ಈ ಶಿಕ್ಷೆ ಯಾರಿಗೆಂದು?

ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ
ಆ ತುಂಬು ಹೆರಳ ಹೆಣ್ಣೆಲ್ಲಿ?
ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ,
ಆ ದೀಪದುರಿಯ ಕಣ್ಣೆಲ್ಲಿ?

ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ,
ಆ ನವಿಲನಡೆಯ ಹೆಣ್ಣೆಲ್ಲಿ?
ಬೆಳ್ಳಿ ಬಟ್ಟಲಿನೊಳಗೆ ಬಿಟ್ಟೊಂದು ಹನಿ ಹಾಲೆ,
ನೀ ಕಂಡ ನನ್ನ ಕನಸೆಲ್ಲಿ?

ಎದುರು ಹಾಸಿನಮೇಲೆ ತೆರೆದಿಟ್ಟ ವೀಣೆಯನು
ಮಿಡಿದ ಆ ಮಿಂಚು ಬೆರಳೆಲ್ಲಿ?
ತನ್ನ ಹಾಡಿಗೆ ತಾನೆ ಒಲಿದು ತಲೆದೂಗಿರಲು
ಗೋಡೆಯಲಿ ತೊನೆದ ನೆರಳೆಲ್ಲಿ?

ತೆರೆದ ಪೆಟ್ಟಿಗೆ ಇಹುದು ತೆರೆದಂತೆ ; ಬಾಚಣಿಗೆ
ಕನ್ನಡಿಗೆ ಕಥೆಯ ಹೇಳುವುದು;
ಉರಿಯುತ್ತಲೇ ಇಹುದು ದೇವರೆದುರಿಗೆ ಹಣತೆ;
ಮನೆಯೇನೊ ತುಂಬಿದಂತಿಹುದು.

ಮನೆಯೇನೋ ತುಂಬಿದಂತಿಹುದು; ಸುಳ್ಳು! ಇಲ್ಲ!-
ಸಾಕ್ಷಿಗಳ ನಂಬುವಂತಿಲ್ಲ.
ಈ ನೋಟದೊಳನೋವ ದೇವರೊಬ್ಬನೆ ಬಲ್ಲ!
ಗೌರಿ ಮನೆಯೊಳಗೆ ಇಲ್ಲ! –

ತಾಯಿ ಕರೆದರು ಎಂದು, ಹೋಗಿಬರುವೆನು ಎಂದು,
ಸಂಜೆಗೂ ಮುಂದಾಗಿ ಬರುವೆನೆಂದು
ಬೆಳಗಾಗ ನಡೆದವಳು-ಈಗ ತುಂಬಿದ ಇರುಳು-
ಬಂದಿಲ್ಲ. ಈ ಶಿಕ್ಷೆ ಯಾರಿಗೆಂದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರಹಿಣಿಯ ಸಂತಾಪ
Next post ದೊಡ್ಡೋರೆಲ್ಲಾ ಅದೇ ರೀತಿ

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…