Home / ಕವನ / ಕವಿತೆ / ನಾನತ್ತ ನೀನಿತ್ತ

ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ ||
ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ
ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ

ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ
ಆದ್ರು ಕೂಡ ನಾನು ನೀನು | ಬೇರೆ ಬೇರೆ ಅಲ್ಲ ಕೊನೆಗೆ

ದಿಕ್ಕೂ ಬ್ಯಾರೆ ಬ್ಯಾರೆ ಆದ್ರು| ಆಕಾಶೆಲ್ಲಾ ಒಂದೇ
ಧ್ರುವಗಳೆಳ್ಡು ಬ್ಯಾರೆ ಆದ್ರು| ಭೂಮಿ ಮಾತ್ರ ಒಂದೇ

ತುದಿಗಳೆಲ್ಡು ಕೊನೆಗೆ ಇದ್ರು | ಕೋಲು ಮಾತ್ರ ಒಂದೇ
ದಂಡೆ ಎಳ್ಡು ಬ್ಯಾರಿರಭೌದು | ಮಧ್ಯದ ಹೊಳೇ ಒಂದೇ

ನನ್ನ ನೀನು ನಿನ್ನ ನಾನು | ನೋಡಿ ಅಳೆಯುವಂತೆ
ಇನ್ನೂ ಯಾರು ಮಾಡಲಾರ್ರು| ಕೂಡಿ ಬಾಳುವಂತೆ

ನಿಂದು ನಂಗೆ ನಂದು ನಿಂಗೆ | ಬಿಂಬಾ ಪ್ರತಿ ಬಿಂಬಾ
ಇದರಾಬದರಾ ಇರೋದ್ರಿಂದ | ತೋರ್ಕೆ ಭೇದ ತುಂಬಾ

ಅಲ್ಲಿಂದಿಲ್ಲೀ ಇಲ್ಲಿಂದಲ್ಲೀ | ಹಾರ್ತೀ ಬಿಟ್ಟೀ ಹಂಗೆ
ಇದ್ದಲ್ಲೇ ಇದ್ದು ತೋರ್ತೀನ್ನಾನು | ಬೆಟ್ಟದ್ಹಂಗೆ

ಎಲ್ಲಾ ಕಡೆಗೆ ಮ್ಯಾಲೆ ಮ್ಯಾಲೆ | ಥಳಕು ಬಳಕು ಮಾಡ್ತಿ
ಒಳಗೇನಿಲ್ಲ ಎನ್ನುವಂಥ | ಸಂಶೇದಾಗೆ ದೂಡ್ತಿ

ಸುತ್ತೂ ಬಳ್ಸೂ ಯಾಕೆ ಕೇಳು | ನನ್ನ ಮನದುದ್ದೇಶ
ನಂದೂ ಒಳಗೇ ನಿಂದೂ ಹೊರಗೆ | ಹರೀತಾವೆ ಪಾಶ

ಅತಿಯಾಗ್ಬಾರ್ದು ಯಾವ್ದೇ ಆದ್ರು | ಹೌದೋ ಅಲ್ಲೋ ಹೇಳು
ಎರಡೂ ಕೂಡಿ ಸಾಗಿದ್ರೇನೆ | ಬಂಗಾರಾಗ್ತಾದ ಬಾಳು

ಭಾಳ ಓಡ್ತಿ ನಿಲ್ಲು ಸ್ವಲ್ಪ | ಕುಂತು ನಿಂತು ಹೋಗು
ಭಾಳಾ ಆಡ್ತಿ ಪುರಸತ್ತಿಲ್ದೆ | ದಮ್ಮು ಎಳಕೊಂಡ್ ಸಾಗು

ಉದ್ದಾ ಅಗಲ ಓಡಾಡಬ್ಯಾಡ | ಆಳಕ್ ಸ್ವಲ್ಪ ಇಳೀ
ಅತ್ತಾ ಇತ್ತಾ ಹರದಾಡಬ್ಯಾಡ | ಕದಡು ನೀರ ತಿಳೀ

ಮ್ಯಾಲೆಮಾಲೆ ಕೈಯಾಡ್ಸಿದ್ರೆ | ನೊರೆ ಬುರುಗು ಅಂದ
ಒಳಾಗಿಳ್ದು ಜಾಲಾಡಿದ್ರೆ | ಮುತ್ತು ರತ್ನ ಚೆಂದ
***

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...