Home / ಲೇಖನ / ವಿಜ್ಞಾನ / ಸಾಗರಗಳು ಮತ್ತು ಅವುಗಳ ತಳ

ಸಾಗರಗಳು ಮತ್ತು ಅವುಗಳ ತಳ

ಭೂಮಿಯ ಶೇ. ೭೧ ಭಾಗವು ನೀರಿನಿಂದ ಆವರಿಸ್ಪಟ್ಟಿರುವುದರಿಂದ ಈ ನೀರಿನ ಸಂಚಯಗಳೇ ಸಾಗರಗಳಾದವು. ಮಾರುತಗಳು ನೀರಿನಲ್ಲಿ ಅಲೆಗಳನ್ನು ಉಂಟು
ಮಾಡುವುದರಿಂದಲೂ ಮತ್ತು ಚಂದ್ರನ ಗುರುತ್ವಾಕರ್ಷಣೆ ಶಕ್ತಿಯಿಂದಲೂ ‘ಉಕ್ಕು’ ಮತ್ತು ‘ಕೆಳಭರತ’ಗಳು ಉಂಟಾಗುವುದರಿಂದ ಸಾಗರ ಮತ್ತು ಸಮುದ್ರಗಳ ಮೇಲ್ಮೈಯು ನಿರಂತರವಾಗಿ ಅವಿಶ್ರಾಂತ ಸ್ಥಿತಿಯಲ್ಲಿದೆ. ಸಾಗರತಜ್ಞರು ಅಂತರ್ಜಲ ಕ್ಯಾಮರಗಳು, ಪ್ರತಿಧ್ವನಿ ಶಬ್ದಯಂತ್ರಗಳು, ಸೋನಾರ್‌ಗಳು ಮತ್ತು ಜಲಂತರ್ಗಾಮಿ ನೌಕೆಗಳನ್ನು ಉಪಯೋಗಿಸಿ ನಿರಂತರ ಸಾಗರಗಳ ಅಧ್ಯಯನ ಮಾಡಿ ಸಾಗರದ ತಳವು ನಮ್ಮ ಭೂಪ್ರದೇಶದಂತೆಯೇ ಇದೆ, ಎಂಬುದನ್ನು ಕಂಡುಹಿಡಿದರು. ಇಲ್ಲಿಯೂ ಸಹ ಪ್ರಸ್ಥಭೂಮಿ, ಕಂದಕಗಳು, ಕಡಿದಾದ ಬಿರುಕುಗಳು, ಪರ್ವತ ಶ್ರೇಣಿಗಳು ಮತ್ತು ಅಗ್ನಿಪವರ್ತಗಳೂ ಇವೆ ಎಂದರೆ ಆಶ್ಚರ್ಯವಲ್ಲವೆ? ಸಮುದ್ರದ ತಳದಿಂದ ಉದ್ಭವಿಸಿದ ಶಿಖರಗಳು ನೀರಿನ ಮೇಲೆದ್ದು ದ್ವೀಪಗಳಾಗಿ ಪರಿವರ್ತನೆ ಗೊಂಡಿವೆ. ೬ ಕಿ.ಮೀ. ಗಳಿಂದ ಫೆಸಿಫಿಕ್ ಸಾಗರದಲ್ಲಿ ಇದರ ಆಳವು ಸಮುದ್ರದ ಮೇಲ್ಮೆಯಿಂದ ೧೧ ಕಿ.ಮೀ. ನಷ್ಟು ಆಳವಾಗಿದೆ. ಇದನ್ನು ‘ಸಾಹಸಿಗರ ಆಳ’ವೆಂದು ಕರೆಯಲಾಗುತ್ತದೆ.
*****

ಪುಸ್ತಕ: ವಿಜ್ಞಾನದ ವಿಸ್ಮಯ ಶೋಧಗಳು

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...