Home / ಕವನ / ಕವಿತೆ / ಶವ ಕ್ಷೇತ್ರಗಳು

ಶವ ಕ್ಷೇತ್ರಗಳು

ಜನರ ಲೌಕಿಕಾಶಯಗಳ ತುಳಿದ
ಕಲ್ಲು ಕಲ್ಲುಗಳ ತಳಪಾಯ
ಮೌಢ್ಯತೆಯ ಗೋಡೆ, ಜಡತೆಯ ಕಂಭಗಳು
ಶೋಷಣೆಯ ವೈಭವೀಕರಣದ ನವರಂಗಗಳು
ಅಂತರ ಪಿಶಾಚಿಯಲೆದಾಟದ ವಿಭ್ರಮೆಯ ಗರ್ಭಗುಡಿ
ಮತಾಧಿಕ್ಯತೆಯ ಬೆರಗಿನ ಗೋಪುರ
ಅಜ್ಞಾನಕ್ಕಿಟ್ಟ ಕಳಸುಗಳು
ಮೆರೆದಿವೆ ಭವ್ಯ ಭಾರತದ ಭೂತದ ಹಿರಿಮೆಗಳು
ಕೆಲವರ ಕೀರ್ತಿಯ ಮೆರೆಸಲು
ಅಸಮಾನತೆಯ ಪರಂಪರೆಯ ಆಚಂದ್ರಾರ್ಕವುಳಿಸಲು
ಕೊಳ್ಳೆ ಲೂಟಿಗಳಿಂದ ಜನರ ಸುಲಿಗೆಯಿಂದ
ದುಡಿವವರ ಬೆವರು ರಕ್ತಗಳಿಂದ
ಕಟ್ಟಿಸಿದ ಸುಂದರ ಸುಲಿಗೆಯ ಮಂದಿರಗಳು
ಬದುಕಿಗೆಂದೂ ಬೆಂಬಲವಾಗದ ಕಲ್ಲು ಚಪ್ಪಡಿ ಹಂದರಗಳು
ಇಲ್ಲಿ ಸಿಗಲು ಸಾಧ್ಯವೇ ಇಲ್ಲದ ಇಷ್ಟಾರ್ಥಗಳನ್ನು
ಅಲ್ಲಿ ಕಂಡುಕೊಂಡು ಮೋಕ್ಷ ಪಡೆಯಲು
ಸೊನ್ನೆಯೊಳಗೇ ಸುತ್ತುತ್ತಾ
ಸುತ್ತಿ ಬಂದು ಅಡ್ಡ ಬೀಳಲು
ಇಹದಿಂದ ಪಲಾಯನವನೇ ಜೀವನ ಸಿದ್ದಿಯೆಂದು ತಿಳಿದು
ಮತ್ಯ೯ವ ಜರೆದು ಕುಗ್ಗಿ ಕುಸಿದು
ನೆಲ ಹತ್ತಲು
ನೆಲ ಹತ್ತುವುದೇ ಪರಮಾನಂದವಾಗಲು
ಇಷ್ಟಿಷ್ಟೇ ಇಡೀ ದೇಶದ
ಸಾಮೂಹಿಕ ಹತ್ಯೆ ಸಾಗಿ ಬಂದಿದೆ ನೂರಾರರು ವರ್ಷ
ಆಳುವ ವರ್ಗದ ಕೃಪಾ ಛತ್ರದಡಿಯಲ್ಲಿ
ಕೊಳಕು ಮಂಡಲಗಳಂಥ ಈ ಕ್ಷೇತ್ರಗಳಲ್ಲಿ
ಭಕ್ತಿಯ ಹೆಸರಿನ ಭಯ ಮೌಢ್ಯದ ಬಂಡವಾಳದ ಮೇಲೆ
ನಡೆದು ಬಂದಿದೆ ಭರ್ಜರಿ ಲಾಭೋದ್ಯಮ
ಅಲ್ಲೇ ದೇವರಿದ್ದಾನೆ, ಅಲ್ಲೇ ಪುಣ್ಯ ದೊರೆಯುವುದು
ಎಂದು ನಂಬಿ ಬೋರಲು ಬಿದ್ದ ಮೂರ್ಖರ ಸಂತೆಗಳು
ಜನ ಮರುಳಿನ ಜಾತ್ರೆಗಳು
ಇವು ಶತಮಾನಗಳಿಂದಲೂ ದೇಶದ ದೇಹದ ಮೇಲೆ
ಗಟ್ಟಿಯಾಗಿ ನೆಲೆಯೂರಿರುವ ಕೀವು ಹುಣ್ಣುಗಳು
ಇವುಗಳೂಳಗೆ ಹರಿದಾಡುತಿವೆ ಕ್ಷುದ್ರ ಹುಳುಗಳು
ಮಂತಾಂಧತೆಯು ದದ್ದುಗಟ್ಟಿದ ಗಟ್ಟಿ ಗಣ್ಣುಗಳು

ಭಿಕ್ಷುಕರನ್ನು ಸಾಲು ಸಾಲು ಬೆಳೆಸುವ
ಪಿಳ್ಳೆ ಜುಟ್ಟುಗಳ ಬೊಜ್ಜುಗಳನ್ನುಬ್ಬಿಸುವ
ಸಾಂಕ್ರಮಿಕ ರೋಗಗಳ ಪುಕ್ಕಟ್ಟೆ ಮಾರುವ
ಜನರ ಜೇಬು ತಲೆಗಳ ನುಣ್ಣಗೆ ಬೋಳಿಸುವ
ಮಣ್ಣ ಮಕ್ಕಳ ದೂರವಿಟ್ಟು ಕಣ್ಣು ಕೆಕ್ಕರಿಸಿ
ಅಧರ್ಮಿಗಳೆಂದು ನೋಡುವ
ಇವು
ಪುಣ್ಯ ಕ್ಷೇತ್ರಗಳಲ್ಲ ಪಣ್ಯ ಕ್ಷೇತ್ರಗಳು
ಶಿವ ಕ್ಷೇತ್ರಗಳಲ್ಲ ಶವ ಕ್ಷೇತ್ರಗಳು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...