Home / ಕಥೆ / ಕಿರು ಕಥೆ / ಏಕಾಂತದ ಬೆಳೆ

ಏಕಾಂತದ ಬೆಳೆ

ಗುರುವಿನ ಕಠೋರ ಮಾತುಗಳು ಶಿಷ್ಯನಿಗೆ ವೇದನೆಯಾಯಿತು. ತಾನು ಮಾಡಿದ ತಪ್ಪುಗಳನ್ನು ಅರಿತು ಆಂತರ್ಯವನ್ನು ಶೋಧಿಸ ತೊಡಗಿದ. ಒಡನಾಡುವ ಮಿತ್ರರೊಂದಿಗೆ ತನ್ನ ಭಾವನೆಗಳನ್ನು ಹಂಚಿಕೊಳ್ಳಲಾರದೆ ವಿಕಾಂತವನ್ನು ಬಯಸಿದ. ಕಾಡಿನ ಮೂಲೆಯಲ್ಲಿ ಗಿಡಮರಗಳ ಮಧ್ಯೆ ಏಕಾಂತದಲ್ಲಿರಲು ಇಚ್ಛಿಸಿದ. ಗುರುವಿನ ಮಾತುಗಳನ್ನು, ಉಪದೇಶವನ್ನು ಮನದಟ್ಟು ಮಾಡಿಕೊಳ್ಳುತ್ತಿದ್ದ. ಅಳಕನ್ನು ಹುಡುಕಿ ಮನವ ಗುಡಿಸುತ್ತಿದ್ದ, ಸಾರಿಸುತ್ತಿದ್ದ, ತಿಕ್ಕಿ ತೊಳೆದು, ಒರೆಸಿ, ಶುಭ್ರ ಮಾಡುತ್ತಿದ್ದ.

ಏಕಾಂತದಲ್ಲಿ ಕುಳಿತು ಅಂತರಂಗದ ಒಳಹೊಕ್ಕು ದೀಪ ಹಚ್ಚುತ್ತಿದ್ದ. ಬೆಳಕಿನಲ್ಲಿ ಆತ್ಮ ಸಂಶೋಧನೆ ಮಾಡುತ್ತಿದ್ದ. ಏಕಾಂತದಲ್ಲಿ ಕಣ್ಣೀರು ಸುರಿಸಿ ಮುತ್ತಾಗಿ ಬೆಳೆಸುತ್ತಿದ್ದ. ಹೃದಯ ಹೊಲವ ಉಳುತ್ತಿದ್ದ. ತನ್ನನ್ನು ತಾನೇ ತೋಡಿಕೊಂಡು ಬೀಜ ಮೊಳೆಯುವಂತೆ ಸಂಪನ್ನ ಗೊಳಿಸುತ್ತಿದ್ದ. ಏಕಾಂತದಲ್ಲಿ ದಿಗಂತದವರೆಗೂ ಸಾಗುತ್ತಿದ್ದ. ಮನವನ್ನು ಎತ್ತರಕ್ಕೆ ಬೆಳೆಸುತ್ತಿದ್ದ.

ಶಿಷ್ಯನು ಬಹಳಷ್ಟು ಹೊತ್ತು ಏಕಾಂತದಲ್ಲಿ ಕಳೆಯುವುದನ್ನು ಗಮನಿಸಿ ಶಿಷ್ಯನನ್ನು ಕರೆದು “ನಿನ್ನ ಏಕಾಂತಕ್ಕೆ ಕಾರಣವೇನು?” ಎಂದು ಕೇಳಿದರು.

“ಗುರುವೆ! ನಿಮ್ಮ ಸಾನಿಧ್ಯದಲ್ಲಿ ಕಲಿತದ್ದು ರಕ್ತಗತವಾಗಿರಿಸಲು ನಾ ಏಕಾಂತದಲ್ಲಿ ನನ್ನ ನಾನು ಹುಡುಕಿಕೊಂಡು ಹೊರಟಿರುವೆ” ಎಂದ.

“ನಿನ್ನ ನೀನು ಹುಡುಕಲು ಎಲ್ಲಿಗೂ ಹೋಗಬೇಕಿಲ್ಲ. ಕಾಡು ವನದಲ್ಲಿ ನೀನು ಹುಡುಕಬೇಡ. ನೀನು ಇರುವುದು ನಿನ್ನ ಹೊರಗಲ್ಲ, ಒಳಗೆ, ನಿನ್ನ ದೃಷ್ಟಿ ಅಂತರ ಮುಖವಾಗಲಿ. ನಿನ್ನ ಭಾವ ಪರಿಪಕ್ವವಾಗಲಿ. ನಿನ್ನೊಳಗಣ ಹಾದಿ ಅನಂತವಾಗಲಿ. ಅದಕ್ಕೆ ಅನುವಾಗುವುದು ಏಕಾಂತ ಎಂದು ಅರಿತಿರುವೆಯಾ?” ಎಂದರು ಗುರುಗಳು.

“ಏಕಾಂತದಿಂದ ಶ್ರೀಕಾಂತ ಸಾಕ್ಷಾತ್ಕಾರ. ಏಕಾಂತದ ಹಾದಿಯಲ್ಲಿ ಝೆನ್ ಹೆಜ್ಜೆ ಇಟ್ಟು ನಡೆ. ಸಾಗುವುದು. ಗುರಿ ಸೇರುವುದು” ಎಂದಾಗ ಶಿಷ್ಯನ ಎದೆ ತುಂಬಿ ಬಂದಿತು.
*****

Tagged:

Leave a Reply

Your email address will not be published. Required fields are marked *

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...