!
*  *  *

ಈಗೀಗ ಮೊಂಡಾಗಿವೆ!
ಮೂಗು, ಮುಷಿಣಿ, ಈ ನನ್ನ ಹಲ್ಲೂಗಳೂ…
ಜೋತು ಬಿದ್ದ, ಎದೆ ಗುಂಡುಗಳೂ…
ತುಕ್ಕಿಡಿದ ರಂಪಿಗೆ, ಉಳಿ, ಕೊಡ್ತಿ, ಕ್ವಂಬು, ಇಕ್ಕಳಗಳೂ…
ಮೂಗರ್ಧ ಜನರ ನಡುವೆ, ಕಳೆಯುತ್ತಿದ್ದೇನೆ…
ನಾ ಕಳೆದು ಅಳಿದು, ಹೋಗುವಾ ಮುನ್ನ…
ಹುಡುಕಿ ಕೊಡುವ, ಹೃದಯ ಶ್ರೀಮಂತರಿದ್ದರೆ…
ಬನ್ನಿ! ನನ್ನ ಎದ್ದು ಕೊಡ್ರಿಸಿ, ಗುಕ್ಕು ನೀರು ಬಿಟ್ಟು,
ಬೆನ್ನು ಚೆಪ್ಪರಿಸಿ, ‘ನಾಲಿಗೆ ಪ್ರೀತಿ’ ತೋರಿ ಸಾಕು!!
*  *  *

ಈ ಕಪ್ಪು ನೆಲ ಕೆಂಪಾಯಿತಲ್ಲಾ?!
ಕೂಲಿಗಾಗಿ ಸಾಲು ಸಾಲು ಜನರಿಲ್ಲಿ…
ಕಲ್ಲಿಗೆ, ಮಣ್ಣಿಗೆ, ಮರಕ್ಕೆ, ಕೆರಕ್ಕೆ…
ಕರಮುಗಿದು, ಶಿರಬಾಗಿ, ಶರಣೆಂಬಾ… ಮೂರ್ಖರಿರುವಾಗ,
ತನ್ನಂತಿರುವಾ… ಮನುಜನ, ಕಣ್ಣೆತ್ತಿ ನೋಡದವರ, ಮಧ್ಯೆ-
ದನಗಳೆಶ್ಟೋ ವಾಸಿಯೆಂಬಾ ಘಾಸಿಲಿ,
ಮನದಲಿ, ಕೋಪ ಉಕ್ಕಿ- ಉಕ್ಕಿ- ಕೊನೆಗೆ ತಣ್ಣಗಾಗಿದ್ದೇನೆ!
ಬೆಟ್ಟದಲಿ… ಹುಲ್ಲಾಗಿ, ಮಲ್ಲಿಗೆಯಾಗಿ, ಮರವಾಗಿ, ಹಣ್ಣಾಗಿ,
ಹಳ್ಳದಾ ಚಿಲುಮೆಯಾಗಿ, ಹಸುವಾಗಿ, ಎತ್ತಾಗಿ,
ಕತ್ತೆ, ಕುದುರೆ, ಹಂದಿ, ನಾಯಿ, ಕಾಗೆ, ಕಲ್ಲಾಗಿ,
ಕೊನೆಗೆ… ಪರ್‍ಕೆ, ತಿರುಬೋಕಿಯಾದರೆಶ್ಟೋ ಚೆನ್ನ… ಚಿನ್ನ!!
ಎಂಬ… ಜಿಗುಪ್ಸೆಯಲಿ,
ಮನನೊಂದು, ನೊಂದು… ಬೆಂದು…
ನನ್ನನ್ನು ನಾ ಕೊಂದು… ಕೊಂದು…
ಇಂದು…
ಕಣ್ಣು ಮುಚ್ಚಿದೆ!!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...