Home / ಕವನ / ಕವಿತೆ / ಉತ್ತರ ಹೇಳಜ್ಜಾ

ಉತ್ತರ ಹೇಳಜ್ಜಾ


‘ಸತ್ಯದ ಯಜ್ಞಕುಂಡದಲ್ಲಿ ನಾವು
ಎಲ್ಲವನ್ನೂ ಅರ್ಪಿಸಿಬಿಡಬೇಕು’ ಅಂದಿದ್ದೆಯಲ್ಲಾ
ಈಗ ಆಸತ್ಯದ ಬ್ಯಾರಲ್‌ದೊಳಗೆ ಗುಂಡಿನ
ಲಾಬಿಗಳು ಏಳುತ್ತಿವೆಯಲ್ಲ! ಇದಕ್ಕೇನಂತಿ ಯಜ್ಜಾ?


ವಿದೇಶಿ ಬಟ್ಟೆ ಬರೆಗಳನ್ನೆಲ್ಲಾ
ಸುಟ್ಟುಹಾಕಿ ಜೈಕಾರ ಹಾಕಿದ ನಿನ್ನ
ಜನರ ಮೊಮ್ಮಕ್ಕಳೆಲ್ಲ ಈಗ
ವಿದೇಶಿ ಸಾಮಾನುಗಳ ಟಚ್ ಅಪ್
ಎಲ್ಲದಕ್ಕೂ ಬೇಕು ಅನ್ನುತ್ತಾರಲ್ಲ! ಏನ ಹೇಳ್ತಿಯಜ್ಜಾ?


ಮೊನ್ನೆ ಮೊನ್ನೆ ಅಜ್ಜಿ ಕಸ್ತೂರಬಾ ಬಂದು
ಸ್ವಾತಂತ್ರ ಚಳುವಳಿಯೊಳಗ
ನೀ ಬಹಳ ತ್ರಾಸ ಕೊಟ್ಟಿದ್ದಿ ಅಂತಾ
ಲಿಸ್ಟ್ ಕೊಟ್ಟು
‘ಈಗಿನ ನೀವುಗಳೆಲ್ಲಾ ಹೇಗಿದ್ದೀರಿ ನೋಡು’
ಅಂತ ಹೇಳಿ
ಮುದುಕ ಬಂದರೆ ತರಾಟೆ ತಗೋ ಅಂದಳಲ್ಲಾ ಹೌದೇನೋ ಯಜ್ಜಾ?


ಅಪ್ಪ, ಸ್ವತಂತ್ರ ದೇಶದ ಬಗೆಗೆ
ಹೆಮ್ಮೆ ಪಡುತ್ತ ನಿನ್ನ ಸ್ಮರಣೆ
ನಿನ್ನ ವಾಣಿಗಳನ್ನುಚ್ಚರಿಸುತ
ಫೋಟೋಗೆ ನಮಸ್ಕರಿಸುತ್ತಿದ್ದರೆ
ಮಕ್ಕಳು, ಮಮ್ಮಿ ಡ್ಯಾಡಿ
ಅನ್ನುತ್ತ ರಾಕ್ & ರೋಲ್ ಕೇಳುತ್ತ
ಮೈಕಲ್ ಜಾಕ್ಸನ್ ಫೋಟೋಗೆ
ಮುದ್ದಿಸುವದು ನೋಡಿ
ನಾನು ಇವೆರಡರ ಮಧ್ಯ
ಗೊದಮೊಟ್ಟೆಯಾಗುತ್ತಿದ್ದೇನಲ್ಲ; ಯಜ್ಜಾ-


ನಿನ್ನ ಜೊತೆ ಖಾದಿ ಉಟ್ಟು
ಜೇಲಿಗೆ ಹೋಗಿ ಬಂದವರು
ಈಗ ವಿದೇಶಿ ಸ್ಕಾರ್ಪ್
ಸ್ವೆಟ್ಟರ್ ಹಾಕಿಕೊಂಡು
ಸೋಫಾ ಮೇಲಿ ಕಾಲೇರಿಸಿ ಕುಳಿತು
ಗುಂಡು ಹಾಕಿ, ಕ್ಯಾಬರೆ ನೋಡುತ್ತ
ರಾಜಕಾರಣ ಮಾಡುತ್ತಿದ್ದಾರಲ್ಲ! ಥೂ ಯಜ್ಜಾ-


ನೀನು ಅಂದು ಒದ್ದೋಡಿಸಿದ
ಬ್ರಟೀಷರಷ್ಟೇ ಅಲ್ಲ
ಜಗತ್ತಿನ ಜನ ಜಾಗತೀಕರಣದ
ನೆಪದಲ್ಲಿ ಮತ್ತೆ ಬರುತ್ತಿದ್ದಾರೆ
ಒಂದೆಡೆ ಕೂಗಾಟ ಹೋರಾಟ
ಮತ್ತೊಂದೆಡೆ ರ್‍ಎಡ್ ಕಾರ್ಪೆಟ್ ಸ್ವಾಗತ
ದುಃಖಸುತ್ತಿದೀಯಾ! ಯಜ್ಜಾ


ಇಂದಿನ ಏಕೆ ೪೭ ಗನ್
ಮುಂದೆ ಅಂದು
ನೀ ಹೇಳುತ್ತಿದ್ದ ಕೊಡುತ್ತಿದ್ದ ಎಲ್ಲರನ್ನೂ
ಗೆಲ್ಲಬಲ್ಲ ಆಯುಧ ‘ಪ್ರೀತಿ’ ಎನ್ನುತ್ತಿದ್ದ
ತುಂಬು ಹೃದಯದ ನಿನ್ನ ಮಾತು
ಮತ್ತೆಂದಾದರೂ ಕೇಳಿಸಿಕೊಂಡಿವೆಯೇ? ಯಜ್ಜಾ


೫೦ನೆಯ ಸ್ವತಂತ್ರ ವರ್ಷದ
ದೇಶ ನೆನೆಸಿಕೊಂಡು
ಇಲ್ಲೊಬ್ಬ ಅಜ್ಜ ನಿನ್ನ ಹೆಸರು
ಕೂಗಿ, ಕೂಗಿ, ಬೆಚ್ಚಗಿರಲಿಕ್ಕೆ ಹೇಳಿ
ನಿನ್ನ ಫೋಟೋಗೆ ತನ್ನ ಹಳೆಯ ಕೋಟು ಹಾಕಿ
ಕಣ್ಣೀರು ಸುರಿಸುತ್ತ ನಿನ್ನೆಯೇ
ಸತ್ತು ಹೋದನಲ್ಲ!
ಇದೇನು ಯಜ್ಜಾ ಇದರರ್ಥ!!


ಕಣ್ಣು ಕಿವಿ, ಬಾಯಿ ಮುಚ್ಚಿದ
ಮಂಗಗಳನ್ನು ನೀನು ಹೀಗೇ ಇರಗೊಟ್ಟರೆ
ನಾ ಕೇಳಿದ ಪ್ರಶ್ನೆಗೆ
ಒಂದೊಂದೇ ಮಂಗನ್ನ ಸರಿಸುತ್ತ
ನೀ ತಪ್ಪಿಸಿಕೊಂಡಿದ್ದಾದರೆ
ನಾನು, ನೀನು ಬೇತಾಳ ವಿಕ್ರಮಾದಿತ್ಯರಾಗಿ
ಸುಡುಗಾಡಾದಾಗ ಅಡ್ಡಾಡಬೇಕಾದೀತು
ನಾ ಕಾಯೋದಿಲ್ಲ ಯಜ್ಜಾ ಇನ್ನ
“ಬೇಗ ಉತ್ತರ ಹೇಳು”
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...