Home / ಕವನ / ಕವಿತೆ / ವಿಧಿ

ವಿಧಿ

ಲೋಕದಲ್ಲಿ
ಧರ್ಮ ವಲ್ಲಿ
ಸೊರಗಿ ಹೋಗಿ,
ಕಾಣದಾಗಿ,
ಕಡೆಗಧರ್ಮ
ಲತೆಯು ಕೊನರಿ,
ನೀತಿಯಳಿದು
ರೀತಿಯಿಳಿದು,
ಸ್ವಾರ್ಥ ಪರತೆ
ಪಾಶವಿಕತೆ
ರುದ್ರ ನೃತ್ಯ
ನಲಿವಗತ್ಯ
ಬರೆ, ಮಹಾಂತ
ಸಾಧು-ಸಂತ
ರೂಪದಿಂದ
ದೇವನಿಂದ
ಒಲ್ಮೆ-ನಲ್ಮೆ
ಕೋಡಿವರಿದು
ಧರ್ಮಪಥವ
ನೀತಿ ಜಯವ-
ನೆತ್ತದಿರುವುದೇ?
ಮುಂದೆ
ಒತ್ತದಿರುವುದೇ?


ಕವಿಯ ಬಾಳ
ತಿಳಿವಿನಾಳ,
ನಲವು-ಚೆಲುವು,
ಕಾವು-ನೋವು,
ಪೂರ್ಣದಳತೆ,
ಕುಂದು-ಕೊರತೆ,
ಅವನ ಕವನ-
ದಲ್ಲಿ ಚೆಲ್ಲಿ,
ಜನತೆಗಾಗಿ
ವಿಶದವಾಗಿ
ತಿಳಿಯದಿರುವುದೇ?
ಮನವ
ಸೆಳೆಯದಿರುವುದೇ?


ಚತುರ ಶಿಲ್ಪಿ
ಶಿಲೆಯನೊಪ್ಪಿ,
ಅದರ ಮೇಲೆ
ವಿವಿಧ ಲೀಲೆ
ತೋರುವಂತೆ,
ಬೀರುವಂತೆ,
ಕೊರೆದ, ಬರೆದ,
ವಿವಿಧವಾದ
ಶಿಲ್ಪ ಮೂರ್ತಿ
ಅವಗೆ ಕೀರ್ತಿ
ತಾರದಿರುವುದೇ?
ಕಲೆಯ
ತೋರದಿರುವುದೇ?


ನೇಸರಿಳಿಕೆ
ಅಪರ ಜಲಕೆ
ಸಾಗಿ, ಬೈಗು-
ಗೆಂಪದಡಗು-
ವಾಗ, ರಜನಿ
ಅಂಜಿಯ೦ಜಿ,
ಬಳುಕಿ ಬಂದು,
ಬಳಸಿ ನಿಂದು,
ಮೋಹ ಪಾಶ-
ದಿಂದ ತಬ್ಬಿ,
ನಲಿಸದಿರುವಳೇ?
ಬಗೆಯ
ನೊಲಿಸದಿರುವಳೇ?


ಕತ್ತಲಳಿಯೆ,
ಮತ್ತೆ ಜಗದೆ
ಅರುಣ ಕಿರಣ
ಬೀರಿ, ಕಾಣ-
ಬರಲು, ಮುಂದು
ಕಮಲ ಬಂಧು
ಉದಿಸಿ ಬಂದು,
ಭುವನವನ್ನು
ಬೆಳಕು ಕಡಲಿ-
ನಲ್ಲಿ ತೇಲಿ-
ಸದೆಯೆ ಇರುವನೇ?
ಹರ್‍ಷಿ-
ಸದೆಯೆ ಬರುವನೇ?


ಮೂಡ ಬಾನಿ-
ನಂಚಿನಲ್ಲಿ
ಉಷೆಯು ನಿಶಿಯ
ತೆರೆಯ ತೆರೆದು,
ಕಣ್ಣ ಮಿಟುಕಿ
ನೋಡಲಾಗಿ,
ಮುಗಿದ ಮುಗುಳು
ಬಿರಿದ ಅಲರು
ಆಗಿ, ಕಂಪ
ಬೀರಿ, ಸೊಂಪ
ಸುರಿಸದಿರುವುದೇ?
ಜೇನ
ಹರಿಸದಿರುವುದೇ?


ಆರು ಬೇಡ-
ವೆನಲು ಕೂಡ,
ಆರು ಋತುವು
ಚಕ್ರದಂತೆ
ತಿರುಗಿ, ತಿರುಗಿ,
ತಿರೆಗೆ ಸಾಗಿ,
ವರ ವಸಂತ
ಹೇಽಮಂತ
ವರ್ಷ ಕಾಲ
ಬಿಸಿಲು ಗಾಲ-
ವಾಗದಿರುವುದೇ?
ಸಮಯ
ಸಾಗದಿರುವುದೇ?


ಜಗದ ಜೀವ-
ಯಾತ್ರೆಯಲ್ಲಿ
ವಿಧಿಯದೃಷ್ಟ.
ವಾಗಿ ನಿಂದು,
ಕಾಣದಿರುವ
ತನ್ನ ಕೈಯ
ಸೂತ್ರದಿಂದ
ನಿಯತವಾಗಿ,
ನಿತ್ಯವಾಗಿ,
ಲೋಕವನ್ನು
ನಡೆಸದಿರುವುದೇ?
ಜಯವ
ಪಡೆಯದಿರುವುದೇ?
*****
೧೯೩೫

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...