Home / ಕವನ / ಕವಿತೆ / ಸ್ಪರ್ಶ

ಸ್ಪರ್ಶ

ಎಂದೋ ಬಿದ್ದ ಕಾಳೊಂದು
ಇತ್ತೀಚಿನ ಮಳೆಗೆ ಮೊಳಕೆಯೊಡೆದು
ಎರಡೆಲೆ ಚಿಗುರಿಸಿ ನಗುತಿದೆ

ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ
ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ-
ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ
ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,
ನಕ್ಷತ್ರಕರೂ ಮಾತನಾಡಲು
ಅಲ್ಲಿಯೇ ಹೋಗುವುದಿದೆಯಲ್ಲ!
ಎರಡು ನಾಲ್ಕು ಆರೆಂಟು ಹತ್ತಿಪ್ಪತ್ತು
ಚಿಗುರೆಲೆಗಳ ಗುಂಪು ಕಂಪೌಂಡು ಮುದ್ದಿಸುತ್ತಲೇ
ಮೆಲ್ಲನೆ ಮೇಲೇರಿ ಬಳಕಾಡುವುದು
ತೊನೆದಾಡುವುದೇನು ಆಹಾ!
ನೆಲದಾಳಕ್ಕಿಳಿದು ಹೆಕ್ಕಿ ಹೆಕ್ಕಿ ನೀರು ಹೀರಿ
ಪಸರಿಸಿದ ಬೇರಿನ ಸಂಭ್ರಮ.

ಉರುಳಾಡಿದವು ನಕ್ಷತ್ರಗಳು
ಬೆಳದಿಂಗಳ ಹಾಸಿಗೆಯನೇರಿ
ಚುಮು ಚುಮು ಉಷೆ
ಜಮುರು ಮಳೆ
ಮೊನ್ನೆ ಮೊನ್ನೆಯೇ ಕಣ್ಣುಬಿಟ್ಟ
ಎಲೆಗಳ ನಡುವೆ ಮುಗುಳು
ಮೊಗ್ಗು ಹೂವುಗಳ ನಗು
ಈಗಷ್ಟೇ ತುಂಬಿಕೊಳ್ಳುತ್ತಿವೆ ಹಾಲುಗಾಳು

ಗೋಡೆಯಾಚೆ ಕಳೆಗುಂದಿ ಕೊರಳು ತುಂಬಿ
ಉಕ್ಕೇರುವ ನದಿಯೋ ನದಿ ಆಕೆ
ಒಂದಿರುಳು ಏರುಬ್ಬರ ಇಳಿದು
ಭೂಮಿ ಎಲ್ಲವೂ ಶಾಂತ

ಅನಾಥಕಂದ ಉಡಿತುಂಬಿ ಕಲಕಲಿಸಿದ್ದು
ಲಾಲಿ ಹಾಡು ಇಂಪಾಗಿ ಎಲ್ಲರೆದೆ ತಟ್ಟಿದ್ದು
ಅದು ನಕ್ಕರೆತಾನು ನಕ್ಕು
ಕಣ್ಣುರೆಪ್ಪೆಯೊಳಗಿಟ್ಟು ಕಾಯುವ ಸಂತೋಷಿ
ದಿನ ದಿನಕೂ ಚಿಗುರಿ
ಜಗದೆತ್ತರ ಬೆಳೆಯುವ ಕನಸು
ಕೊಡುತಿದೆ ಮಲ್ಲಿಗೆ ನಗುವಿನ
ಹಾಲುಗಲ್ಲಿನ ಕಂದ
ಮಳೆ-ನದಿ ಆಹಾ ಅದೇನು ಸ್ಪರ್ಷ.
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...