Home / ಲೇಖನ / ಇತರೆ / ೫೧ ಎರಿಡನಿ ಬಿ ಗ್ರಹ

೫೧ ಎರಿಡನಿ ಬಿ ಗ್ರಹ

ಮೊನ್ನೆ ಆಗಸ್ಟ್ ೨೦೧೫ ರ ಸೈನ್ಸ್ ಪತ್ರಿಕೆಯನ್ನು ಬಹಳ ಕುತೂಹಲದಿಂದ ಓದುತ್ತಿದ್ದೆ. ನನಗೆ ಚಿಕ್ಕಂದಿನಿಂದಲೂ ಸೈನ್ಸ್ ಬಗ್ಗೆನೂ ತೀವ್ರ ಆಸಕ್ತಿ.

ಭವ್ಯ ಭಾರತದ ಮೂಲ ಇಬ್ಬರು ಮಹಾ ವಿಜ್ಞಾನಿಗಳಿದ್ದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಂಡವೊಂದು ಲಾಸ್ ಎಂಜಲಿಸ್‌ನಲ್ಲಿ ಭೂಮಿಯಿಂದ ೧೦೦ ಜ್ಯೋರ್ತಿವರ್ಷ ಸೆಕೆಂಡ್‌ಗೆ ೩.೮೬ ಲಕ್ಷ ಕಿಲೋಮೀಟರ್ ವೇಗದಲ್ಲಿ ಒಂದು ವರ್ಷ ಸವೆಸುವ ದೂರದೂರ ಬಹುದೂರದಲ್ಲಿ ಮಿಥೇನ್ ಭರಿತ ಗ್ರಹವೊಂದನ್ನು ಪತ್ತೆ ಮಾಡಿರುವರು.

ಓದುತ್ತಾ ಓದುತ್ತಾ ಅಬ್ಬಾ! ಎಂದೆ. ವಿಜ್ಞಾನಿಗಳೆ ಹೀಗೆ ಯಾರೂ ಪತ್ತೆ ಹಚ್ಚದ್ದನ್ನು ಪತ್ತೆ ಹಚ್ಚಿ ಸಂಭ್ರಮಿಸುವರು.

ಈ ಗ್ರಹ ಸಂಪೂರ್ಣವಾಗಿ ಮಿಥೇನ್‌ನಿಂದ ಕೂಡಿದೆ. ಇದನ್ನು “೫೧ ಎರಿಡನಿ ಬಿ ಗ್ರಹ” ಎಂದು (ಕೂಸು) ಕರೆದಿರುವರು. ಇದು ಗುರು ಗ್ರಹದಂತಿರುವುದರಿಂದ ಇದನ್ನು ಗುರು ಗ್ರಹದ “ತಮ್ಮ” ಎಂದಿರುವರು.

ಭಲೇ ಭಲೇ ವಿಜ್ಞಾನಿಗಳೂ ಕೂಡಾ ಒತ್ತಡವನ್ನು ನಿವಾರಿಸಿಕೊಳ್ಳಲು ಏನೆಲ್ಲ ಪರಿಭಾಷೆಯಲ್ಲಿ ಕರೆದು ನಗುವರಲ್ಲದೆ, ಈ ಗ್ರಹದಲ್ಲಿ ನೀರಿರುವ ಬಗ್ಗೆ ಸಂಶಯ ವ್ಯಕ್ತ ಪಡಿಸಿರುವರು.

ಈ ಗ್ರಹ ಸುಮಾರು ೨ ಕೋಟಿ ವರ್ಷಗಳಷ್ಟು ಹಳೆಯದೆಂದು ಅಭಿಪ್ರಾಯ ಪಟ್ಟಿರುವರು.

ನಕ್ಷತ್ರಗಳ ಸುತ್ತ ದೈತ್ಯ ಅನಿಲ ಗ್ರಹಗಳು ರೂಪುಗೊಳ್ಳುವ ಪ್ರಕ್ರಿಯೆಯನ್ನು ಈ ಗ್ರಹದ ಸ್ಥಿತಿಯನ್ನು ಆಧರಿಸಿ ಅರಿಯಬಹುದೆಂದು ಹತ್ತಿರದ ನಕ್ಷತ್ರಗಳನ್ನು ಸುತ್ತುತ್ತಿರುವ ಗ್ರಹಗಳನ್ನು ಪತ್ತೆ ಮಾಡುವ ಘನ ಉದ್ದೇಶದಿಂದ ರೂಪಿಸಿರುವ “ಜೆಮಿನಿ ಪ್ಲಾನೆಟ್ ಇಮೇಜರ್” ನಿಂದ ಪತ್ತೆ ಮಾಡಿರುವ ಮೊತ್ತ ಮೊದಲ ಗ್ರಹವಿದೆಂದು ವಿಜ್ಞಾನಿಗಳ ತಂಡ ತಮ್ಮ ಸಂಶೋಧನೆಯ ವಿವರಗಳನ್ನು ಹಂಚಿಕೊಂಡಿದೆ.

ಜೆಪಿ‌ಐನಲ್ಲಿರುವ ಅತ್ಯಾಧುನಿಕ ಸ್ಪೆಕ್ಟ್ರೊ ಮೀಟರ್‌ನ ಸಹಾಯದಿಂದ ಈ ಗ್ರಹದಲ್ಲಿ ಮಿಥೇನ್ ಅಂಶವಿರುವುದನ್ನು ಪತ್ತೆ ಮಾಡಲಾಗಿದೆಯೆಂದು ವಿಜ್ಞಾನಿಗಳ ತಂಡ ಹೇಳಿದೆಯಲ್ಲದೆ, ಈತನಕ ನಮ್ಮ ಹಾಲು ಹಾದಿಯ ಹೊರಗಿನ ಆಕಾಶ ಗಂಗೆಯಲ್ಲಿ ಪತ್ತೆಯಾಗಿರುವ ಅತ್ಯಂತ ಹೆಚ್ಚಿನ ಮಿಥೇನ್ ಸಾಂದ್ರತೆಯಿರುವ ಗ್ರಹವಾಗಿದೆ ಎಂದಿರುವರು!

ಈ ಗ್ರಹದಲ್ಲಿ ನೀರಿದೆ ಮಿಥೇನ್ ಇದೆ. ಹೀಗಾಗಿ ಇತರೆ ನಮ್ಮ ಸೌರವ್ಯೂಹದ ಗ್ರಹಗಳಲ್ಲಿರುವಂತೆ ತಂಪಿದೆ. ಇಲ್ಲಿ ೪೨೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಇತರೆ ಗ್ರಹಗಳಲ್ಲಿ ೫೩೭ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆಯೆಂದು ಭವ್ಯ ಭಾರತದ ಮೂಲ ವಿಜ್ಞಾನಿಗಳಾದ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದ ರಾಹುಲ್ ಪಟೇಲ್ ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸಸ್ ಇನ್ಸ್‌ಟಿಟ್ಯೂಟ್‌ನ ಅಭಿಜಿತ್‌ ರಾಜನ್‌ ಅವರೆಲ್ಲ ಸೇರಿ ಈ ಸಂಶೋಧನೆ ಕೈಗೊಂಡು ಸಫಲರಾಗಿರುವರು.

ಈ ತಂಡದಲ್ಲಿ ಭವ್ಯ ಭಾರತದ ವಿಜ್ಞಾನಿಗಳಿದ್ದಾರೆಂಬುದೇ ಹೆಮ್ಮೆಯ ಸಂಗತಿಯಲ್ಲವೇ?

ಈಗೀಗ ಭಾರತ ದೇಶ ಯಾವುದರಲ್ಲಿ ಕಮ್ಮಿಯಿಲ್ಲ ಅಲ್ಲವೇ??
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...