ಎಲೆ ಮಾನವಾ

ಎಲೆ ಮಾನವ ನವಮಾನವ ಆಥುನಿಕತೆ ದಾನವಾ
ಎತ್ತ ನಿನ್ನ ಪಯಣ ಮತಿಯ ಮನವ ಮರೆತ ಮಾನವಾ ||೧||

ದೇವನೊಂದು ಸೃಷ್ಟಿಸಿರಲು ನೀನೆ ಬೇರೆ ಗೈಯುವೇ
ನಿನ್ನ ನೀನು ಕಾಯ್ದುಕೊಳಲು ನಿನಗೆ ನೀನೆ ಸಾಯುವೇ ||೨||

ನಡೆದು ದುಡಿದು ತಿನ್ನು ಬಾಳೊ ಕೈಕಾಲ್ಗಳ ಬಳಸುತ
ಎಂದು ದೇವ ಸೃಷ್ಟಿಸಿರಲು ಸುಖಕೆ ನೀನು ಎಳಸುತ ||೩||

ಮೈಗಳ್ಳನೆ ದುಡಿಮೆ ಉಳಿಸಿ ದೈವದ್ರೋಹ ಗೈಯುವೆ
ಯಂತ್ರಗಳಲಿ ಸುಲಭತೆಯಲಿ ಸಂತಸವನು ಅರಸುವೆ ||೪||

ಪ್ರಕೃತಿ ಮಾತೆ ಇರುವ ರೀತಿಯಲ್ಲಿ ನೀನು ಬಿಡದಿಹೆ
ವಿಕೃತಿ ಮಾಡಿ ಶೋಧಗೈವ ಸೋಗಿನಲ್ಲಿ ಕೆಡುತಿಹೆ ||೫||

ಅಡವಿ ಬಿಟ್ಟು ಗವಿಯ ಬಿಟ್ಟು ಪ್ರಕೃತಿಯಿಂದ ದೂರ ಬಂದೆ
ನಗರಗಳಲಿ ಹೊಸತು ಕಂಡು ಪ್ರಕೃತಿಯನ್ನೆ ದೂರಿ ನಿಂದೆ ||೬||

ಸಾಯಲಂಜಿ ಮೃತ್ಯುವನ್ನು ಗೆಲ್ಲಲೆಂದು ಯತ್ನಿಸಿರುವೆ
ಸಾವಕಾಶವಾಗಿ ನಿನ್ನ ಗೋರಿ ನೀನೆ ಕಟ್ಟುತಿರುವೆ ||೭||

ವಿಜ್ಞಾನದ ಕತ್ತಿಯನ್ನು ಹಿಡಿದು ಬಾಳ ಕೆತ್ತುತಿರುವೆ
ಒಳ ಸತ್ಯವ ಕಾಣಲೆಂದು ಸೀರೆಯನ್ನೆ ಕಿತ್ತುತಿರುವೆ ||೮||

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪೈಗಂಬರರ ಮಾನವೀಯ ಅಂತಃಕರಣ
Next post ಮಾತಿನ ಮಲ್ಲಣಿ

ಸಣ್ಣ ಕತೆ

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

cheap jordans|wholesale air max|wholesale jordans|wholesale jewelry|wholesale jerseys