Home / ಕವನ / ಕವಿತೆ / ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಅಲೆ ಅಲೆಗಳು ಎಳೆದು
ಮುದ್ದಿಸುತ ಮುನ್ನುಗ್ಗುವ
ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ.
ತುಂತುರ ಮಳೆಗೆ
ಹೊಯ್ದಾಟದ ಹಡಗಿನ ಗಮ್ಮತ್ತಿಗೆ
ಮೈಯೆಲ್ಲಾ ಕಚಗುಳಿಯಾಗುತ್ತಿತ್ತು
ದೂರದ ದೀಪಸ್ತಂಭ
ಸರಹದ್ದಿನ ಭವ್ಯ ಮಹಲುಗಳು
ಸರಕು ಹಡಗುಗಳ ಓಡಾಟ
ಮಂಜು ಮೋಡಗಳೊಳಗೆ
ತೂಗಾಡುವ Sea gullಗಳ
ಸಿನೀಕ್ ದೃಶ್ಯದಲ್ಲಿ
ಕಾಲುವೆಯ ತಣ್ಣನೆಯ ನೀರಿನ
ಕೊರೆಯುವ ಚಳಿಯಲ್ಲಿ ತೇಲಾಡುತ್ತಿದ್ದೆ.
ದ್ವೀಪಗಳಗುಂಟ ಹೊರಳುವಾಗ
ಬಾಲ್ಯದ ಚಂದಮಾಮ ಕಥೆಗಳು
ಏಳು ಸಮುದ್ರದಾಟಿ
ರಾಜಕುಮಾರಿ ಕರೆತರುವ
ರಾಜಕುಮಾರನ ಸಾಹಸಗಳಿಗೆ,
ಮೈ ನವಿರೆಬ್ಬಸಿದ ಆ ಬಾಲೀಶಕ್ಕೆ
ಆ ಆನಂದಕ್ಕೆ, ಮೈ ಮನ
ಹಗುರಾಗಿಸಿಕೊಂಡು
ನಗುತ್ತಲೇ ಈಚೆ ಹೊರಳುವಾಗ
ಪಕ್ಕದ ಸ್ಪ್ಯಾನಿಷ್‌ ಗುಂಪು
ಪ್ಲ್ಯಾಶ್ ಮಾಡಿಕೊಳ್ಳುತ್ತದೆ
ಪುಂಖಾನು ಪುಂಖವಾಗಿ ಮೋಡಗಳು
ಆಕಾಶದಲ್ಲಿ ತೇಲುತ್ತಲೇ ಇವೆ.
ಕೊರೆವ ಮಂಜು
ಎದೆ ನಡಗುವ ಕಡಲುಬ್ಬರಗಳಲ್ಲೂ
ಜಲ ಕನ್ಯೆಯಾಗಿ (mermaid)
ದ್ವೀಪಗಳು ಹೊಕ್ಕು
ಸಂಶಯದ- ಕಟ್ಟುಕಥೆಗಳ
ಬಲೆಗಳೆಳೆದು ಎಳೆಯ ಬಾಲೀಷ
ವಿಜ್ಞಾನಗಳಿಗೆ ವಸ್ತುವಾಗಿಸಿ
ಅನಂತಕ್ಕೇರಿಸುವ; ಸಮುದ್ರದಾಳದ
ಕೊಳವೆ ಮಾರ್ಗದಲ್ಲಿ
(ಇಂಗ್ಲೆಂಡು ಪ್ರಾನ್ಸ್‌ಗಳ ನಡುವೆ)
ಓದಾಡುವ ರೈಲು ಕಾರುಗಳಲ್ಲೆಲ್ಲ
ಓಡಾಡಿಸುವ ಯೋಜನೆ.
ಓರಿಯೆಂಟ್ ಫೆರ್ರಿ ಮುನ್ನುಗ್ಗುತ್ತಿದೆ.
ಕಡಲಂಚು ಅಂಚುಗಳಿಗೆ
ಪೂರ್ವ ಸಿದ್ಧತೆಗಳಿಲ್ಲದೆಯೂ
ಮನಸ್ಸು ಅಂಟಿಕೊಳ್ಳುತ್ತದೆ.
ತುಂತುರ ಮಳೆಗೆ
ಸೂರ್ಯನ ಕಿರಣಗಳು ಸ್ಫಟಿಕಗಳಾಗಿ
ತಲೆ ತುಂಬ ಮೆತ್ತಿ
ವಜ್ರ ಮುಕುಟಗಳಾಗುತ್ತವೆ
ಬ್ರಿಟೀಷ್ ಕಡಲ್ಗಾಲುವೆಯ
ರಾಣಿಯಾಗಿ ನನ್ನ
ಕಾಲರ್ ಸರಿಪಡಿಸಿಕೊಳ್ಳುತ್ತ
ಫೆರ್ರಿ ಮೇಲೆ ಗಂಭೀರ ಹೆಜ್ಜಿಯಿಂದ
ಓಡಾಡಿ ವಜ್ರಮುಕುಟಗಳನ್ನು
ಮುಟ್ಟುತ್ತ ಮುದ್ದಿಸುತ್ತ
ಪ್ಯಾರಿ ನಗರ ಪ್ಯಾರಿಸ್ಸಿಗೆ ಹೆಜ್ಜೆ ಊರಿದೆ.
(ಇಂಗ್ಲೆಂಡಿನಿಂದ ಪ್ರಾನ್ಸ್‌ಗೆ ಹೋಗುವಾಗ ಓರಿಯಂಟ್ ಫೆರ್ರಿಯಿಂದ(ಹಡಗು) ನೋಡಿದ ಅನಿಸಿದ ಆನಂದಿಸಿದ ದೃಶ್ಯ)
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...