ನನ್ನ ಮನವ ಕದ್ದವನೇ ಬಾ

ನನ್ನ ಮನವ ಕದ್ದವನೇ ಬಾ
ನನ್ನ ಹರಣ ಗೆದ್ದವನೇ ಬಾ
ನನ್ನ ಕೂಡಿ ಕಳೆವ ಗಳಿಗೆಗೆ
ಏನೆಲ್ಲವನೂ ಒದ್ದವನೇ ಬಾ

ನಿನ್ನ ಎದುರು ಬಿಂಕ ಏನಿದೆ
ದೇವರೆದುರು ಶಂಕೆ ಏನಿದೆ?
ನಿನ್ನ ಸೇರಿ ಉರಿದು ಹೋಗುವಾ
ಬೆಂಕಿ ಬಯಕೆ ಮೈಯೊಳೆದ್ದಿದೆ

ನನ್ನೆದೆಯಾ ಚಿನ್ನ ಹಾರವೇ
ಕನ್ನ ಕೊರೆದು ಸುಲಿವ ಭಾರವೇ
ನಿಮಿಷಕ್ಕೊಮ್ಮೆ ರೋಮಾಂಚನಕೆ
ಸಲಿಸುವಂಥ ಪ್ರೇಮಸಾರವೇ

ಬಾರೋ ಬಾ, ನಿನ್ನ ಸೇರುವೆ
ಗಾಳಿ ಬೆರೆತ ಗಂಧವಾಗುವ
ಕನಸು ಜಗ್ಗಿ ತೂಗುತಿರುವೆನೋ
ಲಜ್ಜೆ ಕಳೆದು ಕಾಯೊ ನನ್ನನು!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಜಿಪ್ತಿನೆದೆಯಾಳ
Next post ಬದುಕು ಹೀಗೇಕೆ !

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…