ಗಾಂಧಿಗೆ

ಕೆಲವು ವರ್ಷಗಳ ಹಿಂದೆ ರೇಲ್ವೇಸ್ಟೇಷನಿನ ಕ್ಯಾಂಟೀನಿನಲ್ಲಿ
ಚಹಾ ಕುಡಿಯುತ್ತಿರುವಾಗ ಬಟ್ಟಲಿನಲ್ಲಿ
ಗಾಂಧಿ ಟೋಪ್ಪಿಗೆ ಕಂಡು ಚಕಿತನಾದೆ.  ಆಗ
ಆ ಕುರಿತು ಆಲೋಚಿಸಲು ಸಮಯವಿರಲಿಲ್ಲ.
ಅವಸರವಸರವಾಗಿ ಮಂದಿಯ ಮಧ್ಯೆ ಓಡೋಡಿ
ಗಾಡಿ ಹತ್ತಿದೆ.  ನಿಂತವರ ನಡುವೆ ನಿಂತೆ.
ಮೊದಮೊದಲು ನಿಧಾನಗತಿ
ಮತ್ತೆ ಉಕ್ಕಿಗೆ ಉಕ್ಕು ಸಂಧಾನಶ್ರುತಿ
ನನ್ನ ಮಸ್ತಿಷ್ಕಕ್ಕೆ ಹೊಕ್ಕು ಹೊರಟು ಚಕ್ರಾರಪಂಕ್ತಿ
ಯುಗ ಮುಗುಚುತ್ತದೆ
ಬೆರಳುಗಳು ಬೇರುಗಳಾಗಿ ಒಡೆಯುತ್ತವೆ
ಕಣ್ಣಗುಡ್ಡೆಗಳು ನಕ್ಷತ್ರಗಳಾಗಿ ಸಿಡಿಯುತ್ತವೆ
ಎರಡೂ ಕೊನೆಗಳಲ್ಲಿ ಬಹುಶಃ ನಾವು ಸಂಧಿಸುತ್ತೇವೆ.

ಜನರ ಮತ್ತು ದೈವಗಳ ನಡುವೆ
ಆರಿಸುವುದು ಕಷ್ಟ
ನಿನಗೆ ಮನುಷ್ಯರ ಹಿಂದಿನ ದೇವರು ಬೇಕು
ನನಗೆ ದೇವರ ಮುಂದಿನ ಮನುಷ್ಯರು ಮಾತ್ರ ಸಾಕು
ನೀನು ನೋಖಾಲಿಯ ಹಿಂದೆ
ನಾನು ಢಾಕ್ಕಾದ ಮುಂದೆ
ನಿನಗೆ ರಾಮನ ಬಳಿಗೆ ಐದೇ ನಿಮಿಷ
ನನಗೆ ಆನ್ವೇಷಣೆಯ ಅನೇಕ ವರುಷ
ದೇವರನ್ನು ಕಳೆದುಕೊಂಡ ನಾನು
ಈ ಭೂಮಿಯಲ್ಲಿ ನೆಲೆಯಿಲ್ಲದೆ ಅಲೆಯುತ್ತಿದ್ದರೂ ಬಿಡದೆ
ಅಕ್ಟೋಬರ್‍ ಎರಡರಂತೆ ಮತ್ತೆ ಮತ್ತೆ ನನ್ನಲ್ಲಿ
ಹುಟ್ಟುತ್ತಿರುವೆಯಲ್ಲಾ, ಗಾಂಧಿ!
ಮಳೆ ಬಿಸಿಲಿಗೆ ನಿಂತ ನಿನ್ನ ನೂರಿನ್ನೂರು ಪ್ರತಿಮೆಗಳಂತೆ
ನಾನೂ ಮಾಸುತ್ತೇನೆ
ಯಥೇಚ್ಫ ಮೌನದಲ್ಲಿ
ಬುದ್ಧಭಗವಾನನ ಕಣ್ಣಿನಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸೂರ್ಯನ ಪ್ಲಾನು
Next post ನಾವು

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…