ಈ ಶಿಕ್ಷೆ ಯಾರಿಗೆಂದು?

ಹಾಸಿಗೆಯೆ ಹರಸಿರುವ ದುಂಡುಮಲ್ಲಿಗೆಯರಳೆ
ಆ ತುಂಬು ಹೆರಳ ಹೆಣ್ಣೆಲ್ಲಿ?
ಬಿಳಿ ದಿಂಬಿನಂಚಿನಲಿ ಗೆರೆ ಬರೆದ ಕಾಡಿಗೆಯೆ,
ಆ ದೀಪದುರಿಯ ಕಣ್ಣೆಲ್ಲಿ?

ಅತ್ತ ಮಂಚದ ಕೆಳಗೆ ಬಿದ್ದ ಕಾಲುಂಗುರವೆ,
ಆ ನವಿಲನಡೆಯ ಹೆಣ್ಣೆಲ್ಲಿ?
ಬೆಳ್ಳಿ ಬಟ್ಟಲಿನೊಳಗೆ ಬಿಟ್ಟೊಂದು ಹನಿ ಹಾಲೆ,
ನೀ ಕಂಡ ನನ್ನ ಕನಸೆಲ್ಲಿ?

ಎದುರು ಹಾಸಿನಮೇಲೆ ತೆರೆದಿಟ್ಟ ವೀಣೆಯನು
ಮಿಡಿದ ಆ ಮಿಂಚು ಬೆರಳೆಲ್ಲಿ?
ತನ್ನ ಹಾಡಿಗೆ ತಾನೆ ಒಲಿದು ತಲೆದೂಗಿರಲು
ಗೋಡೆಯಲಿ ತೊನೆದ ನೆರಳೆಲ್ಲಿ?

ತೆರೆದ ಪೆಟ್ಟಿಗೆ ಇಹುದು ತೆರೆದಂತೆ ; ಬಾಚಣಿಗೆ
ಕನ್ನಡಿಗೆ ಕಥೆಯ ಹೇಳುವುದು;
ಉರಿಯುತ್ತಲೇ ಇಹುದು ದೇವರೆದುರಿಗೆ ಹಣತೆ;
ಮನೆಯೇನೊ ತುಂಬಿದಂತಿಹುದು.

ಮನೆಯೇನೋ ತುಂಬಿದಂತಿಹುದು; ಸುಳ್ಳು! ಇಲ್ಲ!-
ಸಾಕ್ಷಿಗಳ ನಂಬುವಂತಿಲ್ಲ.
ಈ ನೋಟದೊಳನೋವ ದೇವರೊಬ್ಬನೆ ಬಲ್ಲ!
ಗೌರಿ ಮನೆಯೊಳಗೆ ಇಲ್ಲ! –

ತಾಯಿ ಕರೆದರು ಎಂದು, ಹೋಗಿಬರುವೆನು ಎಂದು,
ಸಂಜೆಗೂ ಮುಂದಾಗಿ ಬರುವೆನೆಂದು
ಬೆಳಗಾಗ ನಡೆದವಳು-ಈಗ ತುಂಬಿದ ಇರುಳು-
ಬಂದಿಲ್ಲ. ಈ ಶಿಕ್ಷೆ ಯಾರಿಗೆಂದು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿರಹಿಣಿಯ ಸಂತಾಪ
Next post ದೊಡ್ಡೋರೆಲ್ಲಾ ಅದೇ ರೀತಿ

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬೋರ್ಡು ಒರಸುವ ಬಟ್ಟೆ

    ಪ್ರಕರಣ ೬ ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇಂಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…