Home / ಕವನ / ಕವಿತೆ / ನಾನತ್ತ ನೀನಿತ್ತ

ನಾನತ್ತ ನೀನಿತ್ತ

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ ||
ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ
ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ

ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ
ಆದ್ರು ಕೂಡ ನಾನು ನೀನು | ಬೇರೆ ಬೇರೆ ಅಲ್ಲ ಕೊನೆಗೆ

ದಿಕ್ಕೂ ಬ್ಯಾರೆ ಬ್ಯಾರೆ ಆದ್ರು| ಆಕಾಶೆಲ್ಲಾ ಒಂದೇ
ಧ್ರುವಗಳೆಳ್ಡು ಬ್ಯಾರೆ ಆದ್ರು| ಭೂಮಿ ಮಾತ್ರ ಒಂದೇ

ತುದಿಗಳೆಲ್ಡು ಕೊನೆಗೆ ಇದ್ರು | ಕೋಲು ಮಾತ್ರ ಒಂದೇ
ದಂಡೆ ಎಳ್ಡು ಬ್ಯಾರಿರಭೌದು | ಮಧ್ಯದ ಹೊಳೇ ಒಂದೇ

ನನ್ನ ನೀನು ನಿನ್ನ ನಾನು | ನೋಡಿ ಅಳೆಯುವಂತೆ
ಇನ್ನೂ ಯಾರು ಮಾಡಲಾರ್ರು| ಕೂಡಿ ಬಾಳುವಂತೆ

ನಿಂದು ನಂಗೆ ನಂದು ನಿಂಗೆ | ಬಿಂಬಾ ಪ್ರತಿ ಬಿಂಬಾ
ಇದರಾಬದರಾ ಇರೋದ್ರಿಂದ | ತೋರ್ಕೆ ಭೇದ ತುಂಬಾ

ಅಲ್ಲಿಂದಿಲ್ಲೀ ಇಲ್ಲಿಂದಲ್ಲೀ | ಹಾರ್ತೀ ಬಿಟ್ಟೀ ಹಂಗೆ
ಇದ್ದಲ್ಲೇ ಇದ್ದು ತೋರ್ತೀನ್ನಾನು | ಬೆಟ್ಟದ್ಹಂಗೆ

ಎಲ್ಲಾ ಕಡೆಗೆ ಮ್ಯಾಲೆ ಮ್ಯಾಲೆ | ಥಳಕು ಬಳಕು ಮಾಡ್ತಿ
ಒಳಗೇನಿಲ್ಲ ಎನ್ನುವಂಥ | ಸಂಶೇದಾಗೆ ದೂಡ್ತಿ

ಸುತ್ತೂ ಬಳ್ಸೂ ಯಾಕೆ ಕೇಳು | ನನ್ನ ಮನದುದ್ದೇಶ
ನಂದೂ ಒಳಗೇ ನಿಂದೂ ಹೊರಗೆ | ಹರೀತಾವೆ ಪಾಶ

ಅತಿಯಾಗ್ಬಾರ್ದು ಯಾವ್ದೇ ಆದ್ರು | ಹೌದೋ ಅಲ್ಲೋ ಹೇಳು
ಎರಡೂ ಕೂಡಿ ಸಾಗಿದ್ರೇನೆ | ಬಂಗಾರಾಗ್ತಾದ ಬಾಳು

ಭಾಳ ಓಡ್ತಿ ನಿಲ್ಲು ಸ್ವಲ್ಪ | ಕುಂತು ನಿಂತು ಹೋಗು
ಭಾಳಾ ಆಡ್ತಿ ಪುರಸತ್ತಿಲ್ದೆ | ದಮ್ಮು ಎಳಕೊಂಡ್ ಸಾಗು

ಉದ್ದಾ ಅಗಲ ಓಡಾಡಬ್ಯಾಡ | ಆಳಕ್ ಸ್ವಲ್ಪ ಇಳೀ
ಅತ್ತಾ ಇತ್ತಾ ಹರದಾಡಬ್ಯಾಡ | ಕದಡು ನೀರ ತಿಳೀ

ಮ್ಯಾಲೆಮಾಲೆ ಕೈಯಾಡ್ಸಿದ್ರೆ | ನೊರೆ ಬುರುಗು ಅಂದ
ಒಳಾಗಿಳ್ದು ಜಾಲಾಡಿದ್ರೆ | ಮುತ್ತು ರತ್ನ ಚೆಂದ
***

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...