ಮುಗಿಲ ಜೇನು

ಮರದ ಕೊಂಬೆಗೆ ಒಂದು
ತೊಟ್ಟಿಲವ ಕಟ್ಟಿಹುದು
ತೊಟ್ಟಿಲಲಿ ಆಡುತಿದೆ
ಕೈಕಾಲುಗಳ ಬಿಚ್ಚಿ
ಈಗ ಕಣ್ದೆರೆದಿರುವ
ಹೊಚ್ಚ ಹೊಸ ಎಳೆಯ ಕೂಸು ||

ಮರದ ಮೇಲ್ಬದಿಯಲ್ಲಿ
ಮರಜೇನು ಹುಟ್ಟಿಹುದು
ದೇವರಾಯನ ಕರುಣೆ
ಯಿಂದ ಹುಟ್ಟಿಗೆ ಸಣ್ಣ
ಹುಗಿಲು ಕೊರೆದಿಹುದಲ್ಲಿ
ಹನಿಯುತಿದೆ ಸವಿಜೇನು
ಒಂದೊಂದು ಹನಿಯಾಗಿ
ಧಾರೆಯಾಗಿಳಿಯುತಿದೆ
ಹನಿಗಡಿದು ಆ ಧಾರೆ
ಮತ್ತೆ ಮೇಲಕೆ ಏರಿ
ಹನಿಗೊಂಡು ಇಳಿಯುತಿಹುದು||

ತೂಗುತಿದೆ ತೊಟ್ಟಿಲವು
ಬಿಡದೆ ತೂಗಲು ಬೇಕು
ತೂಗು ನಿಂತರೆ ಹಸುಳೆ
ಕಿರಚಿ ಕೂಗುವದೆನಿತೊ.
ಹುಟ್ಟಿರುವ ರೆಂಬೆಯದು
ಅಂತರದಿ ತೇಲುತಿದೆ
ರೆಂಬೆಯಲಿ ಹುಟ್ಟಿಹುದು

ಹುಟ್ಟಿನಲಿ ಜೇನಿಹುದು
ಜೇನಿನಲಿ ಸವಿಯಿಹುದು
ಸವಿಯಲ್ಲಿ ಸುಧೆಯಿಹುದು
ಅದು ಒಸರಿ ಇಳಿವಂತೆ
ದೇವರಾಯನ ಕರುಣೆ
ಹುಗಿಲು ಕೊರೆದಿಹುದಲ್ಲಿ
ಹನಿಹನಿದು ಹನಿಯುತಿದೆ
ಇತ್ತ ಈ ತೊಟ್ಟಿಲಲಿ
ಅಮರಶಿಶು ಅಳುತಲಿದೆ
ತಿನ್ನಲಿಕೆ ಬಾಯಿಹುದು
ಸಹಿಸಲಾಗದೆ ಅಳುತ
ತೊಟ್ಟಿಲಲಿ ತೂಗುತಿದೆ
ಇಂತಿರಲು ಆ ಅಮೃತ
ತನ್ನ ಬಾಯಿಗೆ ಎಂದು
ಎಂತು ಬೀಳುವುದದನು
ತಿಳಿಯುವುದೆ ಆ ಕೂಸು?
ಜೀಕು ನಿಂತಿರಲಾಗ ಲೇಸು! ಲೇಸು !!
*****

ಪುಸ್ತಕ: ಸಾಗರ ಸಿಂಪಿ

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೋಲ್ತೆ ಅಲಾವಾ ಖೇಲೈ ಚಲೋ ಜಾ
Next post ಹನಮಂತ ಹಾರಿದಾ ಲಂಕಾ

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…