ಹೊಸಬರು

ಈ ಕೊಳ ಯಾಕೆ ಕೊಳಚೆಯಾಗಿದೆ?  ಎಂಜಲನ್ನ
ಯಾಕೆ ಬೀದಿಗೆಸೆಯುತ್ತೀರಿ?  ಇದೇನು ದೇವಸ್ಥಾನದ
ಮುಂದೆ ಮೂಗಿಗೆ ಹಿಡಿಯುವ ಘಾಟು?  ಅಚೀಚೆ
ಉಗಿಯುತ್ತ ಹೋಗುವ ಆ ಅವರು ಯಾರು?  ಇದು
ಬಸ್ಸು ನಿಲ್ದಾಣವೆ ಅಥವ… ಎಂಬಿತ್ಯಾದಿಯಾಗಿ ನೀವು
ಕೇಳಲಿ, ಕೇಳದೆ ಇರಲಿ, ನಿಮ್ಮ ಮುಖಭಾವದಿಂದಲೆ
ಗೊತ್ತಾಗುವುದು ನೀವು ಈ ಸ್ಥಳಕ್ಕೆ ಹೊಸಬರು ಎಂದು

ಹೊಸಬರಾದರೆ ನೀವು ಯಾರಿಂದಲೂ ತಪ್ಪಿಸಿಕೊಳ್ಳಲಾರಿರಿ
ಒಳಬೀದಿಯಲ್ಲಿ ನಡೆದಿರಿ;  ಹಳೆ ಹಂಚಿನ ಅಂಗಡಿ
ಗೂಡಿನೊಳಗೆ ಕುಳಿತಿರಿ;  ಕ್ಷೌರಿಕನಲ್ಲಿ ಕಾಯುತ್ತಿರಿ:
ಎಲ್ಲರೂ ನಿಮ್ಮನ್ನು ಗಮನಿಸುತ್ತಾರೆ.  ನಿಮ್ಮ ಅಂಗಿಯ
ಬಣ್ಣವನ್ನೂ, ತಲೆಗೂದಲಿನ ಉದ್ದವನ್ನೂ ಕಣ್ಣಿನಲ್ಲೆ
ಹಿಡಿದು ಬಿಡುತ್ತಾರೆ.  ಯಾರೋ ಹೇಳಿದರೆಂದು ನೀವು
ಸುಮ್ಮನೇ ಈ ಕಡೆ ಬಂದಿರಬಹುದು.  ಸುದ್ದಿಯಲ್ಲಿ
ಬೀಳುವುದು ನಿಮಗೆ ಇಷ್ಟವಿಲ್ಲದಿರಬಹುದು.  ಆದರೂ
ಸುದ್ದಿಯಿಂದ ತಪ್ಪಿಸಿಕೊಳ್ಳಲಾರಿರಿ ನೀವು.  ಕಾರಣ
ನೀವು ಪ್ರೀತಿಸಿ, ಮದುವೆಯಾಗಲಾರದ ಹುಡುಗಿ
ಇಲ್ಲೇ ಇದ್ದಾಳೆ.   ಆ ಮೇಲೆ ನೀವೆಂದೂ
ಹೊಸಬರಾಗಿ ಉಳಿಯುವುದಿಲ್ಲ ಇವರ ಮಧ್ಯೆ.

ಹೇಗೆ ಉಳಿಯುವುದು ಸಾಧ್ಯ? ಈ ಊರ
ಅನ್ನ ತಿಳಿ ಸಾರು, ಕಬ್ಬಿನ ಹಾಲು, ಅಂಗಡಿ ವ್ಯವಹಾರ
ಸೋಡ ಬೀಡ, ಜಗಳ, ಪ್ರೇಮ ಎಲ್ಲರಿಗೂ
ಒಂದೇ ಗುರುತು ಒತ್ತಿಬಿಡುತ್ತವೆ.  ಕ್ರಮೇಣ
ನೀವು ಇಲ್ಲಿನ ಸಭೆಗಳಲ್ಲಿ ಮಾತಾಡುತ್ತಿರುವುದನ್ನು ಕಂಡು
ನಿಮಗೇ ಆಶ್ಚರ್ಯವಾಗಬಹುದು.  ಈ ಆಶ್ಚರ್ಯವೂ
ಹೋಗುವುದು.  ಇನ್ನೆಂದೂ ನೀವು ಕಿರಿಕಿರಿಯ ಪ್ರಶ್ನೆಗಳನ್ನು
ಕೇಳುವುದಿಲ್ಲ.  ಅದಲ್ಲದೆ, ಹೊಸಬರಾಗಿಯೇ
ಉಳಿಯಬೇಕೆಂದು ಮಾಡಿದ್ದರೆ ನೀವು-
ನಿಮ್ಮ ಮುಂದಿನ ಬಸ್ಸು ಇನ್ನರ್ಧ ಗಂಟೆಯಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೩೬
Next post ಚಂದಮಾಮ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…