ರೈತರ ಹಾಡು

ದುಡಿಯುತಿಹರೂ ನಾವೆ
ಮಡಿಯುತಿಹರೂ ನಾವೆ

ಜಗಕೆ ಅನ್ನವ ನೀಡುತಿಹರು ನಾವೆ!
ತುತ್ತೊಂದು ಅನ್ನವನು ಬೇಡುತಿಹೆವು!
ನಿಮಗಾಗಿ ಜೀವನವ ಸವೆಸುತಿಹೆವು!

ಮೈಯ ದಂಡಿಪರಾವು
ರಕ್ತ ಹರಿಸುವರಾವು

ದಿನವು ಜನ್ಮವ ತೇಯುತಿಹರು ನಾವು!
ಧನಿಕರಿಗೆ ಹೊನ್ನ ಬಣ ಕೂಡಿಸಿಹೆವು
ಕುರುಡುಕಾಸಿನ ಭಿಕ್ಷೆ ಬೇಡುತಿಹೆವು!

ಭುವಿಯನುಳುವವರಾವು
ಭುವಿಗೆ ಉರುಳುವರಾವು

ಕಾಳ ಕೆತ್ತಿತ ಮಡಿವ ರೈತರಾವು
ತುತ್ತಿಲ್ಲದೆಯೆ ಹೆಣದ ರಾಸಿ ಬಿದ್ದಿಹುದು!
ಕಳಿತ ಹೆಣ, ಕೊಳೆತ ಹೆಣ-ಕೇಳ್ವರಾರು!

ಹಣದ ಕಣಜಗಳಾವು
ಹೆಣದ ವಂಶಜರಾವು

ಸಾವಿಲ್ಲದಿಹ ಅಮರ ಪ್ರೇತವಾವು
ಜೀವವಿಲ್ಲದ ಬರಿಯ ಮೂಳೆ ಮೂಟೆಗಳು!
ಹೊಟ್ಟೆ ಹಸಿವಿನ ಕೊರಗ ಕ್ರಾಂತಿಯೂಟೆಗಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮನಸಿನಾಳವು ಮಿಗಿಲು
Next post ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys