ದೇವರು

ಆರು ದಿನ ಕೆಲಸ ಮಾಡಿ ಏಳನೆ ದಿನ ದೇವರು
ವಿಶ್ರಾಂತಿ ತೆಗೆದುಕೊಂಡದ್ದು ಎಲ್ಲರಿಗೂ ಗೊತ್ತಿದೆ.
ತಡವಾಗಿ ಎದ್ದ, ದಿನವಿಡೀ ಕುಡಿದ, ಸಾಯಂಕಾಲ
ಬೀಚಿನಲ್ಲಿ ಸೂರ್ಯಸ್ನಾನ ಮಾಡಿದ, ಕ್ಲಬ್ಬಿನಲ್ಲಿ
ಆಡಿದ, ಡಾನ್ಸ್ ಮಾಡಿದ, ಬಾರ್‌ಮೈಡನ್ನು
ಕರೆದುಕೊಂಡು ರೂಮಿಗೆ ಹೊರಟ. ತನ್ನ
ರೂಮೆಂದು ಯಾರದೋ ರೂಮನ್ನು ಹೊಕ್ಕ.

ಎಲ್ಲಿ?  ಕೆಲವರೆನ್ನುತ್ತಾರೆ ಹವಾಯಿಯಲ್ಲಿ
ಎಂದು.  ಇನ್ನು ಕೆಲವರೆನ್ನುತ್ತಾರೆ ಗೋವಾದಲ್ಲಿ
ಎಂದು.  ದೇವರು ಇಲ್ಲಿ ವಿಶ್ರಾಂತಿ ಪಡೆದ
ಎಂಬುದಾಗಿ ಪ್ರತಿಯೊಂದು ವಿಶ್ರಾಮಧಾಮವೂ
ಪ್ರಚಾರ ಮಾಡುತ್ತಿದೆ.  ಹೀಗಿರುವಾಗ
ಪ್ರಿಯೆ, ನಾವು ಯಾರನ್ನು ನಂಬೋಣ?
ಎಲ್ಲಿಗೆ ಹೋಗೋಣ
ಈ ವಾರದ ಕೊನೆಗೆ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನಗೇನು ಕಡಿಮೆಯಿಲ್ಲ
Next post ದುಃಖ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

cheap jordans|wholesale air max|wholesale jordans|wholesale jewelry|wholesale jerseys