Home / ಕವನ / ಕವಿತೆ / ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಬ್ರಿಟೀಷ್ ಕಡಲ್ಗಾಲುವೆಯಲ್ಲಿ

ಅಲೆ ಅಲೆಗಳು ಎಳೆದು
ಮುದ್ದಿಸುತ ಮುನ್ನುಗ್ಗುವ
ಹಡಗಿನ ಅಂಚಿಗೆ ನಾನೊರಗಿ ನಿಂತಿದ್ದೆ.
ತುಂತುರ ಮಳೆಗೆ
ಹೊಯ್ದಾಟದ ಹಡಗಿನ ಗಮ್ಮತ್ತಿಗೆ
ಮೈಯೆಲ್ಲಾ ಕಚಗುಳಿಯಾಗುತ್ತಿತ್ತು
ದೂರದ ದೀಪಸ್ತಂಭ
ಸರಹದ್ದಿನ ಭವ್ಯ ಮಹಲುಗಳು
ಸರಕು ಹಡಗುಗಳ ಓಡಾಟ
ಮಂಜು ಮೋಡಗಳೊಳಗೆ
ತೂಗಾಡುವ Sea gullಗಳ
ಸಿನೀಕ್ ದೃಶ್ಯದಲ್ಲಿ
ಕಾಲುವೆಯ ತಣ್ಣನೆಯ ನೀರಿನ
ಕೊರೆಯುವ ಚಳಿಯಲ್ಲಿ ತೇಲಾಡುತ್ತಿದ್ದೆ.
ದ್ವೀಪಗಳಗುಂಟ ಹೊರಳುವಾಗ
ಬಾಲ್ಯದ ಚಂದಮಾಮ ಕಥೆಗಳು
ಏಳು ಸಮುದ್ರದಾಟಿ
ರಾಜಕುಮಾರಿ ಕರೆತರುವ
ರಾಜಕುಮಾರನ ಸಾಹಸಗಳಿಗೆ,
ಮೈ ನವಿರೆಬ್ಬಸಿದ ಆ ಬಾಲೀಶಕ್ಕೆ
ಆ ಆನಂದಕ್ಕೆ, ಮೈ ಮನ
ಹಗುರಾಗಿಸಿಕೊಂಡು
ನಗುತ್ತಲೇ ಈಚೆ ಹೊರಳುವಾಗ
ಪಕ್ಕದ ಸ್ಪ್ಯಾನಿಷ್‌ ಗುಂಪು
ಪ್ಲ್ಯಾಶ್ ಮಾಡಿಕೊಳ್ಳುತ್ತದೆ
ಪುಂಖಾನು ಪುಂಖವಾಗಿ ಮೋಡಗಳು
ಆಕಾಶದಲ್ಲಿ ತೇಲುತ್ತಲೇ ಇವೆ.
ಕೊರೆವ ಮಂಜು
ಎದೆ ನಡಗುವ ಕಡಲುಬ್ಬರಗಳಲ್ಲೂ
ಜಲ ಕನ್ಯೆಯಾಗಿ (mermaid)
ದ್ವೀಪಗಳು ಹೊಕ್ಕು
ಸಂಶಯದ- ಕಟ್ಟುಕಥೆಗಳ
ಬಲೆಗಳೆಳೆದು ಎಳೆಯ ಬಾಲೀಷ
ವಿಜ್ಞಾನಗಳಿಗೆ ವಸ್ತುವಾಗಿಸಿ
ಅನಂತಕ್ಕೇರಿಸುವ; ಸಮುದ್ರದಾಳದ
ಕೊಳವೆ ಮಾರ್ಗದಲ್ಲಿ
(ಇಂಗ್ಲೆಂಡು ಪ್ರಾನ್ಸ್‌ಗಳ ನಡುವೆ)
ಓದಾಡುವ ರೈಲು ಕಾರುಗಳಲ್ಲೆಲ್ಲ
ಓಡಾಡಿಸುವ ಯೋಜನೆ.
ಓರಿಯೆಂಟ್ ಫೆರ್ರಿ ಮುನ್ನುಗ್ಗುತ್ತಿದೆ.
ಕಡಲಂಚು ಅಂಚುಗಳಿಗೆ
ಪೂರ್ವ ಸಿದ್ಧತೆಗಳಿಲ್ಲದೆಯೂ
ಮನಸ್ಸು ಅಂಟಿಕೊಳ್ಳುತ್ತದೆ.
ತುಂತುರ ಮಳೆಗೆ
ಸೂರ್ಯನ ಕಿರಣಗಳು ಸ್ಫಟಿಕಗಳಾಗಿ
ತಲೆ ತುಂಬ ಮೆತ್ತಿ
ವಜ್ರ ಮುಕುಟಗಳಾಗುತ್ತವೆ
ಬ್ರಿಟೀಷ್ ಕಡಲ್ಗಾಲುವೆಯ
ರಾಣಿಯಾಗಿ ನನ್ನ
ಕಾಲರ್ ಸರಿಪಡಿಸಿಕೊಳ್ಳುತ್ತ
ಫೆರ್ರಿ ಮೇಲೆ ಗಂಭೀರ ಹೆಜ್ಜಿಯಿಂದ
ಓಡಾಡಿ ವಜ್ರಮುಕುಟಗಳನ್ನು
ಮುಟ್ಟುತ್ತ ಮುದ್ದಿಸುತ್ತ
ಪ್ಯಾರಿ ನಗರ ಪ್ಯಾರಿಸ್ಸಿಗೆ ಹೆಜ್ಜೆ ಊರಿದೆ.
(ಇಂಗ್ಲೆಂಡಿನಿಂದ ಪ್ರಾನ್ಸ್‌ಗೆ ಹೋಗುವಾಗ ಓರಿಯಂಟ್ ಫೆರ್ರಿಯಿಂದ(ಹಡಗು) ನೋಡಿದ ಅನಿಸಿದ ಆನಂದಿಸಿದ ದೃಶ್ಯ)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...