Home / ಕವನ / ಕವಿತೆ / ಜಯ ನವಭಾರತಕೆ

ಜಯ ನವಭಾರತಕೆ

(೨೬-೧-೧೯೫೦)
ಕಿರೀಟಪತಿಗಳ ರಾಜ್ಯವಿದಲ್ಲ
ನಮ್ಮೀ ಭಾರತದೇಶ
ಈ ಮೊದಲಿನ್ನೀ ರಾಜ್ಯದಿ ನಡೆವುದು
ನಾಡ ಮಕ್ಕಾಳಾದೇಶ-
ಎಂದುಗ್ಗಡಿಸುವ ಬಿರುದಿನ ಬಾವುಟ
ವೇರಿತು ದಿಭಿಯ ತುದಿಗೆ
ಬಿಸಿರಕುತದ ಹುಸಿಯಲ್ಲದ ಕನಸಿನ
ಧೀರರ ಬಗೆಬಾನ್‌ಬದಿಗೆ.
ಚಳಿಮುರಿಯದೆ ಹಿಮಹಿಂಗದೆ ಜನ ಮುಂ-
ಜಾನೆಯೊಳೆಚ್ಚರೆ ಬೆದರೆ
ಸುಖಪುರುಷರು ನೆಮ್ಮದಿಗೆಡೆ ಹೊರಟಿತು
ದಿಬ್ಬಣ ಹಳಮನವದಿರೆ.
ಹೊಸತೀ ನೆಲ ಹೊಸತೀ ಜನ ಹೊಸತೇ-
ಜದ ಬಾಳೀ ಭಾರತಕೆ
ಎನೆ ಹೊಸ ಜಗ್ಗಿನ ಹೆಜ್ಜೆಯ ಲಾಗಿನ
ನಡೆ ನಮ್ಮೀ ಯುವಜನಕೆ.
ಉದುರುವ ಹಣ್ಣೆಲೆ ಹೊಸ ಚೆಂದಳಿರಿಗೆ
ಗೊಬ್ಬರವೆಂತುಟೊ ಅಂತು
ಹಳೆಯ ರೂಢಿ ಹುಡಿಗೂಡಲು ಹೊಸತರ
ಹುರುಪೆಮಗಾಯಿತಿದಿಂತು.
ಮುದುಡಿದ ವಿಜ್ಞಾನದ ಹೆಡೆ ಬಿಚ್ಚುತ
ನಮ್ಮೊಳ ಪ್ರಜ್ಞೆಯನಂತ
ತನ್ನೆದೆ ತಲ್ಪದೊಳಿಹ ಮಂಗಳವನು
ಕಾಪಿಡೆ ತೊಟ್ಟಿದೆ ಪಂತ.
ತನ್ನರಿವಿನಂತೆ ತನ್ನಿರವಾಗಲು
ಹವಣಿಸುತೆದ್ದಿದೆ ನಾಡು
ಪರರಿಗಲ್ಲದೆಮ್ಮುಜ್ಜುಗಕಾಯಿತು
ಸರ್ವ ಸಮೃದ್ಧಿಯ ಜಾಡು.
ಜಗಳಗಂಟರಲ್ಲಬಲರಲ್ಲನಾ-
ವೆಮಗಿನಿತಿಲ್ಲವು ಕರುಬು
ಅಂಜೆವಂಜಿಸೆವು-ಎನೆ ಗೆಲುವಾಯ್ತೀ
ಬಾವುಟವಾಡುವ ಜರುಬು.
ಕಿವಿಗಿನಿದೀ ಜಯ ಜಯಫೋಷಣೆ, ಕಣ್‌-
ಗಿನಿದೀ ಹಮ್ಮಿನ ಪರಿಸೆ
ಮೆರವಣಿಗೆಯಿಗೋ ದೈವವು ಧೀರರಿ-
ಗೆರೆವಾ ಶುಭಗಳ ವರಿಸೆ.
ಜಯ ಶುಭಮಂಗಳ ನವ ಭಾರತಕೆ
ಸಲ್ಲಲಿ ಸಂತರ ಹರಕೆ
ಶುಭಾ ಶುಭವ ತನ್ನಿಚ್ಛೆಗೆ ನಡೆಸುವ
ಸರ್ವೋದ್ಧಾರಕ ಶಿವಕೆ.
ಅವಾಚ್ಯವಾಗಲಿ ದೇಹಿನಾಸ್ತಿಯೆಂ-
ಬುಕ್ತಿಗಳೆಮ್ಮೀ ಜನಕೆ
ಮಿತಹಿಂಸೆಯೊಳಮಿತಪ್ರೇಮದೊಳೀ-
ಆಳಿಕೆ ಲೋಕವ ಹಿತಕೆ.
ಸಿರಿ ಹೆಚ್ಚಲಿ ಸೊಗಹೆಚ್ಚಲಿ ಋದ್ಧಿಯೊ-
ಳಿಂದ್ರಿಯ ನಿಗ್ರಹಕೊಲಿದು
ದುಃಖದ ಕರುಕಿಡದಾನಂದವ ಪಡೆ-
ದೀ ನೆಲ ಬಾಳಲಿ ನಲಿದು.
*****
Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...