Home / ಕವನ / ಕವಿತೆ / ಗಾಂಧಿಗೆ

ಗಾಂಧಿಗೆ

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ
ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ
ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ
ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ.
ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ
ಗಾಡಿ ಹತ್ತಿದೆ.  ನಿಂತವರ ನಡುವೆ ನಿಂತೆ.
ಮೊದಮೊದಲು ನಿಧಾನಗತಿ
ಮತ್ತೆ ಉಕ್ಕಿಗೆ ಉಕ್ಕು ಸಂಧಾನಶ್ರುತಿ
ನನ್ನ ಮಸ್ತಿಷ್ಕಕ್ಕೆ ಹೊಕ್ಕು ಹೊರಟು ಚಕ್ರಾರಪಂಕ್ತಿ
ಯುಗ ಮುಗುಚುತ್ತದೆ
ಬೆರಳುಗಳು ಬೇರುಗಳಾಗಿ ಒಡೆಯುತ್ತವೆ
ಕಣ್ಣಗುಡ್ಡೆಗಳು ನಕ್ಷತ್ರಗಳಾಗಿ ಸಿಡಿಯುತ್ತವೆ
ಎರಡೂ ಕೊನೆಗಳಲ್ಲಿ ಬಹುಶಃ ನಾವು ಸಂಧಿಸುತ್ತೇವೆ.

ಜನರ ಮತ್ತು ದೈವಗಳ ನಡುವೆ
ಆರಿಸುವುದು ಕಷ್ಟ
ನಿನಗೆ ಮನುಷ್ಯರ ಹಿಂದಿನ ದೇವರು ಬೇಕು
ನನಗೆ ದೇವರ ಮುಂದಿನ ಮನುಷ್ಯರು ಮಾತ್ರ ಸಾಕು
ನೀನು ನೋಖಾಲಿಯ ಹಿಂದೆ
ನಾನು ಢಾಕ್ಕಾದ ಮುಂದೆ
ನಿನಗೆ ರಾಮನ ಬಳಿಗೆ ಐದೇ ನಿಮಿಷ
ನನಗೆ ಆನ್ವೇಷಣೆಯ ಅನೇಕ ವರುಷ
ದೇವರನ್ನು ಕಳೆದುಕೊಂಡ ನಾನು
ಈ ಭೂಮಿಯಲ್ಲಿ ನೆಲೆಯಿಲ್ಲದೆ ಅಲೆಯುತ್ತಿದ್ದರೂ ಬಿಡದೆ
ಅಕ್ಟೋಬರ್‍ ಎರಡರಂತೆ ಮತ್ತೆ ಮತ್ತೆ ನನ್ನಲ್ಲಿ
ಹುಟ್ಟುತ್ತಿರುವೆಯಲ್ಲಾ, ಗಾಂಧಿ!
ಮಳೆ ಬಿಸಿಲಿಗೆ ನಿಂತ ನಿನ್ನ ನೂರಿನ್ನೂರು ಪ್ರತಿಮೆಗಳಂತೆ
ನಾನೂ ಮಾಸುತ್ತೇನೆ
ಯಥೇಚ್ಫ ಮೌನದಲ್ಲಿ
ಬುದ್ಧಭಗವಾನನ ಕಣ್ಣಿನಲ್ಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...