Home / ಕವನ / ಕವಿತೆ / ಯಾರಿವಳೀ ದೀಪಿಕಾ?

ಯಾರಿವಳೀ ದೀಪಿಕಾ?

ಯಾರಿವಳೀ ದೀಪಿಕಾ?
ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ!
ಬಿಸಿಯೂಡಿಸಿ ಹಸಿರಾಡಿಸಿ
ಕನವರಿಕೆಯ ನಾಡಿಗೆ
ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ

ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ
ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ
ಚಿತ್ರವಾಗಿ ಅರಳಿ
ವಿಚಿತ್ರವಾಗಿ ಹೊರಳಿ
ಬರೆದು ಅಳಿಸಿ ಬರೆದು ಸರಿವ ಬೆಳ್ಳಕ್ಕಿಯ ಗೆರೆಯೆ,
ಸಿಕ್ಕಿದ೦ತೆ ಸಿಕ್ಕದಂತೆ
ಹರಿವ ಜಿ೦ಕೆಮರಿಯೆ,
ಯಾರೇ ನೀ ದೀಪಿಕಾ?
ಒಳಗೆ ಬರುವೆ ತೆಗೆಯೇ ನಿನ್ನೆದೆ ಬಾಗಿಲ ಚಿಲಕ

ಕಣ್ಣಪಟ್ಟಿ ಕಟ್ಟಿ ನಡೆದ ಬಿನ್ನಾಣದ ಚೆಲುವೆ
ಬೇರೇನೂ ಕಾಣದೀಗ ಬರಿಯ ನಿನ್ನ ನಿಲುವೆ!
ನೋಟಕಷ್ಟೆ ಸಿಕ್ಕು
ಉಳಿದುದಕ್ಕೆ ಮಿಕ್ಕು
ಕೆರೆಯ ನಡುವೆ ನಿಂತು ಅರಳಿ ನಗುವ ಕೆಂಪು ಕಮಲೇ
ಉರಿಯ ನೂರು ಬುಗ್ಗೆ ಹಿರಿಯುತಿರುವ ಚಿಗುರು ಹಿಗ್ಗೇ
ಧಗೆಯೆ ನಗುವ ದೀಪಿಕಾ
ಬಗೆವೆ ಕಣೇ ನವನಿಧಿಗಳ ಚೆಲುವೆ ನಿನ್ನ ಮೂಲಕ!

ನೀ ಹಚ್ಚಿದ ಪಂಚಾಗ್ನಿಯ ವೃತ್ತದಲ್ಲಿ ಉರಿದೆ
ಕಬ್ಬಿನಾಲೆಯಲ್ಲಿ ಸಿಕ್ಕ ಜಲ್ಲೆಯಂತೆ ನುರಿದೆ.
ದಳ ದಳ ದಳ ತೆರೆದು ನೀನು ಪರಿಮಳಗಳ ಸುರಿಯೆ
ಸೊಕ್ಕಿನ ಗಡಿಯೊಡೆದು ಒಳಗೆ ಮೆತ್ತಗಾಗಿ ಬಿರಿದೆ
ನೋವೇ ಹೂವಾಗಿದೆ ಇದೊ ಒಪ್ಪಿಕೊಳ್ಳೆ ದೀಪಿಕಾ
ಕೆಂಡಸಂಪಿಗೆಯನೆ ಕಟ್ಟಿತಂದ ಭಾವಮಾಲಿಕಾ!
ದೀಪಿಕಾ ದೀಪಿಕಾ
ಕವಿಕನಸಿಗೆ ಕಣ್ಣು ಬ೦ದು ಉಸಿರಾಡುವ ರೂಪಕ!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Tagged:

Leave a Reply

Your email address will not be published. Required fields are marked *

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...