ಸ್ಪರ್ಶ

ಎಂದೋ ಬಿದ್ದ ಕಾಳೊಂದು
ಇತ್ತೀಚಿನ ಮಳೆಗೆ ಮೊಳಕೆಯೊಡೆದು
ಎರಡೆಲೆ ಚಿಗುರಿಸಿ ನಗುತಿದೆ

ಕಾಪೌಂಡಿನಾಚೆ ಮೋಡವೇ ಹೆಪ್ಪುಗಟ್ಟಿ
ಗವ್ವೆನ್ನುವ ವಾತಾವರಣ ಮನೆಯೊಳಹೊರಗೆಲ್ಲ-
ಕುಡಿ ಮೂಡುವ ಸಂಭ್ರಮಕೆ ಕಾದೂ ಕಾದೂ
ಕೊನೆಗೆ ಸ್ನಾನ ಕಣ್ಣೀರೂ ಬಚ್ಚಲು ಮೋರಿಗೆ,
ನಕ್ಷತ್ರಕರೂ ಮಾತನಾಡಲು
ಅಲ್ಲಿಯೇ ಹೋಗುವುದಿದೆಯಲ್ಲ!
ಎರಡು ನಾಲ್ಕು ಆರೆಂಟು ಹತ್ತಿಪ್ಪತ್ತು
ಚಿಗುರೆಲೆಗಳ ಗುಂಪು ಕಂಪೌಂಡು ಮುದ್ದಿಸುತ್ತಲೇ
ಮೆಲ್ಲನೆ ಮೇಲೇರಿ ಬಳಕಾಡುವುದು
ತೊನೆದಾಡುವುದೇನು ಆಹಾ!
ನೆಲದಾಳಕ್ಕಿಳಿದು ಹೆಕ್ಕಿ ಹೆಕ್ಕಿ ನೀರು ಹೀರಿ
ಪಸರಿಸಿದ ಬೇರಿನ ಸಂಭ್ರಮ.

ಉರುಳಾಡಿದವು ನಕ್ಷತ್ರಗಳು
ಬೆಳದಿಂಗಳ ಹಾಸಿಗೆಯನೇರಿ
ಚುಮು ಚುಮು ಉಷೆ
ಜಮುರು ಮಳೆ
ಮೊನ್ನೆ ಮೊನ್ನೆಯೇ ಕಣ್ಣುಬಿಟ್ಟ
ಎಲೆಗಳ ನಡುವೆ ಮುಗುಳು
ಮೊಗ್ಗು ಹೂವುಗಳ ನಗು
ಈಗಷ್ಟೇ ತುಂಬಿಕೊಳ್ಳುತ್ತಿವೆ ಹಾಲುಗಾಳು

ಗೋಡೆಯಾಚೆ ಕಳೆಗುಂದಿ ಕೊರಳು ತುಂಬಿ
ಉಕ್ಕೇರುವ ನದಿಯೋ ನದಿ ಆಕೆ
ಒಂದಿರುಳು ಏರುಬ್ಬರ ಇಳಿದು
ಭೂಮಿ ಎಲ್ಲವೂ ಶಾಂತ

ಅನಾಥಕಂದ ಉಡಿತುಂಬಿ ಕಲಕಲಿಸಿದ್ದು
ಲಾಲಿ ಹಾಡು ಇಂಪಾಗಿ ಎಲ್ಲರೆದೆ ತಟ್ಟಿದ್ದು
ಅದು ನಕ್ಕರೆತಾನು ನಕ್ಕು
ಕಣ್ಣುರೆಪ್ಪೆಯೊಳಗಿಟ್ಟು ಕಾಯುವ ಸಂತೋಷಿ
ದಿನ ದಿನಕೂ ಚಿಗುರಿ
ಜಗದೆತ್ತರ ಬೆಳೆಯುವ ಕನಸು
ಕೊಡುತಿದೆ ಮಲ್ಲಿಗೆ ನಗುವಿನ
ಹಾಲುಗಲ್ಲಿನ ಕಂದ
ಮಳೆ-ನದಿ ಆಹಾ ಅದೇನು ಸ್ಪರ್ಷ.
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಗವೇಸ್ವರನೆಂಬೋ ಹವ್ಯಕ ಸ್ವಾಮಿ ಹೈಲಾಟ!
Next post ಯಾರಿವಳೀ ದೀಪಿಕಾ?

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…