Home / ಕಥೆ / ಕಿರು ಕಥೆ / ಹಾದಿ ಎಲ್ಲಿಯವರೆಗೆ?

ಹಾದಿ ಎಲ್ಲಿಯವರೆಗೆ?

ವ್ಯಾಳ ವ್ಯಾಳದ ಹೆಜ್ಜೆಯಲ್ಲಿ ತಾಳ ಮೇಳವನ್ನು ಕಂಡುಕೊಂಡ ಶಿಷ್ಯ, ಗುರುವಿನಲ್ಲಿ ಬಂದು, “ನನಗೆ ನಡೆವ ಹಾದಿ ಎಷ್ಟು ಉದ್ದವಿದೆ?” ಎಂದು ಕೇಳಿದ.

ಗುರು ಹೇಳಿದರು “ನೀನು ಈ ತಾಳದಲ್ಲಿ ಮೇಳದಲ್ಲಿ ಆರಂಭಿಸಿರುವೆ. ಹೋಗ ಬೇಕಾದದ್ದು ಬಹಳಷ್ಟಿದೆ. ಆಳಕ್ಕೆ, ಪಾತಾಳಕ್ಕೆ, ಆಗಸದ ಎತ್ತರಕ್ಕೆ, ನಕ್ಷತ್ರದ ಸನಿಹಕ್ಕೆ, ಶಿಖರದ ತುದಿಗೆ, ಭೂಮಿಯ ಅಗಲಕ್ಕೆ, ಭಾವದ ಬಯಲಿಗೆ, ಸತ್ಯದ ನೇರಕ್ಕೆ, ನಿನ್ನ ಕಾಲ ನಿಲ್ಲಗೊಡದೆ ನದಿಯ ಹರಿಯುವಿಕೆಯಲ್ಲಿ ಹೋಗು, ನಿನ್ನ ಕೈಕಾಲು ನಿಂತಾಗ ಅಲೆಯ ನಿರಂತರ ನರ್ತನ ನೋಡು, ನಿನ್ನ ಧ್ವನಿ ಸೋತಾಗ ಧ್ಯಾನದಲ್ಲಿ ನಡೆ, ಶೂನ್ಯದಲ್ಲಿ ಸೇರು. ನಿನ್ನ ಎದೆ ಬಡಿತದ ಸತ್ಯದ ಸೆಲೆಯಲ್ಲಿ ನಡೆ. ನಿನ್ನ ಮನ ಹೂವಂತೆ ಅರಳಲಿ. ಹಣ್ಣಂತೆ ರಸ ತುಂಬಲಿ. ಬೀಜ ಅಂಕುರಿಸಲಿ- ಮಂತ್ರವಾಗಲಿ, ಝೇಂಕಾರವಾಗಲಿ, ಓಂಕಾರವಾಗಲಿ ಅಲ್ಲಿ ನಿನ್ನ ಅನಂತ ಹಾದಿಯ ಅಂತ” ಎಂದು ಗುರು ನುಡಿದಾಗ ಶಿಷ್ಯ ನಡೆಯುತ್ತಲೇ ಇದ್ದ ದಿಗಂತದ ವರೆಗೂ ಸತ್ಯದ ಹೊನ್ನಿನ ಗಿಂಡಿಯ ಮುಚ್ಚಳ ತೆರದಂತೆ ಉದಯಭಾನು ಬಾನಿನಲ್ಲಿ ಮೂಡುತ್ತಿದ್ದ.
*****

Tagged:

Leave a Reply

Your email address will not be published. Required fields are marked *

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...