ಕೋಲು ಕೋಲನ್ನ ಕೋಲೇ

ಕೋಲು ಕೋಲನ್ನ ಕೋಲೇ ರನ್ನದ ಕೋಲು…. ||ಪ||

ಶಾಲು ಬಣ್ಣದ ಹೊದ್ದೋನ್ಯಾರೆ
ಲೋಲು ಕಿನ್ನುರಿ ನುಡಿಸೋನ್ಯಾರೆ
ಬಾಲವೃದ್ಧರಿಗೆಲ್ಲ ಮೋಡಿಯ ಮಾಡೋನ್ಯಾರೆ ||ಅ.ಪ||
ಬಾವ್ಯಾಗೆ ಜಲಬತ್ತಿ ಬಾಯಾರಿ ನಾವೆಲ್ಲ ಇರುವಾಗ
ಕಾವಾಳದೊಳಗೊಂದು ಕೋಲ್ಮಿಂಚು ಹೊಳೆದಾಂಗ
ದೇವಾಲಯದೊಳಗಿಂದ ಹೊಸನಾದ ನುಡಿದಾಂಗ ||೧||

ಬಯಲು ಬಂಜ್ಯಾಗಿತ್ತು ಎಲ್ಲಾ ಭಣಭಾಣ ಸುರಿದಿತ್ತು
ಗಾಳ್ಯಾಗೇನೋ ಪಿಸುಮಾತು ಹೊಸದಾದ ಸಂದೇಶ
ಮೂಲೆ ಮೂಲೆ ತುಂಬಿ ಬಂದು ಮನದಾಗ ಇಳದೋನ್ಯಾರೆ ||೨||

ಮ್ಯಾಗಾಳ ಕೇರ್ಯಾಗ ಈಸುದಿನ ಮೆರದಾಡಿ ಇದ್ದೋನು
ಕೆಳಗಾಳ ಕೇರ್ಯಾಗೆ ಈಗ ಇಳ್ದು ಬಂದಾನೆ
ಶಿವನ ಜಡೆಮುಡಿಯಿಂದ ಭಾಗೀರಧಿ ಇಳಿದಾಂಗೆ ||೩||

ನೆಲದಾ ಮೈ ಪುಳಕೀಸಿ ತುಳುತುಳುಕಿ ಜ್ಞಾನದ ಸಿರಿಗಂಗೀ
ಹೊಲಸೆಲ್ಲ ತೊಳದಂಗೆ ಓಣಿ ಓಣಿ ತುಂಬಿದಾಂಗೆ
ತಿಳಿಯಾದ ತುಂಗಭದ್ರೆ ತುಂಬಿ ತುಂಬಿ ಹರಿದಂಗೆ ||೪||

ಕಷ್ಟಗಳೆಲ್ಲ ತೀರೀ ಬಾಳೀನ ಇಷ್ಟಾಗಳೆಲ್ಲ ಸಾರಿ
ಲಕ್ಷಾವರಾ ಸುರಂದಂಗೆ ಅಕ್ಷರಾನಾ ತಂದಾನೆ
ಭಿಕ್ಷೆಗತಿ ಇನ್ನಿಲ್ಲ ಸುಭಿಕ್ಷವಾಗಲಂದಾನೆ ||೫||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರವಾಸ ಸಾಹಿತ್ಯದ ಒಳನೋಟಗಳು
Next post ಕ್ರೆಡಿಟ್ ಕಾರ್ಡಿನ ಇತಿಮಿತಿ

ಸಣ್ಣ ಕತೆ

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…