Home / ಕವನ / ಕವಿತೆ / ಸರಸ್ವತಿಗೆ

ಸರಸ್ವತಿಗೆ

ಜಗಭಾಂಡ ತುಂಬಿ ತುಳುಕುವ
ಸೊಗಸೆಂಬೀ ಸೋಮವನ್ನು ಸೊಗದಿಂ ಕುಡಿದು
ನಗೆ ನಗುತ ನುಡಿಯನಾಡುವ
ಬಗೆಯೇ ಬಗೆ, ನಿನ್ನ ‘ಕಾವ್ಯ ಸೇವೆ’ ಯ ಬಿರುದು!
ಕನ್ನಡ ಕಂದನು ನಾನೈ
ಉನ್ನತ ಉದಾತ್ತ ಭರತ ಬಾಲನು ನಾನೇ!
ಸನ್ನುತ ವಿಶ್ವಕುಮಾರನು,
ನನ್ನಿಯ ಜಗದಂತರಾತ್ಮಶಿಶುವೂ ತಾನೇ!
ಅನಿಸಲಿ ಅನಿಸಲಿ ಜಗವೆನ-
ಗನಿ- ಅನಿಸಲಿ ತಾಯೆ ಜನಿಸಲನಿಸಿಕೆಯಿಂದು!
ನನಗೆ ವರ ನೀಡು ರಸವತಿ
ಅನಿಸಿಕೆಯಾ ಜಗದ ಮಗನು ಆಗಲಿ ಎಂದು!
ಎರಕವು ಮರುಗಲು ಬರುವದೆ
ಇರುತಿಹುದದು ಅಂತರಂಗದಂಕುರಮೊಂದು!
ನರನಿದರ ನೆರವಿನಿಂದಲೆ
ನೆರೆಯೆಲ್ಲರನೆನ್ನ ಬಲ್ಲ ತನ್ನವರೆಂದು !
ಕನ್ನಡ ಕಂದನ ಮನದೊಳು
ನನ್ನಿಯು ನೀನಾಗಿ ಕವನ ನೆನಿಸುವ ಕನಸು
ಚಿನ್ನದ ರನ್ನದ ಮುಗಿಲಿನ
ಬಣ್ಣಂಗಳ ಬಗೆಯೊಳೀಗ ಬೀಳುತಲಿಹುದು!
ಮನಸಿನ ಕರುಳಿನ ಕನಸನು
ನನಸನು ಮಾಡವ್ವ! ಅಂತರಂಗದಿ ಮೂಡೌ!
ಇನಿದಾಗಿ ಹರಿವ ರಸಗಳು
ಜನಿಸಲಿ ನನಸಿನಲಿ! ನನಸು ಕನಸಿನ ಗೊನೆಯು!
‘ಸತ್ಯವು ಸೊಬಗೇ; ಸೊಬಗೂ
ಸತ್ಯವು’ ‘ಸೊಬಗುಳ್ಳ ಸುದ್ದಿ ಸೊಗಸಿನ ಸೂರಿ’!
ನಿತ್ಯದೊಳೀ ಮಂತ್ರವ ಜಪಿ-
ಸುತ್ತಿರಲೀ ಸತ್ಯ ಸೃಷ್ಟಿ ಸೊಬಗಿನ ಸೃಷ್ಟಿ !
*****
Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...