Home / ಕಥೆ / ಕಿರು ಕಥೆ / ದಾರಿ ಎಲ್ಲಿದೆ?

ದಾರಿ ಎಲ್ಲಿದೆ?

“ದಾರಿ ಎಲ್ಲಿದೆ? ಎಂದು ಕಳಕಳಿಯಿಂದ ಶಿಷ್ಯ, ಗುರುವಿನಲ್ಲಿ ಕೇಳಿದ.
“ಬಹಿರಂಗದಲ್ಲಿ ನಿಂತು ಸಾಗಿದ್ದರೆ ಶಿಷ್ಯಾ! ನೇರ ಅಂತರಂಗದ ಹಾದಿಗೆ ಹೋಗು. ಅಂತರಂಗದಲ್ಲಿ ದಾರಿ ಕವಲೊಡೆದರೆ, ನಿಲ್ಲು ಧ್ಯಾನದಲ್ಲಿ, ಕೊನೆಗೆ ಸೇರುವೆ ಸಮಷ್ಟಿಯ ದಾರಿಯಲ್ಲಿ”- ಎಂದರು ಗುರುಗಳು.
“ನನ್ನ ಮನದ ಅಂತರಂಗ ಬಹಿರಂಗಗಳಿಗೆ ಗೆರೆ ಹಾಕುವುದು ಹೇಗೆ ಗುರುವರ್ಯಾ?” ಎಂದ ಶಿಷ್ಯ.
“ಗೋಡೆ, ಗೆರೆ, ಬೇಲಿಗಳಿಗಿಂತ ಹೊಸಿಲು, ಸೇತುವೆ ಇಟ್ಟುಕೋ.
ಮೆಟ್ಟಿಲಿರಲಿ ಏರಿ ಇಳಿಯಲು ಅಂತರಂಗಕ್ಕೆ” ಎಂದರು ಗುರುಗಳು.
“ಈ ದಾರಿಗೆ ಬೆಳಕಾವುದು ಗುರುಗಳೇ? ಊರುಗೋಲಾವುದು?” ಎಂದ.
“ತಿಳಿವು, ಅರಿವು ಇವೇ ದಾರಿಯ ಹಣತೆಗಳು, ಪ್ರಜ್ಞೆಯೇ ಊರುಗೋಲು.”
“ಈ ದಾರಿಯ ಗುರಿ ಎಲ್ಲಿಯವರೆಗೆ? ಗುರುವೇ!”
“ಅದರ ಗುರಿ ಆನಂದದಲ್ಲಿ. ಅನಂತದಲ್ಲಿ. ವ್ಯಷ್ಟಿ ಸಮಷ್ಟಿಲೀನದಲ್ಲಿ. ಆತ್ಮ ವಿಶ್ವಾತ್ಮ ತಾದಾತ್ಮ್ಯದಲ್ಲಿ.”
“ನದಿಯು ಹರಿಯುವ ದಾರಿ ಸಾಗರಮಿಲನ ವಲ್ಲವೇ?” ಎಂದಾಗ ಶಿಷ್ಯನಿಗೆ ದಾರಿ, ದೃಷ್ಟಿ ಗೋಚರವಾಯಿತು ಗುರುಗಳ ನುಡಿ ಬೆಳಕಿನಲ್ಲಿ.
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...