ಗಾಂಧಿಗೆ

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ
ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ
ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ
ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ.
ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ
ಗಾಡಿ ಹತ್ತಿದೆ.  ನಿಂತವರ ನಡುವೆ ನಿಂತೆ.
ಮೊದಮೊದಲು ನಿಧಾನಗತಿ
ಮತ್ತೆ ಉಕ್ಕಿಗೆ ಉಕ್ಕು ಸಂಧಾನಶ್ರುತಿ
ನನ್ನ ಮಸ್ತಿಷ್ಕಕ್ಕೆ ಹೊಕ್ಕು ಹೊರಟು ಚಕ್ರಾರಪಂಕ್ತಿ
ಯುಗ ಮುಗುಚುತ್ತದೆ
ಬೆರಳುಗಳು ಬೇರುಗಳಾಗಿ ಒಡೆಯುತ್ತವೆ
ಕಣ್ಣಗುಡ್ಡೆಗಳು ನಕ್ಷತ್ರಗಳಾಗಿ ಸಿಡಿಯುತ್ತವೆ
ಎರಡೂ ಕೊನೆಗಳಲ್ಲಿ ಬಹುಶಃ ನಾವು ಸಂಧಿಸುತ್ತೇವೆ.

ಜನರ ಮತ್ತು ದೈವಗಳ ನಡುವೆ
ಆರಿಸುವುದು ಕಷ್ಟ
ನಿನಗೆ ಮನುಷ್ಯರ ಹಿಂದಿನ ದೇವರು ಬೇಕು
ನನಗೆ ದೇವರ ಮುಂದಿನ ಮನುಷ್ಯರು ಮಾತ್ರ ಸಾಕು
ನೀನು ನೋಖಾಲಿಯ ಹಿಂದೆ
ನಾನು ಢಾಕ್ಕಾದ ಮುಂದೆ
ನಿನಗೆ ರಾಮನ ಬಳಿಗೆ ಐದೇ ನಿಮಿಷ
ನನಗೆ ಆನ್ವೇಷಣೆಯ ಅನೇಕ ವರುಷ
ದೇವರನ್ನು ಕಳೆದುಕೊಂಡ ನಾನು
ಈ ಭೂಮಿಯಲ್ಲಿ ನೆಲೆಯಿಲ್ಲದೆ ಅಲೆಯುತ್ತಿದ್ದರೂ ಬಿಡದೆ
ಅಕ್ಟೋಬರ್‍ ಎರಡರಂತೆ ಮತ್ತೆ ಮತ್ತೆ ನನ್ನಲ್ಲಿ
ಹುಟ್ಟುತ್ತಿರುವೆಯಲ್ಲಾ, ಗಾಂಧಿ!
ಮಳೆ ಬಿಸಿಲಿಗೆ ನಿಂತ ನಿನ್ನ ನೂರಿನ್ನೂರು ಪ್ರತಿಮೆಗಳಂತೆ
ನಾನೂ ಮಾಸುತ್ತೇನೆ
ಯಥೇಚ್ಫ ಮೌನದಲ್ಲಿ
ಬುದ್ಧಭಗವಾನನ ಕಣ್ಣಿನಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ಪ್ಲಾನು
Next post ನಾವು

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…