Home / ಕವನ / ಕವಿತೆ / ಉತ್ತರ ಹೇಳಜ್ಜಾ

ಉತ್ತರ ಹೇಳಜ್ಜಾ


‘ಸತ್ಯದ ಯಜ್ಞಕುಂಡದಲ್ಲಿ ನಾವು
ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ
ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ
ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ?


ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ
ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ
ಜನರ ಮೊಮ್ಮಕ್ಕಳೆಲ್ಲ ಈಗ
ವಿದೇಶಿ ಸಾಮಾನುಗಳ ಟಚ್ ಅಪ್
ಎಲ್ಲದಕ್ಕೂ ಬೇಕು ಅನ್ನುತ್ತಾರಲ್ಲ! ಏನ ಹೇಳ್ತಿಯಜ್ಜಾ?


ಮೊನ್ನೆ ಮೊನ್ನೆ ಅಜ್ಜಿ ಕಸ್ತೂರಬಾ ಬಂದು
ಸ್ವಾತಂತ್ರ ಚಳುವಳಿಯೊಳಗ
ನೀ ಬಹಳ ತ್ರಾಸ ಕೊಟ್ಟಿದ್ದಿ ಅಂತಾ
ಲಿಸ್ಟ್ ಕೊಟ್ಟು
‘ಈಗಿನ ನೀವುಗಳೆಲ್ಲಾ ಹೇಗಿದ್ದೀರಿ ನೋಡು’
ಅಂತ ಹೇಳಿ
ಮುದುಕ ಬಂದರೆ ತರಾಟೆ ತಗೋ ಅಂದಳಲ್ಲಾ ಹೌದೇನೋ ಯಜ್ಜಾ?


ಅಪ್ಪ, ಸ್ವತಂತ್ರ ದೇಶದ ಬಗೆಗೆ
ಹೆಮ್ಮೆ ಪಡುತ್ತ ನಿನ್ನ ಸ್ಮರಣೆ
ನಿನ್ನ ವಾಣಿಗಳನ್ನುಚ್ಚರಿಸುತ
ಫೋಟೋಗೆ ನಮಸ್ಕರಿಸುತ್ತಿದ್ದರೆ
ಮಕ್ಕಳು, ಮಮ್ಮಿ ಡ್ಯಾಡಿ
ಅನ್ನುತ್ತ ರಾಕ್ & ರೋಲ್ ಕೇಳುತ್ತ
ಮೈಕಲ್ ಜಾಕ್ಸನ್ ಫೋಟೋಗೆ
ಮುದ್ದಿಸುವದು ನೋಡಿ
ನಾನು ಇವೆರಡರ ಮಧ್ಯ
ಗೊದಮೊಟ್ಟೆಯಾಗುತ್ತಿದ್ದೇನಲ್ಲ; ಯಜ್ಜಾ-


ನಿನ್ನ ಜೊತೆ ಖಾದಿ ಉಟ್ಟು
ಜೇಲಿಗೆ ಹೋಗಿ ಬಂದವರು
ಈಗ ವಿದೇಶಿ ಸ್ಕಾರ್ಪ್
ಸ್ವೆಟ್ಟರ್ ಹಾಕಿಕೊಂಡು
ಸೋಫಾ ಮೇಲಿ ಕಾಲೇರಿಸಿ ಕುಳಿತು
ಗುಂಡು ಹಾಕಿ, ಕ್ಯಾಬರೆ ನೋಡುತ್ತ
ರಾಜಕಾರಣ ಮಾಡುತ್ತಿದ್ದಾರಲ್ಲ! ಥೂ ಯಜ್ಜಾ-


ನೀನು ಅಂದು ಒದ್ದೋಡಿಸಿದ
ಬ್ರಟೀಷರಷ್ಟೇ ಅಲ್ಲ
ಜಗತ್ತಿನ ಜನ ಜಾಗತೀಕರಣದ
ನೆಪದಲ್ಲಿ ಮತ್ತೆ ಬರುತ್ತಿದ್ದಾರೆ
ಒಂದೆಡೆ ಕೂಗಾಟ ಹೋರಾಟ
ಮತ್ತೊಂದೆಡೆ ರ್‍ಎಡ್ ಕಾರ್ಪೆಟ್ ಸ್ವಾಗತ
ದುಃಖಸುತ್ತಿದೀಯಾ! ಯಜ್ಜಾ


ಇಂದಿನ ಏಕೆ ೪೭ ಗನ್
ಮುಂದೆ ಅಂದು
ನೀ ಹೇಳುತ್ತಿದ್ದ ಕೊಡುತ್ತಿದ್ದ ಎಲ್ಲರನ್ನೂ
ಗೆಲ್ಲಬಲ್ಲ ಆಯುಧ ‘ಪ್ರೀತಿ’ ಎನ್ನುತ್ತಿದ್ದ
ತುಂಬು ಹೃದಯದ ನಿನ್ನ ಮಾತು
ಮತ್ತೆಂದಾದರೂ ಕೇಳಿಸಿಕೊಂಡಿವೆಯೇ? ಯಜ್ಜಾ


೫೦ನೆಯ ಸ್ವತಂತ್ರ ವರ್ಷದ
ದೇಶ ನೆನೆಸಿಕೊಂಡು
ಇಲ್ಲೊಬ್ಬ ಅಜ್ಜ ನಿನ್ನ ಹೆಸರು
ಕೂಗಿ, ಕೂಗಿ, ಬೆಚ್ಚಗಿರಲಿಕ್ಕೆ ಹೇಳಿ
ನಿನ್ನ ಫೋಟೋಗೆ ತನ್ನ ಹಳೆಯ ಕೋಟು ಹಾಕಿ
ಕಣ್ಣೀರು ಸುರಿಸುತ್ತ ನಿನ್ನೆಯೇ
ಸತ್ತು ಹೋದನಲ್ಲ!
ಇದೇನು ಯಜ್ಜಾ ಇದರರ್ಥ!!


ಕಣ್ಣು ಕಿವಿ, ಬಾಯಿ ಮುಚ್ಚಿದ
ಮಂಗಗಳನ್ನು ನೀನು ಹೀಗೇ ಇರಗೊಟ್ಟರೆ
ನಾ ಕೇಳಿದ ಪ್ರಶ್ನೆಗೆ
ಒಂದೊಂದೇ ಮಂಗನ್ನ ಸರಿಸುತ್ತ
ನೀ ತಪ್ಪಿಸಿಕೊಂಡಿದ್ದಾದರೆ
ನಾನು, ನೀನು ಬೇತಾಳ ವಿಕ್ರಮಾದಿತ್ಯರಾಗಿ
ಸುಡುಗಾಡಾದಾಗ ಅಡ್ಡಾಡಬೇಕಾದೀತು
ನಾ ಕಾಯೋದಿಲ್ಲ ಯಜ್ಜಾ ಇನ್ನ
“ಬೇಗ ಉತ್ತರ ಹೇಳು”
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...