Home / ಕವನ / ಕವಿತೆ / ದಿಲ್ಲಿ ಆವರಿಸಿದ ಮಂಜು

ದಿಲ್ಲಿ ಆವರಿಸಿದ ಮಂಜು

ದಿಲ್ಲಿ ನಗರಿ ಎಲ್ಲಿದೆಯೋ
ಸೂರ್ಯನ ಟಾರ್ಚ್ ಹತ್ತಲೊಲ್ಲದೆ!
ನಾಲ್ಕು ಹೆಜ್ಜೆ ಹಿಂದೆ ಮುಂದೆ
ಏನೂ ಕಾಣದ ದಟ್ಟ ಮಂಜು
ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ
ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ
ನಿಲ್ದಾಣದೊಳಗೆಲ್ಲರ ಓಡಾಟ
ಜಗಳಾಟ ಕೌಂಟರಿನಲ್ಲಿ
ಫೋಟೋಗ್ರಾಫರನ ಕ್ಯಾಮರಾಗ್ಲಾಸೆಲ್ಲ
ಮಬ್ಬು, ನೆಲ ಖುರ್ಚಿ ತಾಗಿದ್ದೆಲ್ಲ
ಹಿಮ ಹಿಮ ಮೈ ಮರಗಟ್ಟುವಿಕೆ
ಅವಿತುಕೊಳ್ಳುವಿಕೆ
ಬ್ಯಾಗುಗಳ ಸಂದಿಗೊಂದಿಗಳೊಳಗೆ
ಮಹಿಳೆಯರು ಮಕ್ಕಳು ವೃದ್ಧರು
ಗುಬ್ಬಚ್ಚಿಗೂಡಿನೊಳಗೆ ಪಿಳಿ ಪಿಳಿ ಕಣ್ಣು
ಪಾಪ ! ಟೀ ಕಾಫಿ ಇಲ್ಲದೆ ಬಾಯಾರಿದೆ
ಅಬ್ಬಬ್ಬಾ ! ದಟ್ಟ ಮಂಜು.

ವಿಮಾನಗಳೆಲ್ಲೋ ಅಧಿಕಾರಿಗಳೆಲ್ಲೋ
ಕಾಣಿಸದ ವೇಳಾಪತ್ರಿಕೆ ಬೋರ್ಡು
ಕೇಳಿಸದು ಅನೌನ್ಸ್‌ಮೆಂಟ್
ಮಂಜು ಮೋಡಿನ ತುಣುಕು
ಕಣ್ಣು ಕಿವಿ ಹೊಕ್ಕು
ಮಬ್ಬು ಮಾಡಿವೆಯೊ ಹೇಗೆ

ಅಹಹ ಚಳಿ ! ಕ್ಷಣ ಕ್ಷಣಕೂ
ಆವರಿಸುವ ದಟ್ಟ ಮಂಜು
ಮೊಬೈಲ್ ತರಂಗು ದಾಟಿಸದ ಮಂಜು
ಪಾಪ ಆತನದು ಬೆಂಗಳೂರಿನಲ್ಲಿ
ನಾಳೆಯೇ ಎಂಗೇಜ್‌ಮೆಂಟ್
ಒತ್ತಿ ಬರುತ್ತಿರುವ ಕಣ್ಣೀರು ಆಕೆಗೆ
ಅಪ್ಪ ಹೃದಯಾಘಾತಕ್ಕೊಳಗಾಗಿ
ಚೆನೈದ ಹಾಸ್ಪಿಟಲ್‌ದಲ್ಲಿ
ಆತ ನಿಂತಲ್ಲಿಯೇ ನಿಲ್ಲುತ್ತಿಲ್ಲ
ಬೊಂಬಾಯಿಯಿಂದ ಹೆಂಡತಿಯ ಡೆಲಿವರಿ ಸುದ್ಧಿ
ವಿದೇಶಿಗರ ಗೋಳಾಟವೋ
ಮಂಜಿನೊಳಗವಿತಿರುವ
ಆ ಪರಶಿವನಿಗೇ ಗೊತ್ತು

ದಿವಸಗಳು ಒಂದೆರಡು ಮೂರು
ಅಸ್ತವ್ಯಸ್ತ ಎಲ್ಲೆಲ್ಲೂ ಅಳುಮುಖ
ಮಂಜಿನಡಿ ದಿಲ್ಲಿ ರಾಜಕೀಯ
ಬೆಚ್ಚಗೆ ಮಲಗಿರಬೇಕು
ಕೆಂಡ ಕಾಯಿಸಿ ತಣ್ಣನೆಯ ಬೀರು ಹೀರಿದ್ದೆ ಮಜಾ
ಎಲ್ಲೆಲ್ಲಿಂದಲೋ ಬಂದ ಈ
ಹಕ್ಕಿ ಪಿಕ್ಕಿಗಳ ಪಾಡೇನು ಶಿವಾ ?
ಎಲ್ಲಿ ನಿನ್ನ ರವಿಕಿರಣಗಳ
ಬಾಣ ಬತ್ತಳಿಕೆ….
*****
ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...