ಕೋಲು ಕೋಲನ್ನ ಕೋಲೇ

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ||

ಶಾಲು ಬಣ್ಣದ ಹೊದ್ದೋನ್ಯಾರೆ
ಲೋಲು ಕಿನ್ನುರಿ ನುಡಿಸೋನ್ಯಾರೆ
ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ||
ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ
ಕಾವಾಳದೊಳಗೊಂದು ಕೋಲ್ಮಿಂಚು ಹೊಳೆದಾಂಗ
ದೇವಾಲಯದೊಳಗಿಂದ ಹೊಸನಾದ ನುಡಿದಾಂಗ ||೧||

ಬಯಲು ಬಂಜ್ಯಾಗಿತ್ತು ಎಲ್ಲಾ ಭಣಭಾಣ ಸುರಿದಿತ್ತು
ಗಾಳ್ಯಾಗೇನೋ ಪಿಸುಮಾತು ಹೊಸದಾದ ಸಂದೇಶ
ಮೂಲೆ ಮೂಲೆ ತುಂಬಿ ಬಂದು ಮನದಾಗ ಇಳದೋನ್ಯಾರೆ ||೨||

ಮ್ಯಾಗಾಳ ಕೇರ್ಯಾಗ ಈಸುದಿನ ಮೆರದಾಡಿ ಇದ್ದೋನು
ಕೆಳಗಾಳ ಕೇರ್ಯಾಗೆ ಈಗ ಇಳ್ದು ಬಂದಾನೆ
ಶಿವನ ಜಡೆಮುಡಿಯಿಂದ ಭಾಗೀರಧಿ ಇಳಿದಾಂಗೆ ||೩||

ನೆಲದಾ ಮೈ ಪುಳಕೀಸಿ ತುಳುತುಳುಕಿ ಜ್ಞಾನದ ಸಿರಿಗಂಗೀ
ಹೊಲಸೆಲ್ಲ ತೊಳದಂಗೆ ಓಣಿ ಓಣಿ ತುಂಬಿದಾಂಗೆ
ತಿಳಿಯಾದ ತುಂಗಭದ್ರೆ ತುಂಬಿ ತುಂಬಿ ಹರಿದಂಗೆ ||೪||

ಕಷ್ಟಗಳೆಲ್ಲ ತೀರೀ ಬಾಳೀನ ಇಷ್ಟಾಗಳೆಲ್ಲ ಸಾರಿ
ಲಕ್ಷಾವರಾ ಸುರಂದಂಗೆ ಅಕ್ಷರಾನಾ ತಂದಾನೆ
ಭಿಕ್ಷೆಗತಿ ಇನ್ನಿಲ್ಲ ಸುಭಿಕ್ಷವಾಗಲಂದಾನೆ ||೫||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರವಾಸ ಸಾಹಿತ್ಯದ ಒಳನೋಟಗಳು
Next post ಕ್ರೆಡಿಟ್ ಕಾರ್ಡಿನ ಇತಿಮಿತಿ

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…