Home / ಕವನ / ಕವಿತೆ / ಜಾತೀಯತೆಯು

ಜಾತೀಯತೆಯು

ಸಾತ್ವಿಕರಾಜಸ ತಾಮಸಗುಣಗಳ ತಾತ್ವಿಕವಿಧಿಯಿಂಮಿಶ್ರಣ ಮಾಡುತೆ |
ಸಾತ್ವಿಕ ಬೊಮ್ಮನು ದೇಹಘಟಗಳ ನಿತ್ಯದಿ ನಿರ್ಮಿಪನೂ |
ಆತ್ಮನು ನೆಮ್ಮುದಿ ಪಡೆಯುತೆ ಘಟದೊಳು ವಾಸಿಸಿದೇಹಿಯುಎನಿಸುತ್ತೆ |
ಆತ್ಮನು ಕಾಯಕವೆಸಗಲು ಬರುವನು ಜಗದೊಳು ತಾನಂದೂ || ೧ ||

ಶ್ರಮವಿಭಾಗವ ಮಾಡಲು ಗುಣಗಳ ಹೊಂದಿಸಿ ಸಿರಿರಮಣಾ |
ಶ್ರಮದಿಂ ನಾಲ್ವರ್ಣಗಳನು ಪೇಳಿದ ಪಾಲಿಸೆ ಮಾನವರೂ |
ಶ್ರಮವರಿಯುತೆ ನರಕಾಯಕವೆಸಗಲು ನಿಪುಣತೆ ತಾಪಡೆದು |
ಶ್ರಮವೆನಿಸದೆ ತಾಬಾಳುವ ಜಗದೊಳು ಸಂತಸಪಡೆಯುತ್ತೆ || ೨ ||

ಜಾತಿಯಮೂಲವ ನರಿಯದೆ ಜನಗಳು ಸ್ವಾರ್ಥದಿರೇಗುತ್ತೆ |
ಕೋತಿಯಂದದಿ ಕುಣಿಯುತೆ ವಿಶ್ವದಶಾಂತಿಯ ಕದಡುವರೂ ||
ಜಾತಿಯಜಗಳದ ನಂಜಿನ ಬೀಜವನೂಳುತೆ ವಿಶ್ವದೊಳೂ |
ಕೋತಿಮನದ ಮುಂದಾಳ್ಗಳು ಸ್ವಾರ್ಥದಿ ಬೇಳೆಯ ಬೇಯ್ಸುವರು || ೩ ||

ತಿಳಿದುನೋಡೆ ಮಾನವ ಕುಲವೆಲ್ಲವು ಮನುವಿನ ಸಂತತಿಯೂ |
ಅಳಿದು ಪ್ರೇಮವ ತಮ್ಮೊಳು ಜಗಳವಹೂಡಿಹರೆಲ್ಲೆಲ್ಲೂ ||
ತಳೆದು ಪ್ರೇಮವ ನಡೆದೊಡೆ ಜನತೆಯು ನಲಿವುದು ಸಂತಸದಿ |
ತಿಳುವುಪುಟ್ಟೆ ಜನಮರೆವುದು ಜಾತಿಯ ಕಲಹವನೆಂದೆಂದೂ || ೪ ||

ತಂದೆ ತಾಯಿಗಳ ಜಾತಿಯು ಬಾರದುಮನುಜರನಿನೆಂದೆಂದೂ |
ಒಂದೆಕಾಯಕವ ಸಂತಸಮಾಡಲು ಜಾತಿಯ ಹೊಂದುವನೂ ||
ಹಿಂದೆ ಕೌಸಿಕನು ತಪವನುಗೈಯುತೆ ಪಾರ್‍ವನು ತಾನಾದ |
ನಿಂದ್ಯಕರ್ಮದಿಂ ಪುತ್ತಿನ ಕುವರನು ಬೇಡನು ತಾನಾದ || ೫ ||

ಆರ್ಯ ಜನಗಳೇ ಅಲೆಯುತೆ ವಿಶ್ವದಿ ಸಂಸ್ಕೃತಿ ಬೀರಿದರೂ |
ಬೇರೆಬೇರೆ ಋಷಿಶಿಷ್ಯರೆ ಆದರು ಜಾತಿಯ ಬಾಂಧವರು ||
ಸಾರಿ ಹೇಳುವೆನು ನಡದಿದೆ ಬೆರಿಕೆಯು ವಿಶ್ವದೊಳೆಂದೆಂದೂ
ದೂರುಮಾಡುತೆ ಜಾತಿಯ ಕುರುಡನು ಬಾಳ್ವುದು ಶಾಂತಿಯಲಿ || ೬ ||
*****

Tagged:

Leave a Reply

Your email address will not be published. Required fields are marked *

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...