ಭೂಕಂಪನಕ್ಕೆ ಮುನ್ನೆಚ್ಚರಿಕೆ

‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ಮಾಡಿದ ನೆನಪು ಮರೆಯಾಗಿಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಈ ಭಯಾನಕ ಕಂಪನಗಳು ಆಗಾಗ ಆಗುತ್ತಲೇ ಇರುತ್ತವೆ.

ಇಂಥಹ ಭೀಕರವಾದ ಭೂಕಂಪ ಸಂಭವಿಸಬಹುದೆಂದು ಗೊತ್ತಾದರೆ ಸುರಕ್ಷಿತವಾಗಿರಬಹುದು. ಇದು ಜನಗಳ ಆಂತರ್ಯದ ಧ್ವನಿಯಾಗಿದೆ. ಇದುವರೆಗೂ ನಿಖರವಾಗಿ ಭೂಕಂಪದ ಸುಳಿವನ್ನು ಕೊಟ್ಟಿರುವದಿಲ್ಲ ಅದರೆ ಜಪಾನಿನ ಸಂರೋಧಕರು ಮುನ್ನಚ್ಚರಿಕೆ ಕೊಡಬಹುದೆನ್ನುತ್ತಾರೆ. ಎಚ್ಚರಿಕೆ ನೀಡುವುದು ಶಬ್ದ ಹೊರಹೊಮ್ಮುವ ಮೂಲಕವಲ್ಲ
ನೀಲಿಗೆಂಪು ಬೆಳಕಿನ ಮಿಂಚನ್ನು ಹರಿಸುವ ಮೂಲಕ, ಎಂದು ಹೇಳುತ್ತಾರೆ. ಇದೀಗ ಜಪಾನಿನ ಕೂಬೆಯ ಭೂಕಂಪ ಇದನ್ನು ದೃಢಪಡಿಸಿದೆ. ಕೂಬೆಯ ಭೂಕಂಪದ ಮೊದಲು (ಹತ್ತಾರು ನಿಮಿಷಗಳ ಮೊದಲು) ನೀಲಿ ಮತ್ತು ಕೆಂಪು ಬೆಳಕು ಕಾಣಿಸಿಕೊಂಡಿತೆಂದು ಜನರ ವರದಿ. ಆ ಬಗೆಯ ಬೆಳಕು ಒತ್ತಡಕ್ಕೊಳಗಾದಾಗ ಮರಳಿನ ಕಲ್ಲುಗಳಿಂದ ಉದ್ಭವಾಗುತ್ತದೆಂದು ಜಪಾನಿನ ಸಂಶೋಧಕ ಕಲಾಗಚೆಯವರು ಅಭಿಪ್ರಾಯಪಡುತ್ತಾರೆ.

ಭೂಕಂಪನ ಪ್ರದೇಶದಲ್ಲಿ ಕಲ್ಲು ಒತ್ತಡದಿಂದಾಗಿ ಪುಡಿಯಾಗುವುದಕ್ಕೆ ಮೊದಲು ಮಿಂಚು ಬೆಳಕು ಹುಟ್ಟಿ 100 ಮಿಲಿ ಸೆಕೆಂಡುಗಳವರೆಗೆ ಮುಂದುವರೆಯುವುದು. ಸಿಲಿಕಾ(ಮರಳಿನ ಕಣ) ದಿಂದ ಬಂಡೆಗಳನ್ನೂ ಅದುಮಿ ಒತ್ತಡ ಹೇರಿದಾಗ ಆ ಬಗೆಯ ಮಿಂಚಿನ ಬೆಳಕು ಹೊರಬರುವುದೆಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಪ್ಪಯೋಗಗಳು ಮುಂದುವರೆದಿವೆ.
******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಯುವ ನೀರಿನ ತರ ಈ ಬಾಳು
Next post ಗಾಂಧೀಜಿಯವರ ಮೇಲೆ ವಿವೇಕಾನಂದರ ಪ್ರಭಾವ

ಸಣ್ಣ ಕತೆ

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

cheap jordans|wholesale air max|wholesale jordans|wholesale jewelry|wholesale jerseys