Home / ಕವನ / ಕವಿತೆ / ಕಂಡೆನೊ ನಾ!

ಕಂಡೆನೊ ನಾ!

ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!!

ಈ ಲೋಕ ಈ ರಾಜ್ಯ ಈ ಊರು ಈ ಮನೆ
ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ,
ಬಲ್ಲಿದ ಬಡವನ ಶತಕೋಟಿ ಸಂಸಾರ-  ||ಕಂ||

ಸಾಗರ-ಭೂಮಿಯ ನಡೆ ಕಂಡು ಮೊರೆವುದೊ,
ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ;
ಆಗದೀ ಜನಭಾರ ಕಲ್ಭೂಮಿ ಆಳುವುದೊ-  ||ಕಂ||

ತತ್ವಗಳೊಂದೆಡೆಽ ಉದ್ಧಾರ ಕಾಯ್ವುವು,
ನೀತಿಗಳ್ ಬಿರುಗಾಳಿ ಅಲೆಯೊಳು ಸಾಗ್ವುವು;
ಮಾತು ಮಾತಿನ ಜೀವ, ತೋರಲಿದರೆ ಜೀವ-  ||ಕಂ||

ಅವಸರದ ಆಲಾಪ, ದಣೀದ ದೇಹಿಯ ತಾಪ,
ಭುವನತ್ರಯದ ಪಾಪ, ಸಮ್ಮಿಳಿತ ಮಾಕೂಪ,
ಭವ ಸರಸಿಜನದು ಸರಸತಿಯರ ಶಾಪ-  ||ಕಂ||

ಮನುಜನ ಮನಶ್ಶಕ್ತಿ ಮರುಳಾಗಿ ಕಲ್ಲಂತೆ,
ತನುಮನವೆಲ್ಲವು ಸ್ವಾರ್ಥಕ್ಕೆ ಮರೆಹೋಗಿ
ಜನಗಣವು ಪಶುಗಣವಾದ ವೈಚಿತ್ರ್‍ಯವೊ-  ||ಕಂ||

ರಂಗುರಂಗಿನ ತಳಕು, ಬಣ್ಣ ಬಣ್ಣದ ಬೆಳಕು;
ಶೃಂಗಾರ ಸಂಪತ್ತು ನಗುಸರಸ ಸವಿಮಾತು;
ಭೃಂಗಕುಂತಲ ‘ಷೋಕು’, ಕೃತಕ ಜೀವದ ಮಂಕು-  ||ಕಂ||

ಜನ ಜನಿತ ಜನಮೋಹ, ಜೀತ ಜೀತದ ಜೀವ,
ಗಣನೀಯ ಗಂಭೀರ, ಚಂಚಲ ವ್ಯವಹಾರ,
ದಣಿದ ಬಾಳಿನ ಸಾರ ಸಾಕು ಸಾಕು ಸಾಕೀ ಹಾರ!  ||ಕಂ||

ಒಂದಿಽನ ನಾನೊಂದು ಪೂಗಿಡವ ನಟ್ಟೆನೊ,
ಮುಂದಾರು ದಿನ ಕಳೆದು ನಾನೋಡಿ ಅತ್ತೆನೊ;
ಅಂದಿಽತು ನನಗಽದು ‘ಚಿಗುರೆಽಲೆ ಕೊಡೆ’ನೆಂದು-  ||ಕಂ||

ಹಸುರಾಂತ ವನಶೋಭೆ ನೀಲಾಕಾಶದ ಪ್ರಭೆ,
ಹಸುಗೂಸು ಹುಸಿ ಸೊಬಗು ಪಂಚಭೂತದ ಬೆಡಗು,
ನಸುನಗುತ ಒಲಿದಽರು ವಿರಸ ಪ್ರಕೃತಿಯದೊ-  ||ಕಂ||

ಜನಕೋಟಿ ಈ ಜಗದಿ ಸಂಸಾರವೆಂದೆಂದು
ಮುನಿಜನವು ಕವಿಗಣವು ಹಾಡಿ ಪಾಡಿದರಂದು,
ಋಣಮುಕ್ತ ಜೀವಽದ ಪಾಡನ್ನು ಹಾಡುತ್ತ;  ||ಕಂ||

ಲೋಕವು ದಿನಕೊಂದು ರೂಪವ ಪಡೆವುದೊ,
ಸಾಕಿಽದ ಕೋಳಿಯ ಬೆಳೆಸಂತೆ ಬದಲಾಗೆ;
ಈ ಕರ್ಮ ಜಾಲಕ್ಕೆ ಪ್ರಾಣಗಳರ್ಪಿಸಿ-  ||ಕಂ||

ಸಲ್ಲಲಿತ ಸುಖಶಾಂತಿ-ರಣರಂಗ ಭಯಕ್ರಾಂತಿ;
ಮಲ್ಲಳಿಯ ಇನಿವಾಡು-ಸಂಸಾರ ಒಳಪಾಡು,
ಬಲ್ಲವರ ವಿದ್ವತ್ತು-ಲೋಕನಾಶಕೆ ಹೇತು!  ||ಕಂ||
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...