Home / ಕವನ / ಕವಿತೆ / ದಿಲ್ಲಿ ಆವರಿಸಿದ ಮಂಜು

ದಿಲ್ಲಿ ಆವರಿಸಿದ ಮಂಜು

ದಿಲ್ಲಿ ನಗರಿ ಎಲ್ಲಿದೆಯೋ
ಸೂರ್ಯನ ಟಾರ್ಚ್ ಹತ್ತಲೊಲ್ಲದೆ!
ನಾಲ್ಕು ಹೆಜ್ಜೆ ಹಿಂದೆ ಮುಂದೆ
ಏನೂ ಕಾಣದ ದಟ್ಟ ಮಂಜು
ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ
ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ
ನಿಲ್ದಾಣದೊಳಗೆಲ್ಲರ ಓಡಾಟ
ಜಗಳಾಟ ಕೌಂಟರಿನಲ್ಲಿ
ಫೋಟೋಗ್ರಾಫರನ ಕ್ಯಾಮರಾಗ್ಲಾಸೆಲ್ಲ
ಮಬ್ಬು, ನೆಲ ಖುರ್ಚಿ ತಾಗಿದ್ದೆಲ್ಲ
ಹಿಮ ಹಿಮ ಮೈ ಮರಗಟ್ಟುವಿಕೆ
ಅವಿತುಕೊಳ್ಳುವಿಕೆ
ಬ್ಯಾಗುಗಳ ಸಂದಿಗೊಂದಿಗಳೊಳಗೆ
ಮಹಿಳೆಯರು ಮಕ್ಕಳು ವೃದ್ಧರು
ಗುಬ್ಬಚ್ಚಿಗೂಡಿನೊಳಗೆ ಪಿಳಿ ಪಿಳಿ ಕಣ್ಣು
ಪಾಪ ! ಟೀ ಕಾಫಿ ಇಲ್ಲದೆ ಬಾಯಾರಿದೆ
ಅಬ್ಬಬ್ಬಾ ! ದಟ್ಟ ಮಂಜು.

ವಿಮಾನಗಳೆಲ್ಲೋ ಅಧಿಕಾರಿಗಳೆಲ್ಲೋ
ಕಾಣಿಸದ ವೇಳಾಪತ್ರಿಕೆ ಬೋರ್ಡು
ಕೇಳಿಸದು ಅನೌನ್ಸ್‌ಮೆಂಟ್
ಮಂಜು ಮೋಡಿನ ತುಣುಕು
ಕಣ್ಣು ಕಿವಿ ಹೊಕ್ಕು
ಮಬ್ಬು ಮಾಡಿವೆಯೊ ಹೇಗೆ

ಅಹಹ ಚಳಿ ! ಕ್ಷಣ ಕ್ಷಣಕೂ
ಆವರಿಸುವ ದಟ್ಟ ಮಂಜು
ಮೊಬೈಲ್ ತರಂಗು ದಾಟಿಸದ ಮಂಜು
ಪಾಪ ಆತನದು ಬೆಂಗಳೂರಿನಲ್ಲಿ
ನಾಳೆಯೇ ಎಂಗೇಜ್‌ಮೆಂಟ್
ಒತ್ತಿ ಬರುತ್ತಿರುವ ಕಣ್ಣೀರು ಆಕೆಗೆ
ಅಪ್ಪ ಹೃದಯಾಘಾತಕ್ಕೊಳಗಾಗಿ
ಚೆನೈದ ಹಾಸ್ಪಿಟಲ್‌ದಲ್ಲಿ
ಆತ ನಿಂತಲ್ಲಿಯೇ ನಿಲ್ಲುತ್ತಿಲ್ಲ
ಬೊಂಬಾಯಿಯಿಂದ ಹೆಂಡತಿಯ ಡೆಲಿವರಿ ಸುದ್ಧಿ
ವಿದೇಶಿಗರ ಗೋಳಾಟವೋ
ಮಂಜಿನೊಳಗವಿತಿರುವ
ಆ ಪರಶಿವನಿಗೇ ಗೊತ್ತು

ದಿವಸಗಳು ಒಂದೆರಡು ಮೂರು
ಅಸ್ತವ್ಯಸ್ತ ಎಲ್ಲೆಲ್ಲೂ ಅಳುಮುಖ
ಮಂಜಿನಡಿ ದಿಲ್ಲಿ ರಾಜಕೀಯ
ಬೆಚ್ಚಗೆ ಮಲಗಿರಬೇಕು
ಕೆಂಡ ಕಾಯಿಸಿ ತಣ್ಣನೆಯ ಬೀರು ಹೀರಿದ್ದೆ ಮಜಾ
ಎಲ್ಲೆಲ್ಲಿಂದಲೋ ಬಂದ ಈ
ಹಕ್ಕಿ ಪಿಕ್ಕಿಗಳ ಪಾಡೇನು ಶಿವಾ ?
ಎಲ್ಲಿ ನಿನ್ನ ರವಿಕಿರಣಗಳ
ಬಾಣ ಬತ್ತಳಿಕೆ….
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...