Home / ಕವನ / ಕವಿತೆ / ಓ! ಪುಟ್ಟಹಕ್ಕಿ!

ಓ! ಪುಟ್ಟಹಕ್ಕಿ!


ನಿಸರ್ಗವನದಲಿ, ಕಂಗೊಳಿವ ಕಾನನದಿ
ಕುಳಿತು ಕೂಗುವ ನೀ! ಪುಟ್ಟಹಕ್ಕಿ!
ಪ್ರೇಮಮಯ ಪತಿತಪಾವನವ ನೀ! ಹಾಡು
ಓ! ಪುಟ್ಟ ಹಕ್ಕಿ!
ಓ! ನಿನ್ನ ಉತ್ತೇಜ ಉತ್ಸಾಹವನು ಹಾಡಿ!
ಓ! ನಿನ್ನ ಗಾನಚಿಲುಮೆಯನು ತೋಡಿ!
ಪತಿತಪಾವನವ ನೀ! ಹಾಡು
ಓ! ಪುಟ್ಟ ಹಕ್ಕಿ!


ಸುಂದರ ವನದಲಿ, ಕಣಿವೆಕಂದರ ಛಾಯೆಯಲಿ
ಮಧುರಮರಗಿಣಿ ನೀ! ಪುಟ್ಟ ಹಕ್ಕಿ!
ವನದಲಿಹರಿವ ತಣಿವತೊರೆಯ ನೀ! ಹಾಡು
ಓ! ಪುಟ್ಟ ಹಕ್ಕಿ!
ಓ! ನಿನ್ನ ಮಧುರ ಸವಿಗಾನವನು ಬೆರಸಿ!
ಓ! ನಿನ್ನ ಒಲುಮೆಯನು ಅದರಲಿರಿಸಿ!
ತಣಿವತೊರೆಯ ನೀ! ಹಾಡು
ಓ! ಪುಟ್ಟ ಹಕ್ಕಿ!


ವನದವೇದಿಯಲಿ, ವೈಭವವಿಶಾಲದಲಿ
ನೆಲೆಸಿನಲಿಯುವ ನೀ! ಪುಟ್ಟ ಹಕ್ಕಿ!
ಸವಿಸಲ್ಲಾಪ ಸಂಪಿಗೆಯ ನೀ! ಹಾಡು
ಓ! ಪುಟ್ಟ ಹಕ್ಕಿ!
ಓ! ನಿನ್ನ ರಾಗದೂಟೆಯನು ಪಠಿಸಿ!
ಓ! ನಿನ್ನ ವಿಶಾಲವೈಭವವ ವಲಿಸಿ!
ಸಲ್ಲಾಪಸಂಪಿಗೆಯ ನೀ! ಹಾಡು
ಓ! ಪಟ್ಟ ಹಕ್ಕಿ!


ಎಳೆಹಸುರಿನಲಿ, ಮೃದುಮಮತೆಯಲಿ
ಸೇರಿಸಾಗುವ ನೀ! ಪುಟ್ಟ ಹಕ್ಕಿ!
ನಲುವುನಾಟ್ಯದ ಹರಿಣನನು ನೀ! ಹಾಡು
ಓ! ಪುಟ್ಟ ಹಕ್ಕಿ!
ಓ! ನಿನ್ನ ದೀರ್ಘಧಾಟಿಯನು ಎಳೆದು!
ಓ! ನಿನ್ನ ಮಾಗಧನಹಿಮೆಯನು ಸೆಳೆದು!
ನಾಟ್ಯದ ಹರಿಣನನು ನೀ! ಹಾಡು
ಓ! ಪಟ್ಟ ಹಕ್ಕಿ!


ಸ್ಥಾಯಿನಿಲುವಿಕೆಯಲ್ಲಿ, ಕೌಶಲ್ಯ ಜಾಜ್ವಲ್ಯದಲಿ
ಉಲಿಉಲಿವ ನೀ! ಪುಟ್ಟ ಹಕ್ಕಿ!
ನೇಮನಿಸರ್ಗದ ಮಹಿಮೆ ನೀ! ಹಾಡು
ಓ! ಪುಟ್ಟ ಹಕ್ಕಿ!
ಓ! ನಿನ್ನ ಕೋಮಲಕಂಠದಿಂ ಕೋರಿ!
ಓ! ನಿನ್ನ ಮೃದುಮಮತೆಯನು ತೋರಿ!
ನಿಸರ್ಗದಮಹಿಮೆ ನೀ! ಹಾಡು
ಓ! ಪುಟ್ಟ ಹಕ್ಕಿ!
*****

Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...