Home / ಕವನ / ಕವಿತೆ / ಯಾರಿವಳೀ ದೀಪಿಕಾ?

ಯಾರಿವಳೀ ದೀಪಿಕಾ?

ಯಾರಿವಳೀ ದೀಪಿಕಾ?
ಕವಿಕನಸಿಗೆ ಕಣ್ಣು ಬಂತೊ ಉಸಿರಾಡಿತೊ ರೂಪಕ!
ಬಿಸಿಯೂಡಿಸಿ ಹಸಿರಾಡಿಸಿ
ಕನವರಿಕೆಯ ನಾಡಿಗೆ
ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ

ಕನಕಾಂಬರ ಬೆಳಕ ಹೊದ್ದ ಮುಗಿವ ಹಗಲ ತುದಿಗೆ
ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡಗೆ
ಚಿತ್ರವಾಗಿ ಅರಳಿ
ವಿಚಿತ್ರವಾಗಿ ಹೊರಳಿ
ಬರೆದು ಅಳಿಸಿ ಬರೆದು ಸರಿವ ಬೆಳ್ಳಕ್ಕಿಯ ಗೆರೆಯೆ,
ಸಿಕ್ಕಿದ೦ತೆ ಸಿಕ್ಕದಂತೆ
ಹರಿವ ಜಿ೦ಕೆಮರಿಯೆ,
ಯಾರೇ ನೀ ದೀಪಿಕಾ?
ಒಳಗೆ ಬರುವೆ ತೆಗೆಯೇ ನಿನ್ನೆದೆ ಬಾಗಿಲ ಚಿಲಕ

ಕಣ್ಣಪಟ್ಟಿ ಕಟ್ಟಿ ನಡೆದ ಬಿನ್ನಾಣದ ಚೆಲುವೆ
ಬೇರೇನೂ ಕಾಣದೀಗ ಬರಿಯ ನಿನ್ನ ನಿಲುವೆ!
ನೋಟಕಷ್ಟೆ ಸಿಕ್ಕು
ಉಳಿದುದಕ್ಕೆ ಮಿಕ್ಕು
ಕೆರೆಯ ನಡುವೆ ನಿಂತು ಅರಳಿ ನಗುವ ಕೆಂಪು ಕಮಲೇ
ಉರಿಯ ನೂರು ಬುಗ್ಗೆ ಹಿರಿಯುತಿರುವ ಚಿಗುರು ಹಿಗ್ಗೇ
ಧಗೆಯೆ ನಗುವ ದೀಪಿಕಾ
ಬಗೆವೆ ಕಣೇ ನವನಿಧಿಗಳ ಚೆಲುವೆ ನಿನ್ನ ಮೂಲಕ!

ನೀ ಹಚ್ಚಿದ ಪಂಚಾಗ್ನಿಯ ವೃತ್ತದಲ್ಲಿ ಉರಿದೆ
ಕಬ್ಬಿನಾಲೆಯಲ್ಲಿ ಸಿಕ್ಕ ಜಲ್ಲೆಯಂತೆ ನುರಿದೆ.
ದಳ ದಳ ದಳ ತೆರೆದು ನೀನು ಪರಿಮಳಗಳ ಸುರಿಯೆ
ಸೊಕ್ಕಿನ ಗಡಿಯೊಡೆದು ಒಳಗೆ ಮೆತ್ತಗಾಗಿ ಬಿರಿದೆ
ನೋವೇ ಹೂವಾಗಿದೆ ಇದೊ ಒಪ್ಪಿಕೊಳ್ಳೆ ದೀಪಿಕಾ
ಕೆಂಡಸಂಪಿಗೆಯನೆ ಕಟ್ಟಿತಂದ ಭಾವಮಾಲಿಕಾ!
ದೀಪಿಕಾ ದೀಪಿಕಾ
ಕವಿಕನಸಿಗೆ ಕಣ್ಣು ಬ೦ದು ಉಸಿರಾಡುವ ರೂಪಕ!
*****

ಪುಸ್ತಕ: ನಿನಗಾಗೇ ಈ ಹಾಡುಗಳು

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...