Home / ಕಥೆ / ಕಿರು ಕಥೆ / ಖಾಲಿ ಮಾಡು

ಖಾಲಿ ಮಾಡು

ಒಂದು ಪಟ್ಟಣದಲ್ಲಿ ಒಬ್ಬ ಅತ್ಯಂತ ಧನಿಕನಿದ್ದ. ಅವನಲ್ಲಿ ಇರದ ವಸ್ತುಗಳಿರಲಿಲ್ಲ. ಜಗತ್ತಿನ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿದ್ದ. ಆದರೂ ಅವನಿಗೆ ತೃಪ್ತಿ, ಸಂತಸವಿರಲಿಲ್ಲ. ನೆಮ್ಮದಿ ಶಾಂತಿ ದೊರೆತಿರಲಿಲ್ಲ. ಅವನ ಬಾಳನ್ನು ವ್ಯಾಪಾರಿ ಮನೋಭಾವ ತುಂಬಿತ್ತು. ಧನ, ಕನಕ, ವಸ್ತು, ವೈವಿಧ್ಯವಿರುವ ತನ್ನದು ತುಂಬು ಜೀವನವೆಂದು ಹೆಮ್ಮೆಪಡುತ್ತಿದ್ದ. ಇದರ ಜೊತೆಯಲ್ಲಿ ಅವನ ಮನವು ಮಿಥ್ಯ, ಮೋಸ, ಈರ್ಷೆ, ದ್ವೇಷ, ಕಾಮ, ಕ್ರೋಧ, ಮದ, ಮಾತ್ಸರ್ಯಗಳಿಂದ ತುಂಬಿತ್ತು.

ಒಮ್ಮೆ ಆ ಪಟ್ಟಣಕ್ಕೆ ಒಬ್ಬ ಝುನ್ ಗುರು ಬಂದರು.

ತನ್ನ ಹಣದ ಹೆಚ್ಚಳಿಕೆಯನ್ನು ತೋರಿಸಿಕೊಳ್ಳಲು ಧನಿಕ, ಝೆನ್ ಗುರುಗಳನ್ನು ತನ್ನ ಮನೆಗೆ ಸ್ವಾಗತಿಸಿದ.

ಗುರುಗಳಿಗೆ ನಮಿಸಿ ತನಗೆ ಶಾಂತಿಯ ನೆಲೆ ಬೇಕೆಂದು ಕೇಳಿಕೊಂಡ. ಝೆನ್ ಗುರುಗಳು, ಧನಿಕನಿಗೆ ಕೆಲವು ನಿಬಂಧನೆಗಳನ್ನು ಹಾಕಿದರು.

ಧನಿಕ ಹೇಳಿದ “ಗುರುಗಳೇ ನಿಮಗೆ ಧನದ ಮೂಟೆಯನ್ನೇ ಕೊಡುವೆ, ನನಗೆ ಶಾಂತಿಯ ನೆಲೆ ದೊರತರೆ” ಎಂದ.

“ನಿನ್ನ ಧನದ ಅವಶ್ಯಕತೆ ನನಗಿಲ್ಲ. ನಿನ್ನ ಬೇಡಿಕೆ ಪೂರೈಸಲು ನಿನಗೆ ಒಂದು ಸೂತ್ರ ಕೊಡುತ್ತೇನೆ.”

“ಅದೇನು ಹೇಳಿ ಗುರುಗಳೇ”

“ನೀನು ಬಾಳಿನಲ್ಲಿ ಖಾಲಿ ಮಾಡುವುದನ್ನು ಕಲಿಯಬೇಕು”

“ಇಷ್ಟೇ ತಾನೇ, ಎಲ್ಲವನ್ನು ಖಾಲಿ ಮಾಡುತ್ತೇನೆ. ಹಾಗಾದರೆ ನನಗೆ ಶಾಂತಿ ಸಿಕ್ಕುತ್ತದಲ್ಲವೇ?” ಎಂದ ಧನಿಕ.

“ಖಾಲಿಮಾಡಿ ಜೀವನ ನಡೆಸು. ನಂತರ ಬಂದು ತಿಳಿಸು” ಎಂದರು ಝೆನ್ ಗುರುಗಳು.

ಧನಿಕನಿಗೆ ಹಲವಾರು ತಿಂಗಳುಗಳಾದರು ನೆಮ್ಮದಿ ಸಿಗಲಿಲ್ಲ ಎಂದು ಹಲುಬಿದ.

“ನಿನ್ನಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಈರ್ಷೆ, ದ್ವೇಷ, ಇವುಗಳನ್ನು ಖಾಲಿ ಮಾಡಿರುವೆಯಾ? ಎಂದರು ಗುರುಗಳು. ನಿನಗೆ ನೆಮ್ಮದಿ ಸಿಗಬೇಕಾದರೆ ನಿನ್ನ ಮನವು ಸತ್ಯದ ನಿರೀಕ್ಷೆಯಲ್ಲಿರುವ ಪ್ರಾಮಾಣಿಕತೆ, ಪ್ರೀತಿ, ಸ್ನೇಹ ಮನದಲ್ಲಿ ತುಂಬಿರಲಿ. ಮನವನ್ನು ಪ್ರಾಪಂಚಿಕತೆಯಿಂದ, ಸಂಸಾರದಿಂದ ದೂರ ಇಡು. ಆಗ ನಿನಗೆ ನೆಮ್ಮದಿಯ ನೆಲೆ ಸಿಗುತ್ತದೆ” ಎಂದಾಗ ಧನಿಕನಿಗೆ ಶಾಂತಿಯ ನೆಲೆ ಏನೆಂಬುದರ ಅರಿವಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...