ದಿಲ್ಲಿ ಆವರಿಸಿದ ಮಂಜು

ದಿಲ್ಲಿ ನಗರಿ ಎಲ್ಲಿದೆಯೋ
ಸೂರ್ಯನ ಟಾರ್ಚ್ ಹತ್ತಲೊಲ್ಲದೆ!
ನಾಲ್ಕು ಹೆಜ್ಜೆ ಹಿಂದೆ ಮುಂದೆ
ಏನೂ ಕಾಣದ ದಟ್ಟ ಮಂಜು
ಅಬ್ಬಬ್ಬಾ ! ಡಿಸೆಂಬರ ಚಳಿ ಮೈಕೊರೆತ
ಹಾರಲೊಪ್ಪದ ವಿಮಾನಗಳು ಕುಕ್ಕರುಗಾಲು ಹಾಕಿವೆ
ನಿಲ್ದಾಣದೊಳಗೆಲ್ಲರ ಓಡಾಟ
ಜಗಳಾಟ ಕೌಂಟರಿನಲ್ಲಿ
ಫೋಟೋಗ್ರಾಫರನ ಕ್ಯಾಮರಾಗ್ಲಾಸೆಲ್ಲ
ಮಬ್ಬು, ನೆಲ ಖುರ್ಚಿ ತಾಗಿದ್ದೆಲ್ಲ
ಹಿಮ ಹಿಮ ಮೈ ಮರಗಟ್ಟುವಿಕೆ
ಅವಿತುಕೊಳ್ಳುವಿಕೆ
ಬ್ಯಾಗುಗಳ ಸಂದಿಗೊಂದಿಗಳೊಳಗೆ
ಮಹಿಳೆಯರು ಮಕ್ಕಳು ವೃದ್ಧರು
ಗುಬ್ಬಚ್ಚಿಗೂಡಿನೊಳಗೆ ಪಿಳಿ ಪಿಳಿ ಕಣ್ಣು
ಪಾಪ ! ಟೀ ಕಾಫಿ ಇಲ್ಲದೆ ಬಾಯಾರಿದೆ
ಅಬ್ಬಬ್ಬಾ ! ದಟ್ಟ ಮಂಜು.

ವಿಮಾನಗಳೆಲ್ಲೋ ಅಧಿಕಾರಿಗಳೆಲ್ಲೋ
ಕಾಣಿಸದ ವೇಳಾಪತ್ರಿಕೆ ಬೋರ್ಡು
ಕೇಳಿಸದು ಅನೌನ್ಸ್‌ಮೆಂಟ್
ಮಂಜು ಮೋಡಿನ ತುಣುಕು
ಕಣ್ಣು ಕಿವಿ ಹೊಕ್ಕು
ಮಬ್ಬು ಮಾಡಿವೆಯೊ ಹೇಗೆ

ಅಹಹ ಚಳಿ ! ಕ್ಷಣ ಕ್ಷಣಕೂ
ಆವರಿಸುವ ದಟ್ಟ ಮಂಜು
ಮೊಬೈಲ್ ತರಂಗು ದಾಟಿಸದ ಮಂಜು
ಪಾಪ ಆತನದು ಬೆಂಗಳೂರಿನಲ್ಲಿ
ನಾಳೆಯೇ ಎಂಗೇಜ್‌ಮೆಂಟ್
ಒತ್ತಿ ಬರುತ್ತಿರುವ ಕಣ್ಣೀರು ಆಕೆಗೆ
ಅಪ್ಪ ಹೃದಯಾಘಾತಕ್ಕೊಳಗಾಗಿ
ಚೆನೈದ ಹಾಸ್ಪಿಟಲ್‌ದಲ್ಲಿ
ಆತ ನಿಂತಲ್ಲಿಯೇ ನಿಲ್ಲುತ್ತಿಲ್ಲ
ಬೊಂಬಾಯಿಯಿಂದ ಹೆಂಡತಿಯ ಡೆಲಿವರಿ ಸುದ್ಧಿ
ವಿದೇಶಿಗರ ಗೋಳಾಟವೋ
ಮಂಜಿನೊಳಗವಿತಿರುವ
ಆ ಪರಶಿವನಿಗೇ ಗೊತ್ತು

ದಿವಸಗಳು ಒಂದೆರಡು ಮೂರು
ಅಸ್ತವ್ಯಸ್ತ ಎಲ್ಲೆಲ್ಲೂ ಅಳುಮುಖ
ಮಂಜಿನಡಿ ದಿಲ್ಲಿ ರಾಜಕೀಯ
ಬೆಚ್ಚಗೆ ಮಲಗಿರಬೇಕು
ಕೆಂಡ ಕಾಯಿಸಿ ತಣ್ಣನೆಯ ಬೀರು ಹೀರಿದ್ದೆ ಮಜಾ
ಎಲ್ಲೆಲ್ಲಿಂದಲೋ ಬಂದ ಈ
ಹಕ್ಕಿ ಪಿಕ್ಕಿಗಳ ಪಾಡೇನು ಶಿವಾ ?
ಎಲ್ಲಿ ನಿನ್ನ ರವಿಕಿರಣಗಳ
ಬಾಣ ಬತ್ತಳಿಕೆ….
*****
ಪುಸ್ತಕ: ಇರುವಿಕೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೯೬
Next post ಪ್ರೀತಿಯ ಕನಸೆಲ್ಲ ಕರಗಿಹೋಯಿತೆ ಕೊನೆಗೂ?

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys