ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ ||
ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ
ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ

ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ
ಆದ್ರು ಕೂಡ ನಾನು ನೀನು | ಬೇರೆ ಬೇರೆ ಅಲ್ಲ ಕೊನೆಗೆ

ದಿಕ್ಕೂ ಬ್ಯಾರೆ ಬ್ಯಾರೆ ಆದ್ರು| ಆಕಾಶೆಲ್ಲಾ ಒಂದೇ
ಧ್ರುವಗಳೆಳ್ಡು ಬ್ಯಾರೆ ಆದ್ರು| ಭೂಮಿ ಮಾತ್ರ ಒಂದೇ

ತುದಿಗಳೆಲ್ಡು ಕೊನೆಗೆ ಇದ್ರು | ಕೋಲು ಮಾತ್ರ ಒಂದೇ
ದಂಡೆ ಎಳ್ಡು ಬ್ಯಾರಿರಭೌದು | ಮಧ್ಯದ ಹೊಳೇ ಒಂದೇ

ನನ್ನ ನೀನು ನಿನ್ನ ನಾನು | ನೋಡಿ ಅಳೆಯುವಂತೆ
ಇನ್ನೂ ಯಾರು ಮಾಡಲಾರ್ರು| ಕೂಡಿ ಬಾಳುವಂತೆ

ನಿಂದು ನಂಗೆ ನಂದು ನಿಂಗೆ | ಬಿಂಬಾ ಪ್ರತಿ ಬಿಂಬಾ
ಇದರಾಬದರಾ ಇರೋದ್ರಿಂದ | ತೋರ್ಕೆ ಭೇದ ತುಂಬಾ

ಅಲ್ಲಿಂದಿಲ್ಲೀ ಇಲ್ಲಿಂದಲ್ಲೀ | ಹಾರ್ತೀ ಬಿಟ್ಟೀ ಹಂಗೆ
ಇದ್ದಲ್ಲೇ ಇದ್ದು ತೋರ್ತೀನ್ನಾನು | ಬೆಟ್ಟದ್ಹಂಗೆ

ಎಲ್ಲಾ ಕಡೆಗೆ ಮ್ಯಾಲೆ ಮ್ಯಾಲೆ | ಥಳಕು ಬಳಕು ಮಾಡ್ತಿ
ಒಳಗೇನಿಲ್ಲ ಎನ್ನುವಂಥ | ಸಂಶೇದಾಗೆ ದೂಡ್ತಿ

ಸುತ್ತೂ ಬಳ್ಸೂ ಯಾಕೆ ಕೇಳು | ನನ್ನ ಮನದುದ್ದೇಶ
ನಂದೂ ಒಳಗೇ ನಿಂದೂ ಹೊರಗೆ | ಹರೀತಾವೆ ಪಾಶ

ಅತಿಯಾಗ್ಬಾರ್ದು ಯಾವ್ದೇ ಆದ್ರು | ಹೌದೋ ಅಲ್ಲೋ ಹೇಳು
ಎರಡೂ ಕೂಡಿ ಸಾಗಿದ್ರೇನೆ | ಬಂಗಾರಾಗ್ತಾದ ಬಾಳು

ಭಾಳ ಓಡ್ತಿ ನಿಲ್ಲು ಸ್ವಲ್ಪ | ಕುಂತು ನಿಂತು ಹೋಗು
ಭಾಳಾ ಆಡ್ತಿ ಪುರಸತ್ತಿಲ್ದೆ | ದಮ್ಮು ಎಳಕೊಂಡ್ ಸಾಗು

ಉದ್ದಾ ಅಗಲ ಓಡಾಡಬ್ಯಾಡ | ಆಳಕ್ ಸ್ವಲ್ಪ ಇಳೀ
ಅತ್ತಾ ಇತ್ತಾ ಹರದಾಡಬ್ಯಾಡ | ಕದಡು ನೀರ ತಿಳೀ

ಮ್ಯಾಲೆಮಾಲೆ ಕೈಯಾಡ್ಸಿದ್ರೆ | ನೊರೆ ಬುರುಗು ಅಂದ
ಒಳಾಗಿಳ್ದು ಜಾಲಾಡಿದ್ರೆ | ಮುತ್ತು ರತ್ನ ಚೆಂದ
***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಮಾಣವಚನದ ಪಾವಿತ್ರ್ಯ
Next post ನಿಚ್ಚ ಶಿವರಾತ್ರಿ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys