Home / ಕವನ / ಕವಿತೆ / ಅಂತರಿಕ್ಷ ಪ್ರವಾಸಿ ಟಿಟೋ

ಅಂತರಿಕ್ಷ ಪ್ರವಾಸಿ ಟಿಟೋ

ಅಂತರಿಕ್ಷ ನೌಕಾ ನಡುಮನೆಯೊಳಗೆ
ಸುತ್ತು ಹೊಡೆದೂ ಹೊಡೆದೂ
ಚಂಗನೆ ಆಕಾಶಕ್ಕೇರಿ ಪೆರಡೈಸ್ ನೋಡಿ
ಮೊನ್ನೆಯಷ್ಟೇ ಬಂದಿಳಿದ
ಡೆನಿಸ್ ಟಿಟೋ ಮಾತಿಗೆ ಸಿಕ್ಕ.

ಎಂಥಾ ಛಲಗಾರನೋ ನೀನು ಟಿಟೋ
ಕನಸು ನನಸಾಗಿಸಿಕೊಂಡು ಬಿಟ್ಟೆ
ಹಣ ಇದ್ದರೇನಂತೆ
ಸರಿಸಾಟಿ ಧೈರ್ಯವೂ ಇದೆಯಲ್ಲ ನಿನಗೆ-
ನಕ್ಕ, ನಗುತ್ತಲೇ ಇದ್ದ

ಅಫ್ರಿಕದ ಕರಿ ಯುರೋಪದ ಬಿಳಿ
ಏಶಿಯದ ನಾವುಗಳೆಲ್ಲ
ಬೇರೆ ಬೇರೆಯಾಗಿ ಕಂಡೆವೇನೊ ಟಿಟೋ
ಮೇಲೆ ಸೂರ್ಯ ಚಂದ್ರ ಆಕಾಶ
ಕೆಳಗೆ ಬೋಳಾದ ಗುಡ್ಡಗಾಡುಗಳು
ತುಂಡರಿಸಿಕೊಂಡಿರುವ ಮನಸುಗಳು
ಗುಂಡು ಮದ್ದು ತುಂಬಿದ ಬಂದೂಕುಗಳು
ಯಾವುದು ಹಿತವಾಗಿ ಕಾಣಿಸಿತು ನಿನಗಲ್ಲಿ?

ಏನವನ ನಗುಮುಖ
ಗಂಟಲು ತುಂಬಿ ಮಾತು ಹೊರಡದೆ
ಕಣ್ಣಲ್ಲೇ ಹೇಳುತ್ತಿದ್ದನವ-
ಪ್ರೀತಿ ಕ್ಷಮೆ ಎಲ್ಲಾ ಅಲ್ಲಿತ್ತೆಂದು
ಮೌನ ಸಹಕಾರ ಶಾಂತಿ ಅಲ್ಲಿ ಸಿಕ್ಕಿತೆಂದು

ನಿನ್ನೆ ಹೆಸರು ಇಡುತ್ತಿದ್ದಾರಂತೆ ಎಲ್ಲೆಲ್ಲೂ
ಹರಕೆಯೂ ಹೊತ್ತಿದ್ದಾರಂತೆ ಆಕಾಶಕ್ಕೇರಲು
ನಿನೊಂದು ವಿಚಿತ್ರ ಶಕ್ತಿ
ಅರವತ್ತರ ಟಿಟೋ ನೀನು ಗೆದ್ದೆ.

ಸದ್ದು ಗದ್ದಲವಿಲ್ಲದ
ವಿಷದ ಹುನ್ನಾರ ಬೀಜಗಳಿಲ್ಲದ
ತೂಗು ತೊಟ್ಟಿಲೊಳಗೆ ಹಗುರಾಗಿ ಹಾರಾಡಿ
ಕುಣಿದಾಡಿ ತಂದಿದ್ದಾನೆ
ಎಲ್ಲರಿಗೂ ಕಾಣಿಕೆ
ಸ್ವರ್ಗದನುಭವದ ಹಿತ
ಬಾಯ್ತುಂಬ ನಗು
ಎದೆ ತುಂಬ ಹೆಮ್ಮೆ.

ವಿಶ್ವದ ಮೊದಲ ಅಂತರಿಕ್ಷ ಪ್ರವಾಸಿ, ಅಮೇರಿಕದ ಶ್ರೀಮಂತ ಉಧ್ಯಮಿ ಡೆನಿಸ್ ಟಿಟೋ ೨೦೦ ಮಿಲಿಯನ್ ಡಾಲರ್ಸ್ ಕೊಟ್ಟು ರಶಿಯಾದ ನೌಕೆಯಲ್ಲಿ ೭ ದಿನಗಳವರೆಗೆ ಏಪ್ರಿಲ್ ೨೦೦೧ ರಲ್ಲಿ ಪ್ರವಾಸ ಮಾಡಿಬಂದ ಹೆಗ್ಗಳಿಕೆ ೧ ಡಾಲರ್= ರೂ. ೫೦
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...