ಮುಗಿಲ ಜೇನು

ಮರದ ಕೊಂಬೆಗೆ ಒಂದು
ತೊಟ್ಟಿಲವ ಕಟ್ಟಿಹುದು
ತೊಟ್ಟಿಲಲಿ ಆಡುತಿದೆ
ಕೈಕಾಲುಗಳ ಬಿಚ್ಚಿ
ಈಗ ಕಣ್ದೆರೆದಿರುವ
ಹೊಚ್ಚ ಹೊಸ ಎಳೆಯ ಕೂಸು ||

ಮರದ ಮೇಲ್ಬದಿಯಲ್ಲಿ
ಮರಜೇನು ಹುಟ್ಟಿಹುದು
ದೇವರಾಯನ ಕರುಣೆ
ಯಿಂದ ಹುಟ್ಟಿಗೆ ಸಣ್ಣ
ಹುಗಿಲು ಕೊರೆದಿಹುದಲ್ಲಿ
ಹನಿಯುತಿದೆ ಸವಿಜೇನು
ಒಂದೊಂದು ಹನಿಯಾಗಿ
ಧಾರೆಯಾಗಿಳಿಯುತಿದೆ
ಹನಿಗಡಿದು ಆ ಧಾರೆ
ಮತ್ತೆ ಮೇಲಕೆ ಏರಿ
ಹನಿಗೊಂಡು ಇಳಿಯುತಿಹುದು||

ತೂಗುತಿದೆ ತೊಟ್ಟಿಲವು
ಬಿಡದೆ ತೂಗಲು ಬೇಕು
ತೂಗು ನಿಂತರೆ ಹಸುಳೆ
ಕಿರಚಿ ಕೂಗುವದೆನಿತೊ.
ಹುಟ್ಟಿರುವ ರೆಂಬೆಯದು
ಅಂತರದಿ ತೇಲುತಿದೆ
ರೆಂಬೆಯಲಿ ಹುಟ್ಟಿಹುದು

ಹುಟ್ಟಿನಲಿ ಜೇನಿಹುದು
ಜೇನಿನಲಿ ಸವಿಯಿಹುದು
ಸವಿಯಲ್ಲಿ ಸುಧೆಯಿಹುದು
ಅದು ಒಸರಿ ಇಳಿವಂತೆ
ದೇವರಾಯನ ಕರುಣೆ
ಹುಗಿಲು ಕೊರೆದಿಹುದಲ್ಲಿ
ಹನಿಹನಿದು ಹನಿಯುತಿದೆ
ಇತ್ತ ಈ ತೊಟ್ಟಿಲಲಿ
ಅಮರಶಿಶು ಅಳುತಲಿದೆ
ತಿನ್ನಲಿಕೆ ಬಾಯಿಹುದು
ಸಹಿಸಲಾಗದೆ ಅಳುತ
ತೊಟ್ಟಿಲಲಿ ತೂಗುತಿದೆ
ಇಂತಿರಲು ಆ ಅಮೃತ
ತನ್ನ ಬಾಯಿಗೆ ಎಂದು
ಎಂತು ಬೀಳುವುದದನು
ತಿಳಿಯುವುದೆ ಆ ಕೂಸು?
ಜೀಕು ನಿಂತಿರಲಾಗ ಲೇಸು! ಲೇಸು !!
*****

ಪುಸ್ತಕ: ಸಾಗರ ಸಿಂಪಿ

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋಲ್ತೆ ಅಲಾವಾ ಖೇಲೈ ಚಲೋ ಜಾ
Next post ಹನಮಂತ ಹಾರಿದಾ ಲಂಕಾ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…