Home / ಲೇಖನ / ವಿಜ್ಞಾನ / ಭೂಕಂಪನಕ್ಕೆ ಮುನ್ನೆಚ್ಚರಿಕೆ

ಭೂಕಂಪನಕ್ಕೆ ಮುನ್ನೆಚ್ಚರಿಕೆ

‘ಭೂಕಂಪ’ ಬಂದರೆ ಜಗತ್ತಿನ ಜನರು ಭಯಭೀತರಾಗುತ್ತಾರೆ. ಏಕೆಂದರೆ ಸಾವು, ನೋವು, ಆಕ್ರಂದನ, ಆಸ್ತಿ ಪಾಸ್ತಿ ಹಾನಿ, ಹೀಗೆ ಗೋಳಿನ ಕಥೆ ಮುಂದುವರಿಯುತ್ತದೆ. ಭೂಮಿ ನಡುಗಿ ಇತ್ತೀಚೆಗೆ ಗುಜರಾತ ಜನರನ್ನು ತಲ್ಲಣಗೊಳಿಸಿ ಸಾವು ನೋವನ್ನುಂಟು ಮಾಡಿದ ನೆನಪು ಮರೆಯಾಗಿಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿಯೂ ಈ ಭಯಾನಕ ಕಂಪನಗಳು ಆಗಾಗ ಆಗುತ್ತಲೇ ಇರುತ್ತವೆ.

ಇಂಥಹ ಭೀಕರವಾದ ಭೂಕಂಪ ಸಂಭವಿಸಬಹುದೆಂದು ಗೊತ್ತಾದರೆ ಸುರಕ್ಷಿತವಾಗಿರಬಹುದು. ಇದು ಜನಗಳ ಆಂತರ್ಯದ ಧ್ವನಿಯಾಗಿದೆ. ಇದುವರೆಗೂ ನಿಖರವಾಗಿ ಭೂಕಂಪದ ಸುಳಿವನ್ನು ಕೊಟ್ಟಿರುವದಿಲ್ಲ ಅದರೆ ಜಪಾನಿನ ಸಂರೋಧಕರು ಮುನ್ನಚ್ಚರಿಕೆ ಕೊಡಬಹುದೆನ್ನುತ್ತಾರೆ. ಎಚ್ಚರಿಕೆ ನೀಡುವುದು ಶಬ್ದ ಹೊರಹೊಮ್ಮುವ ಮೂಲಕವಲ್ಲ
ನೀಲಿಗೆಂಪು ಬೆಳಕಿನ ಮಿಂಚನ್ನು ಹರಿಸುವ ಮೂಲಕ, ಎಂದು ಹೇಳುತ್ತಾರೆ. ಇದೀಗ ಜಪಾನಿನ ಕೂಬೆಯ ಭೂಕಂಪ ಇದನ್ನು ದೃಢಪಡಿಸಿದೆ. ಕೂಬೆಯ ಭೂಕಂಪದ ಮೊದಲು (ಹತ್ತಾರು ನಿಮಿಷಗಳ ಮೊದಲು) ನೀಲಿ ಮತ್ತು ಕೆಂಪು ಬೆಳಕು ಕಾಣಿಸಿಕೊಂಡಿತೆಂದು ಜನರ ವರದಿ. ಆ ಬಗೆಯ ಬೆಳಕು ಒತ್ತಡಕ್ಕೊಳಗಾದಾಗ ಮರಳಿನ ಕಲ್ಲುಗಳಿಂದ ಉದ್ಭವಾಗುತ್ತದೆಂದು ಜಪಾನಿನ ಸಂಶೋಧಕ ಕಲಾಗಚೆಯವರು ಅಭಿಪ್ರಾಯಪಡುತ್ತಾರೆ.

ಭೂಕಂಪನ ಪ್ರದೇಶದಲ್ಲಿ ಕಲ್ಲು ಒತ್ತಡದಿಂದಾಗಿ ಪುಡಿಯಾಗುವುದಕ್ಕೆ ಮೊದಲು ಮಿಂಚು ಬೆಳಕು ಹುಟ್ಟಿ 100 ಮಿಲಿ ಸೆಕೆಂಡುಗಳವರೆಗೆ ಮುಂದುವರೆಯುವುದು. ಸಿಲಿಕಾ(ಮರಳಿನ ಕಣ) ದಿಂದ ಬಂಡೆಗಳನ್ನೂ ಅದುಮಿ ಒತ್ತಡ ಹೇರಿದಾಗ ಆ ಬಗೆಯ ಮಿಂಚಿನ ಬೆಳಕು ಹೊರಬರುವುದೆಂದು ತಜ್ಞರ ಅಭಿಪ್ರಾಯವಾಗಿದೆ. ಈ ಕುರಿತು ಪ್ಪಯೋಗಗಳು ಮುಂದುವರೆದಿವೆ.
******

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್