Home / ಲೇಖನ / ವಿಜ್ಞಾನ / ಭೂಕಂಪನಕ್ಕೆ ಮುನ್ನೆಚ್ಚರಿಕೆ

ಭೂಕಂಪನಕ್ಕೆ ಮುನ್ನೆಚ್ಚರಿಕೆ

‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ಮಾಡಿದ ನೆನಪು ಮರೆಯಾಗಿಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಈ ಭಯಾನಕ ಕಂಪನಗಳು ಆಗಾಗ ಆಗುತ್ತಲೇ ಇರುತ್ತವೆ.

ಇಂಥಹ ಭೀಕರವಾದ ಭೂಕಂಪ ಸಂಭವಿಸಬಹುದೆಂದು ಗೊತ್ತಾದರೆ ಸುರಕ್ಷಿತವಾಗಿರಬಹುದು. ಇದು ಜನಗಳ ಆಂತರ್ಯದ ಧ್ವನಿಯಾಗಿದೆ. ಇದುವರೆಗೂ ನಿಖರವಾಗಿ ಭೂಕಂಪದ ಸುಳಿವನ್ನು ಕೊಟ್ಟಿರುವದಿಲ್ಲ ಅದರೆ ಜಪಾನಿನ ಸಂರೋಧಕರು ಮುನ್ನಚ್ಚರಿಕೆ ಕೊಡಬಹುದೆನ್ನುತ್ತಾರೆ. ಎಚ್ಚರಿಕೆ ನೀಡುವುದು ಶಬ್ದ ಹೊರಹೊಮ್ಮುವ ಮೂಲಕವಲ್ಲ
ನೀಲಿಗೆಂಪು ಬೆಳಕಿನ ಮಿಂಚನ್ನು ಹರಿಸುವ ಮೂಲಕ, ಎಂದು ಹೇಳುತ್ತಾರೆ. ಇದೀಗ ಜಪಾನಿನ ಕೂಬೆಯ ಭೂಕಂಪ ಇದನ್ನು ದೃಢಪಡಿಸಿದೆ. ಕೂಬೆಯ ಭೂಕಂಪದ ಮೊದಲು (ಹತ್ತಾರು ನಿಮಿಷಗಳ ಮೊದಲು) ನೀಲಿ ಮತ್ತು ಕೆಂಪು ಬೆಳಕು ಕಾಣಿಸಿಕೊಂಡಿತೆಂದು ಜನರ ವರದಿ. ಆ ಬಗೆಯ ಬೆಳಕು ಒತ್ತಡಕ್ಕೊಳಗಾದಾಗ ಮರಳಿನ ಕಲ್ಲುಗಳಿಂದ ಉದ್ಭವಾಗುತ್ತದೆಂದು ಜಪಾನಿನ ಸಂಶೋಧಕ ಕಲಾಗಚೆಯವರು ಅಭಿಪ್ರಾಯಪಡುತ್ತಾರೆ.

ಭೂಕಂಪನ ಪ್ರದೇಶದಲ್ಲಿ ಕಲ್ಲು ಒತ್ತಡದಿಂದಾಗಿ ಪುಡಿಯಾಗುವುದಕ್ಕೆ ಮೊದಲು ಮಿಂಚು ಬೆಳಕು ಹುಟ್ಟಿ 100 ಮಿಲಿ ಸೆಕೆಂಡುಗಳವರೆಗೆ ಮುಂದುವರೆಯುವುದು. ಸಿಲಿಕಾ(ಮರಳಿನ ಕಣ) ದಿಂದ ಬಂಡೆಗಳನ್ನೂ ಅದುಮಿ ಒತ್ತಡ ಹೇರಿದಾಗ ಆ ಬಗೆಯ ಮಿಂಚಿನ ಬೆಳಕು ಹೊರಬರುವುದೆಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಪ್ಪಯೋಗಗಳು ಮುಂದುವರೆದಿವೆ.
******

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...