Home / ಕವನ / ಕವಿತೆ / ತಂಗದಿರ!

ತಂಗದಿರ!

ವಾರ್ಧಿಕ

ಮುಗಿಲುಗಳ ಮೆಟ್ಟಲಿನ ಮೇಲೆ ಮೆಲುನಡಿಗೆಯಲಿ
ನಗು ನಗುತ ಬಿಡದೇರಿ ಬರುತಿರುವೆ ತ೦ಗದಿರ!
ಒಗುಮಿಗೆಯ ಗಮನದಲಿ ಹೋಗುತಿಹೆ ಯಾವೆಡೆಗೆ?
ಗುರಿಯೇನು ಗುರುತಿಲ್ಲವೇ?
ಸೊಗದ ಸನ್ಮಾಂತ್ರಿಕದ ಮಾಟದನುಭವದಿಂದ
ಮೊಗವು ವಿಕಸಿತವಾಗಿ ತೋರುವುದು. ಶಶಿ! ನಿನ್ನ
ಸೊಗಸುಗಾರ್ತಿಯ ಮಡದಿ ರೋಹಿಣಿಯ ಬಳಿಗೆಂದು
ವಿಹರಿಸಲು ಪೋಪೆಯೇನು?


ಅನುದಿನವು ವಿಧು! ನೀನು ಮೂಡುತಿಹೆ-ಮುಳುಗುತಿಹೆ,
ಮನಸಿನೊಳಗಿದಕಾಗಿ ಬೇಸರಿಸಿ, ಬಿದಿಯೊಡನೆ
ಅನುನಯದಿ ಮಾಸಕೊ೦ದಾವರ್ತಿ ದಿನವೊಂದ
‘ರಜೆ’ ಯೆಂದು ಪಡೆದೆಯೇನು?
ಇನನೊಂದು ವಿಧಿಯಿಂದ ಇನಿತೊಂದು ತಪ್ಪದೇ
ದಿನ ದಿನಂ ಮೂಡುವಂ-ಬಾಡುವಂ; ಶಶಿ! ನೀನು
ಹುಣ್ಣಿಮೆಯ ಬಿಟ್ಟುಳಿದ ರಜನಿಯಲಿ ಅನಿತಿನಿತು
ಬೆಳಗಿ ಮರೆಯಾಗುವೇಕೆ?


ನೀನೋಷಧೀಶನಾಗಿರುವೆಯಾದುದರಿಂದ,
ಸಾನುರಾಗದಿ ತರು-ಲತಾಳಿ ಸಸ್ಯಗಳೆಲ್ಲ
ಆನನವನೊಲೆಯುತ್ತಲಿರುತಿಹವು ನಿನ್ನಮೃತ
ಕಿರಣ ಶೀತ ಸ್ಪರ್ಶದಿಂ.
ಕಾನನದಿ ಮಲ್ಲಿಗೆಯು ಮೊದಲಾದ ಕುಸುಮಗಳು
ಸಾನಂದದಿ೦ದ ನಗು ನಗುತ ನೀರಾಜನವ-
ನಾನುವಂತೆಸೆಯುತಿವೆ; ಶಶಿ! ನಿನಗೆ, ನೀನೆಸಗಿ
ದುಪಕಾರದರಿವಿಗಾಗಿ.


ಎತ್ತಲೂ ತಿರೆಯನ್ನು ತೀವಿ ಜೊನ್ನದ ಸರಿಯು
ಸುತ್ತಲಿಡಿದತಿ ಶೋಭೆಯಾಂತೆಸೆವ ಬಿಳಿ ಮೊಸರ
ಮೊತ್ತ ಚೆಲ್ಲಿದ ತೆರದಿ ಬಿತ್ತರವನಾಂತಿಹುದು.
ಆದರೂ ತಂಗದಿರನೇ!
ಕತ್ತಲೆಯ ಕಾಲವಾದುದರಿಂದ ಮರಗಳಡಿ-
ಯತ್ತ ಬಿದ್ದೊರಗಿಹುದು ನೆರಳ ಕಾಳಿಮೆಯದನು
ಕಿತ್ತಳಿಸಿ ಬಿಸುಡಲಾರದೆ, ನಾಚಿ, ಮೊಗದಲ್ಲಿ
ಮಾಲಿನ್ಯವನ್ನಾಂತೆಯೆ?


ತೊಳತೊಳಗಿ, ಬೆಳಬೆಳಗಿ, ಕಳೆವೆತ್ತು ಪೊಳೆಯುತಿಹೆ!
ಕಿಲಕಿಲನೆ ನಗುನಗುತ ಹಾಸ್ಯರೋಚಿಯನೆಲ್ಲ
ಬಳಿಗಳಿಗು ಪಸರಿಸುತ್ತ, ಸಂತೋಷ ಸಾಗರದೊ-
ಳೋಲಾಡಿ ತೇಲಾಡುತ.
ಒಲಿಯುತ್ತ, ನಲಿಯುತ್ತ, ಮುಗಿಲುಗಳ ಮರೆಯಲ್ಲಿ
ನೆಲಸುತ್ತ, ಹೊರಬರುತ, `ಕಣ್ಣ ಮುಚ್ಚಾಲೆ’ ಯಲಿ
ಲಲಿತ ಲೀಲೆಯನಾಂತು, ಬಾಲಕೇಳಿಯ ನಟಿಸಿ,
ಮೆರೆವೆಯೇಂ ತಂಗದಿರನೇ?
*****
೧೯೩೭

Tagged:

Leave a Reply

Your email address will not be published. Required fields are marked *

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...