Home / ಕಥೆ / ಕಿರು ಕಥೆ / ಖಾಲಿ ಮಾಡು

ಖಾಲಿ ಮಾಡು

ಒಂದು ಪಟ್ಟಣದಲ್ಲಿ ಒಬ್ಬ ಅತ್ಯಂತ ಧನಿಕನಿದ್ದ. ಅವನಲ್ಲಿ ಇರದ ವಸ್ತುಗಳಿರಲಿಲ್ಲ. ಜಗತ್ತಿನ ಎಲ್ಲಾ ವಸ್ತುಗಳನ್ನು ಖರೀದಿಸಿ ಶೇಖರಿಸಿದ್ದ. ಆದರೂ ಅವನಿಗೆ ತೃಪ್ತಿ, ಸಂತಸವಿರಲಿಲ್ಲ. ನೆಮ್ಮದಿ ಶಾಂತಿ ದೊರೆತಿರಲಿಲ್ಲ. ಅವನ ಬಾಳನ್ನು ವ್ಯಾಪಾರಿ ಮನೋಭಾವ ತುಂಬಿತ್ತು. ಧನ, ಕನಕ, ವಸ್ತು, ವೈವಿಧ್ಯವಿರುವ ತನ್ನದು ತುಂಬು ಜೀವನವೆಂದು ಹೆಮ್ಮೆಪಡುತ್ತಿದ್ದ. ಇದರ ಜೊತೆಯಲ್ಲಿ ಅವನ ಮನವು ಮಿಥ್ಯ, ಮೋಸ, ಈರ್ಷೆ, ದ್ವೇಷ, ಕಾಮ, ಕ್ರೋಧ, ಮದ, ಮಾತ್ಸರ್ಯಗಳಿಂದ ತುಂಬಿತ್ತು.

ಒಮ್ಮೆ ಆ ಪಟ್ಟಣಕ್ಕೆ ಒಬ್ಬ ಝುನ್ ಗುರು ಬಂದರು.

ತನ್ನ ಹಣದ ಹೆಚ್ಚಳಿಕೆಯನ್ನು ತೋರಿಸಿಕೊಳ್ಳಲು ಧನಿಕ, ಝೆನ್ ಗುರುಗಳನ್ನು ತನ್ನ ಮನೆಗೆ ಸ್ವಾಗತಿಸಿದ.

ಗುರುಗಳಿಗೆ ನಮಿಸಿ ತನಗೆ ಶಾಂತಿಯ ನೆಲೆ ಬೇಕೆಂದು ಕೇಳಿಕೊಂಡ. ಝೆನ್ ಗುರುಗಳು, ಧನಿಕನಿಗೆ ಕೆಲವು ನಿಬಂಧನೆಗಳನ್ನು ಹಾಕಿದರು.

ಧನಿಕ ಹೇಳಿದ “ಗುರುಗಳೇ ನಿಮಗೆ ಧನದ ಮೂಟೆಯನ್ನೇ ಕೊಡುವೆ, ನನಗೆ ಶಾಂತಿಯ ನೆಲೆ ದೊರತರೆ” ಎಂದ.

“ನಿನ್ನ ಧನದ ಅವಶ್ಯಕತೆ ನನಗಿಲ್ಲ. ನಿನ್ನ ಬೇಡಿಕೆ ಪೂರೈಸಲು ನಿನಗೆ ಒಂದು ಸೂತ್ರ ಕೊಡುತ್ತೇನೆ.”

“ಅದೇನು ಹೇಳಿ ಗುರುಗಳೇ”

“ನೀನು ಬಾಳಿನಲ್ಲಿ ಖಾಲಿ ಮಾಡುವುದನ್ನು ಕಲಿಯಬೇಕು”

“ಇಷ್ಟೇ ತಾನೇ, ಎಲ್ಲವನ್ನು ಖಾಲಿ ಮಾಡುತ್ತೇನೆ. ಹಾಗಾದರೆ ನನಗೆ ಶಾಂತಿ ಸಿಕ್ಕುತ್ತದಲ್ಲವೇ?” ಎಂದ ಧನಿಕ.

“ಖಾಲಿಮಾಡಿ ಜೀವನ ನಡೆಸು. ನಂತರ ಬಂದು ತಿಳಿಸು” ಎಂದರು ಝೆನ್ ಗುರುಗಳು.

ಧನಿಕನಿಗೆ ಹಲವಾರು ತಿಂಗಳುಗಳಾದರು ನೆಮ್ಮದಿ ಸಿಗಲಿಲ್ಲ ಎಂದು ಹಲುಬಿದ.

“ನಿನ್ನಲ್ಲಿರುವ ಕಾಮ, ಕ್ರೋಧ, ಮದ, ಮಾತ್ಸರ್ಯ, ಈರ್ಷೆ, ದ್ವೇಷ, ಇವುಗಳನ್ನು ಖಾಲಿ ಮಾಡಿರುವೆಯಾ? ಎಂದರು ಗುರುಗಳು. ನಿನಗೆ ನೆಮ್ಮದಿ ಸಿಗಬೇಕಾದರೆ ನಿನ್ನ ಮನವು ಸತ್ಯದ ನಿರೀಕ್ಷೆಯಲ್ಲಿರುವ ಪ್ರಾಮಾಣಿಕತೆ, ಪ್ರೀತಿ, ಸ್ನೇಹ ಮನದಲ್ಲಿ ತುಂಬಿರಲಿ. ಮನವನ್ನು ಪ್ರಾಪಂಚಿಕತೆಯಿಂದ, ಸಂಸಾರದಿಂದ ದೂರ ಇಡು. ಆಗ ನಿನಗೆ ನೆಮ್ಮದಿಯ ನೆಲೆ ಸಿಗುತ್ತದೆ” ಎಂದಾಗ ಧನಿಕನಿಗೆ ಶಾಂತಿಯ ನೆಲೆ ಏನೆಂಬುದರ ಅರಿವಾಯಿತು.
*****

Tagged:

Leave a Reply

Your email address will not be published. Required fields are marked *

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...